<p><strong>ಭದ್ರಾವತಿ</strong>: ‘ಇಂದು ನಾವು ಕಲಿಯುತ್ತಿರುವ ಇತಿಹಾಸ ರಾಜಕೀಯ ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಓಲೈಕೆಗಾಗಿ ತಿರುಚಿ ಬರೆದ ಇತಿಹಾಸ. ದೇಶದ ನೈಜ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ’ ಎಂದು ಇತಿಹಾಸಕಾರ ಟಿ.ಎನ್. ಸ್ವಾಮಿ ಹೇಳಿದರು.</p>.<p>ನಗರದ ಗಾಂಧಿನಗರ ತರುಣ ಭಾರತಿ ಶಾಲೆಯಲ್ಲಿ ಪ್ರೇರಣಾ ಸಂಸ್ಥೆಯಿಂದ ಈಚೆಗೆ ಏರ್ಪಡಿಸಿದ್ದ ‘ಭಾರತ ದರ್ಶನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.</p>.<p>‘ಸನಾತನ ದೇಶದಲ್ಲಿ ಪ್ರತಿಯೊಂದು ವಸ್ತುಗಳು, ಸ್ಥಳಗಳು ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಆದರೆ ಅದರ ಮಹತ್ವವನ್ನು ನೈಜವಾಗಿ ತಿಳಿಯದೆ, ವಿದೇಶಿಗರು ತಿಳಿಸಿದ ಮಾಹಿತಿಯನ್ನು ನಿಜವೆಂದು ನಂಬಿ, ಅದೇ ಪ್ರಾಮುಖ್ಯ ಎಂದು ಮಾನ್ಯ ಮಾಡಿ, ಅದನ್ನು ಅನುಸರಿಸುತ್ತಿರುವುದು ದೇಶದ ದೌರ್ಭಾಗ್ಯ’ ಎಂದರು.</p>.<p>‘ನಾವು ಧಾರ್ಮಿಕ ಕ್ಷೇತ್ರಗಳ ಪ್ರಾಮುಖ್ಯ ಅರಿಯದೆ ಪ್ರವಾಸೋದ್ಯಮ ಎಂದು ಪರಿಗಣಿಸುವ ಕಾರಣ ಭವಿಷ್ಯದಲ್ಲಿ ಅದರ ಮಹತ್ವ ನಶಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಗೋವಾ, ಗೋಕರ್ಣ ಕ್ಷೇತ್ರಗಳು’ ಎಂದರು.</p>.<p>‘ನಮ್ಮ ಸಂತರು, ಋಷಿಮುನಿಗಳು, ಮಹರ್ಷಿಗಳು, ಆಚಾರ್ಯರು ನಾಡಿಗೆ ತಮ್ಮದೇ ಆದ ಸಂಶೋಧನೆಗಳು ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅವರ ಕೊಡುಗೆ ವೈಜ್ಞಾನಿಕ ಎಂದು ಪರಿಗಣಿಸಿದ ಕಾರಣ ವಿದೇಶಿ ಸರಕನ್ನೇ ಮಾನ್ಯ ಮಾಡುತ್ತಿದ್ದೇವೆ’ ಎಂದರು.</p>.<p>ಉಪನ್ಯಾಸಕರಾದ ಮಂಗಳ ಗೌರಿ, ಯೋಗೇಶ್, ತರಣ ಭಾರತಿ ವಿದ್ಯಾ ಕೇಂದ್ರದ ಕಾರ್ಯದರ್ಶಿಯಾದ ಗಿರೀಶ್, ಎಸ್.ಎನ್.ಸುಭಾಷ್, ಮಧುಕರ್, ರಾಮಚಂದ್ರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ</strong>: ‘ಇಂದು ನಾವು ಕಲಿಯುತ್ತಿರುವ ಇತಿಹಾಸ ರಾಜಕೀಯ ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಓಲೈಕೆಗಾಗಿ ತಿರುಚಿ ಬರೆದ ಇತಿಹಾಸ. ದೇಶದ ನೈಜ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ’ ಎಂದು ಇತಿಹಾಸಕಾರ ಟಿ.ಎನ್. ಸ್ವಾಮಿ ಹೇಳಿದರು.</p>.<p>ನಗರದ ಗಾಂಧಿನಗರ ತರುಣ ಭಾರತಿ ಶಾಲೆಯಲ್ಲಿ ಪ್ರೇರಣಾ ಸಂಸ್ಥೆಯಿಂದ ಈಚೆಗೆ ಏರ್ಪಡಿಸಿದ್ದ ‘ಭಾರತ ದರ್ಶನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.</p>.<p>‘ಸನಾತನ ದೇಶದಲ್ಲಿ ಪ್ರತಿಯೊಂದು ವಸ್ತುಗಳು, ಸ್ಥಳಗಳು ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಆದರೆ ಅದರ ಮಹತ್ವವನ್ನು ನೈಜವಾಗಿ ತಿಳಿಯದೆ, ವಿದೇಶಿಗರು ತಿಳಿಸಿದ ಮಾಹಿತಿಯನ್ನು ನಿಜವೆಂದು ನಂಬಿ, ಅದೇ ಪ್ರಾಮುಖ್ಯ ಎಂದು ಮಾನ್ಯ ಮಾಡಿ, ಅದನ್ನು ಅನುಸರಿಸುತ್ತಿರುವುದು ದೇಶದ ದೌರ್ಭಾಗ್ಯ’ ಎಂದರು.</p>.<p>‘ನಾವು ಧಾರ್ಮಿಕ ಕ್ಷೇತ್ರಗಳ ಪ್ರಾಮುಖ್ಯ ಅರಿಯದೆ ಪ್ರವಾಸೋದ್ಯಮ ಎಂದು ಪರಿಗಣಿಸುವ ಕಾರಣ ಭವಿಷ್ಯದಲ್ಲಿ ಅದರ ಮಹತ್ವ ನಶಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಗೋವಾ, ಗೋಕರ್ಣ ಕ್ಷೇತ್ರಗಳು’ ಎಂದರು.</p>.<p>‘ನಮ್ಮ ಸಂತರು, ಋಷಿಮುನಿಗಳು, ಮಹರ್ಷಿಗಳು, ಆಚಾರ್ಯರು ನಾಡಿಗೆ ತಮ್ಮದೇ ಆದ ಸಂಶೋಧನೆಗಳು ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅವರ ಕೊಡುಗೆ ವೈಜ್ಞಾನಿಕ ಎಂದು ಪರಿಗಣಿಸಿದ ಕಾರಣ ವಿದೇಶಿ ಸರಕನ್ನೇ ಮಾನ್ಯ ಮಾಡುತ್ತಿದ್ದೇವೆ’ ಎಂದರು.</p>.<p>ಉಪನ್ಯಾಸಕರಾದ ಮಂಗಳ ಗೌರಿ, ಯೋಗೇಶ್, ತರಣ ಭಾರತಿ ವಿದ್ಯಾ ಕೇಂದ್ರದ ಕಾರ್ಯದರ್ಶಿಯಾದ ಗಿರೀಶ್, ಎಸ್.ಎನ್.ಸುಭಾಷ್, ಮಧುಕರ್, ರಾಮಚಂದ್ರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>