<p><strong>ಚಿತ್ರದುರ್ಗ</strong>: ಗಮಕ ಕಲೆಗೆ ಜೀವ ತುಂಬುತ್ತಿರುವ ‘ಗಮಕ ಕಲಾಭಿಮಾನಿಗಳ ಸಂಘ’ ಜಿಲ್ಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಹೊಸ ಪೀಳಿಗೆಯ ಮಕ್ಕಳ ಮನಸ್ಸುಗಳಲ್ಲಿ ಕಲೆ, ಕಾವ್ಯ, ವಾಚನ, ವ್ಯಾಖ್ಯಾನ, ಗಾಯನ ಪ್ರೀತಿ ಬಿತ್ತುವಲ್ಲಿ ಯಶಸ್ವಿಯಾಗಿದೆ. </p>.<p>ಕಾವ್ಯ ಪರಂಪರೆಯಲ್ಲಿ ಪ್ರಾಚೀನ ಇತಿಹಾಸ ಹೊಂದಿರುವ ಗಮಕ ಕಲೆ ಇಂದಿಗೂ ತನ್ನ ಛಾಪು ಉಳಿಸಿಕೊಂಡಿದೆ. ಕವಿ ಕಟ್ಟಿದ ಕಾವ್ಯ ಛಂದಸ್ಸು, ರಸ, ಭಾವಗಳಿಗೆ ಅನುಗುಣವಾಗಿ ವಾಚಿಕ ರೂಪ ಪಡೆದು ನಾಲಿಗೆಗಳ ಮೇಲೆ ನಲಿದಾಡುತ್ತದೆ. ಕನ್ನಡ ಸಾಹಿತ್ಯ ಲೋಕದ ಹಳಗನ್ನಡ, ನವ್ಯ, ನವೋದಯ ಪ್ರಕಾರಗಳಲ್ಲೂ ನವನವೀನ ರೂಪ ಪಡೆದು ಜನಮಾನಸದಲ್ಲಿ ಉಳಿದಿದೆ.</p>.<p>ಸಮಾನ ಮನಸ್ಕ ಗಮಕ ಪ್ರೇಮಿಗಳು ಹುಟ್ಟುಹಾಕಿದ ಗಮಕ ಕಲಾಭಿಮಾನಿಗಳ ಸಂಘ ಈಗ ಸಾರ್ಥಕ 40 ವರ್ಷ ಪೂರೈಸಿ ಮುನ್ನಡೆಯುತ್ತಿದೆ. ಕಾವ್ಯ ವಾಚನ, ವ್ಯಾಖ್ಯಾನದ ಹಾದಿಯಲ್ಲಿ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಭಾವಗೀತೆ, ವಚನಗಳನ್ನು ತನ್ನೆಡೆಗೆ ಸೆಳೆದುಕೊಂಡಿದೆ. ವಾಚನ, ವ್ಯಾಖ್ಯಾನ ಅಷ್ಟೇ ಅಲ್ಲದೇ ಶ್ರವ್ಯ ರೂಪಕ, ನೃತ್ಯ ರೂಪಕ ಮಂತಾದ ಧಾರೆಗಳ ಮೂಲಕ ಜನರ ಮನಸ್ಸಿನಲ್ಲಿ ಹರಿಯುತ್ತಿದೆ. </p>.<p>ರಾಘವೇಂದ್ರರಾವ್, ಸತ್ಯನಾರಾಯಣರಾವ್ ಅವರ ನೇತೃತ್ವದಲ್ಲಿ ಸಂಘ ಬೆಂಗಳೂರಿನಲ್ಲಿ ಹುಟ್ಟು ಪಡೆದಿತ್ತು. ಶೇಷಾಚಲಯ್ಯ, ಚಂದ್ರಶೇಖರಯ್ಯ, ಕೇಶವಮೂರ್ತಿ ಮುಂತಾದವರ ಪ್ರಯತ್ನದಿಂದ ಚಿತ್ರದುರ್ಗದಲ್ಲಿ ತನ್ನ ದಾರಿ ಮುಂದುವರಿಸಿತು. ಶೇಷಾಚಲಯ್ಯ, ಚಿದಂಬರರಾವ್, ಶ್ಯಾಮಜೋಯಿಸ್ ಅಧ್ಯಕ್ಷತೆಯಲ್ಲಿ ಮುನ್ನಡೆದ ಸಂಘ ಸದ್ಯ ಕೆ.ಆರ್.ರಮಾದೇವಿ ಅವರ ಅಧ್ಯಕ್ಷತೆಯಲ್ಲಿ ಮುಂದೆ ಸಾಗುತ್ತಿದೆ.</p>.<p>ಸಂಗೀತ ವಿದುಷಿಯರಾದ ಚಂಪಕ ಶ್ರೀಧರ್, ಮೀನಾಕ್ಷಿ ಭಟ್ ಅವರು ಮಕ್ಕಳಿಗೆ ಶಾಸ್ತ್ರೀಯ ಸಂಗೀತದ ಜೊತೆಗೆ ಗಮಕ ಪಾಠವನ್ನೂ ಹೇಳಿಕೊಡುತ್ತಿದ್ದಾರೆ. ಚಿಣ್ಣರ ಧ್ವನಿ ಸಂಸ್ಕಾರ, ಸ್ಫುಟ ಸಾಹಿತ್ಯ ವಾಚನವನ್ನು ಗಮಕ ಕಲೆಗೆ ಒಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅನಂತ ಕೃಷ್ಣ, ರಾಜೀವಲೋಚನ ಮುಂತಾದ ವಾಖ್ಯಾನಕಾರರೂ ಸಾಥ್ ಕೊಟ್ಟಿದ್ದಾರೆ.</p>.<p>ಕಾವ್ಯ, ಪದ್ಯ, ವಚನ, ಜನಪದ, ಭಾವಗೀತೆಗಳನ್ನು ಗಮಕ ನೃತ್ಯರೂಪಕಕ್ಕೆ ಅಳವಡಿಸುವಲ್ಲಿ ಸಂಘ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ನಂಬಿ ಕೆಟ್ಟವರಿಲ್ಲವೋ, ಶಬರಿ ಶಂಕರ ವಿಲಾಸ, ಶ್ರೀನಿವಾಸ ಕಲ್ಯಾಣ, ಕೀಚಕ ವಧೆ, ಸಂಪೂರ್ಣ ರಾಮಾಯಣ ಮುಂತಾದ ನೃತ್ಯ ರೂಪಕಗಳನ್ನು ವೇದಿಕೆಗೆ ತರಲಾಗಿದೆ. ಜೊತೆಗೆ ತಾಳಮದ್ದಳೆ ಮಾದರಿಯಲ್ಲಿ ಕಾವ್ಯಗಳನ್ನು ವಾಚನ, ಸಂವಹನ, ನಿರೂಪಣಾ ರೀತಿಯಲ್ಲಿ ಶ್ರವ್ಯರೂಪಕವಾಗಿ ಪ್ರಸ್ತುತಪಡಿಸಲಾಗಿದೆ.