<p><strong>ಹೊಸದುರ್ಗ</strong>: ‘ಸರ್ಕಾರವು ನಮಗೆ ನೀಡಿರುವ ಭೂಮಿಯನ್ನು ಪ್ರಭಾವಿಗಳು 45 ವರ್ಷಗಳಿಂದ ಉಳುಮೆ ಮಾಡಲು ಬಿಡುತ್ತಿಲ್ಲ. ನಮ್ಮ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಜಮೀನಿಗೆ ಉಳುಮೆ ಮಾಡಲು ಹೋದರೆ ಹಲ್ಲೆ ಮಾಡುತ್ತಾರೆ’ ಎಂದು ನಾಗತಿಹಳ್ಳಿ ರೈತರು ತಾಲ್ಲೂಕು ರೈತ ಸಂಘಟನೆ ಮುಖಂಡರೊಂದಿಗೆ ತಹಶೀಲ್ದಾರ್ ಬಳಿ ಅಳಲು ತೋಡಿಕೊಂಡರು.</p>.<p>ರೈತ ಸಂಘದ ರಾಜ್ಯ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ‘ಈ ಹಿಂದೆ ರೈತ ಕುಟುಂಬದವರ ಮೇಲೆ ದಬ್ಬಾಳಿಕೆ ನಡೆದಾಗ, ಭೂರಹಿತರು ಉಳುಮೆ ಮಾಡಿಕೊಂಡು ಬದುಕಲಿ ಎಂದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಕೈಗೊಳ್ಳಲಾಯಿತು. ಆದರೂ ಈ ಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದ್ದು, ಉಳುಮೆ ಮಾಡಲು ಅವಕಾಶ ಕಲ್ಪಿಸದೆ, ಭಯದ ವಾತಾವರಣ ಸೃಷ್ಟಿಸಲಾಗಿದೆ. ಅವರನ್ನು ಅಡವಿಯೊಳಗೆ ಕಳಿಸಿದವರಾರು?, ಕಂದಾಯ ಇಲಾಖೆ ಭೂಮಿಯಲ್ಲಿ ಅನಗತ್ಯವಾಗಿ ಪೋಲಿಸರ ಪ್ರವೇಶ ಏಕೆ?. ರೈತರ ಶೆಡ್ಗಳ ಧ್ವಂಸ ಮಾಡುವ ಅಧಿಕಾರ ಕೊಟ್ಟವರಾರು’ ಎಂದು ಪ್ರಶ್ನಿಸಿದರು.</p>.<p>‘ರೈತರು 15ರಿಂದ 20 ವರ್ಷ ಸಾಗುವಳಿ ಮಾಡುತ್ತಿದ್ದರು. ನಂತರ ಅವರನ್ನು ಬೆದರಿಸಿ ಹೊರಗಡೆ ಕಳುಹಿಸಿದ್ದಾರೆ. ಭೂಮಿ ಹೆಸರಿನಲ್ಲಿದ್ದರೂ, ಸಾಗುವಳಿ ಮಾಡಲಾಗಿಲ್ಲ. ಪ್ರಾಮಾಣಿಕವಾಗಿ ಬದುಕಲು ಉಳುಮೆ ಮಾಡಿಕೊಳ್ಳಲು ಅವಕಾಶವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.</p>.<p>‘ಕೃಷಿ ಮಾಡುತ್ತಿರುವ ಸ್ಥಳ ಪರಿಶೀಲನೆ ಮಾಡಿ, ಶೆಡ್ ಹಾಕಿರೋದನ್ನು ನೋಡಿ ತಹಶೀಲ್ದಾರ್ ವಸ್ತುನಿಷ್ಠ ವರದಿ ನೀಡಲಿ. ನಮ್ಮ ರೈತರು ಯಾವುದೇ ಕಾನೂನು ಕೈಗೆತ್ತಿಕೊಳ್ಳುವವರಲ್ಲ. ತಮ್ಮ ಜೀವನಕ್ಕಾಗಿ ಬದುಕಲು ಕೃಷಿ ಮಾಡುತ್ತಿದ್ದಾರೆ. ಕೃಷಿ ನಂಬಿರುವವರು ಬದುಕಲೇಬೇಕು’ ಎಂದು ಒತ್ತಾಯಿಸಿದರು.</p>.<p>‘ವಿವಿ ಸಾಗರ ಭರ್ತಿಯಾದಾಗ ಸಂತ್ರಸ್ತರಿಗೆ, ಭೂರಹಿತರಿಗೆ ಜಿಲ್ಲಾಡಳಿತ ಮಾನವೀಯತೆ ಮೆರೆಯಬೇಕು. ಕಳೆದ ವರ್ಷ ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದಾನೆ. ಭೂಮಿ ಸಾಗುವಳಿ ಮಾಡುತ್ತಿರುವವರು ಅಪರಾಧಿಗಳಲ್ಲ, ಅನಪೇಕ್ಷಿತವಾಗಿ ಪೊಲೀಸರು ರೈತರ ಜಮೀನಿನ ಬಳಿ ಹೋಗುವುದು ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ತಿರುಪತಿ ಪಾಟೀಲ್, ‘ಸ್ಥಳ ಪರಿಶೀಲನೆ ನಡೆಸಿ, ನೈಜ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಎಲ್ಲರೂ ಶಾಂತಿಯುತವಾಗಿರಬೇಕು’ ಎಂದು ರೈತರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>: ‘ಸರ್ಕಾರವು ನಮಗೆ ನೀಡಿರುವ ಭೂಮಿಯನ್ನು ಪ್ರಭಾವಿಗಳು 45 ವರ್ಷಗಳಿಂದ ಉಳುಮೆ ಮಾಡಲು ಬಿಡುತ್ತಿಲ್ಲ. ನಮ್ಮ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಜಮೀನಿಗೆ ಉಳುಮೆ ಮಾಡಲು ಹೋದರೆ ಹಲ್ಲೆ ಮಾಡುತ್ತಾರೆ’ ಎಂದು ನಾಗತಿಹಳ್ಳಿ ರೈತರು ತಾಲ್ಲೂಕು ರೈತ ಸಂಘಟನೆ ಮುಖಂಡರೊಂದಿಗೆ ತಹಶೀಲ್ದಾರ್ ಬಳಿ ಅಳಲು ತೋಡಿಕೊಂಡರು.</p>.<p>ರೈತ ಸಂಘದ ರಾಜ್ಯ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ‘ಈ ಹಿಂದೆ ರೈತ ಕುಟುಂಬದವರ ಮೇಲೆ ದಬ್ಬಾಳಿಕೆ ನಡೆದಾಗ, ಭೂರಹಿತರು ಉಳುಮೆ ಮಾಡಿಕೊಂಡು ಬದುಕಲಿ ಎಂದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಕೈಗೊಳ್ಳಲಾಯಿತು. ಆದರೂ ಈ ಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದ್ದು, ಉಳುಮೆ ಮಾಡಲು ಅವಕಾಶ ಕಲ್ಪಿಸದೆ, ಭಯದ ವಾತಾವರಣ ಸೃಷ್ಟಿಸಲಾಗಿದೆ. ಅವರನ್ನು ಅಡವಿಯೊಳಗೆ ಕಳಿಸಿದವರಾರು?, ಕಂದಾಯ ಇಲಾಖೆ ಭೂಮಿಯಲ್ಲಿ ಅನಗತ್ಯವಾಗಿ ಪೋಲಿಸರ ಪ್ರವೇಶ ಏಕೆ?. ರೈತರ ಶೆಡ್ಗಳ ಧ್ವಂಸ ಮಾಡುವ ಅಧಿಕಾರ ಕೊಟ್ಟವರಾರು’ ಎಂದು ಪ್ರಶ್ನಿಸಿದರು.</p>.<p>‘ರೈತರು 15ರಿಂದ 20 ವರ್ಷ ಸಾಗುವಳಿ ಮಾಡುತ್ತಿದ್ದರು. ನಂತರ ಅವರನ್ನು ಬೆದರಿಸಿ ಹೊರಗಡೆ ಕಳುಹಿಸಿದ್ದಾರೆ. ಭೂಮಿ ಹೆಸರಿನಲ್ಲಿದ್ದರೂ, ಸಾಗುವಳಿ ಮಾಡಲಾಗಿಲ್ಲ. ಪ್ರಾಮಾಣಿಕವಾಗಿ ಬದುಕಲು ಉಳುಮೆ ಮಾಡಿಕೊಳ್ಳಲು ಅವಕಾಶವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.</p>.<p>‘ಕೃಷಿ ಮಾಡುತ್ತಿರುವ ಸ್ಥಳ ಪರಿಶೀಲನೆ ಮಾಡಿ, ಶೆಡ್ ಹಾಕಿರೋದನ್ನು ನೋಡಿ ತಹಶೀಲ್ದಾರ್ ವಸ್ತುನಿಷ್ಠ ವರದಿ ನೀಡಲಿ. ನಮ್ಮ ರೈತರು ಯಾವುದೇ ಕಾನೂನು ಕೈಗೆತ್ತಿಕೊಳ್ಳುವವರಲ್ಲ. ತಮ್ಮ ಜೀವನಕ್ಕಾಗಿ ಬದುಕಲು ಕೃಷಿ ಮಾಡುತ್ತಿದ್ದಾರೆ. ಕೃಷಿ ನಂಬಿರುವವರು ಬದುಕಲೇಬೇಕು’ ಎಂದು ಒತ್ತಾಯಿಸಿದರು.</p>.<p>‘ವಿವಿ ಸಾಗರ ಭರ್ತಿಯಾದಾಗ ಸಂತ್ರಸ್ತರಿಗೆ, ಭೂರಹಿತರಿಗೆ ಜಿಲ್ಲಾಡಳಿತ ಮಾನವೀಯತೆ ಮೆರೆಯಬೇಕು. ಕಳೆದ ವರ್ಷ ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದಾನೆ. ಭೂಮಿ ಸಾಗುವಳಿ ಮಾಡುತ್ತಿರುವವರು ಅಪರಾಧಿಗಳಲ್ಲ, ಅನಪೇಕ್ಷಿತವಾಗಿ ಪೊಲೀಸರು ರೈತರ ಜಮೀನಿನ ಬಳಿ ಹೋಗುವುದು ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ತಿರುಪತಿ ಪಾಟೀಲ್, ‘ಸ್ಥಳ ಪರಿಶೀಲನೆ ನಡೆಸಿ, ನೈಜ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಎಲ್ಲರೂ ಶಾಂತಿಯುತವಾಗಿರಬೇಕು’ ಎಂದು ರೈತರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>