</p>.<p>ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ ಬಾಲ ಗಮಕಿ, ಯುವ ಗಮಕಿ, ವ್ಯಾಖ್ಯಾನಕಾರರನ್ನು ಚಿತ್ರದುರ್ಗಕ್ಕೆ ಆಹ್ವಾನಿಸಿ ಸಂಘದ ಸದಸ್ಯರು ವೇದಿಕೆ ಕೊಟ್ಟಿದ್ದಾರೆ. ಆ ಮೂಲಕ ಸ್ಥಳೀಯ ಮಕ್ಕಳಲ್ಲೂ ಗಮಕದ ಮೇಲೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಿದ್ದಾರೆ.</p>.<p>‘ಗಮಕ ಕಲೆಯ ಮೇಲೆ ಪೋಷಕರಲ್ಲಿ ಆಸಕ್ತಿ ಬೆಳೆಸುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳನ್ನು ಹತ್ತಾರು ಚಟುವಟಿಕೆಗಳಿಗೆ ತೊಡಗಿಸುತ್ತಾರೆ. ಗಮಕ ಕಲಿಕೆಗೂ ಮಕ್ಕಳನ್ನು ಕಳುಹಿಸಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ ಹೇಳಿದರು.</p>.<p>ವಚನ ಗಾಯನ ವ್ಯಾಖ್ಯಾನ ಇಂದು ಗಮಕ ಕಲಾಭಿಮಾನಿಗಳ ಸಂಘ 40 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಜೆಸಿಆರ್ ಗಣಪತಿ ದೇವಾಲಯ ಸಮಿತಿ ಸಹಯೋಗದಲ್ಲಿ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ತಿಂಗಳ ವಚನ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಜುಲೈ 28ರಂದು ಸಂಜೆ 6 ಗಂಟೆಗೆ ಜೆಸಿಆರ್ ಗಣಪತಿ ದೇವಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಇದೇ ಪ್ರಥಮ ಬಾರಿಗೆ ಬಸವಾದಿ ಶಿವಶರಣರ ವಚನ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದ್ದು ಗಾಯಕಿ ಕೋಕಿಲ ರುದ್ರಮೂರ್ತಿ ಅವರು ವಚನ ವಾಚನ ಮಾಡಲಿದ್ದಾರೆ. ನಿವೃತ್ತ ಉಪನ್ಯಾಸಕಿ ಕವಯತ್ರಿ ಸಿ.ಬಿ. ಶೈಲಾಜಯಕುಮಾರ್ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ಗಮಕ ಕಲೆಗೆ ಜೀವ ತುಂಬುತ್ತಿರುವ ‘ಗಮಕ ಕಲಾಭಿಮಾನಿಗಳ ಸಂಘ’ ಜಿಲ್ಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಹೊಸ ಪೀಳಿಗೆಯ ಮಕ್ಕಳ ಮನಸ್ಸುಗಳಲ್ಲಿ ಕಲೆ, ಕಾವ್ಯ, ವಾಚನ, ವ್ಯಾಖ್ಯಾನ, ಗಾಯನ ಪ್ರೀತಿ ಬಿತ್ತುವಲ್ಲಿ ಯಶಸ್ವಿಯಾಗಿದೆ. </p>.<p>ಕಾವ್ಯ ಪರಂಪರೆಯಲ್ಲಿ ಪ್ರಾಚೀನ ಇತಿಹಾಸ ಹೊಂದಿರುವ ಗಮಕ ಕಲೆ ಇಂದಿಗೂ ತನ್ನ ಛಾಪು ಉಳಿಸಿಕೊಂಡಿದೆ. ಕವಿ ಕಟ್ಟಿದ ಕಾವ್ಯ ಛಂದಸ್ಸು, ರಸ, ಭಾವಗಳಿಗೆ ಅನುಗುಣವಾಗಿ ವಾಚಿಕ ರೂಪ ಪಡೆದು ನಾಲಿಗೆಗಳ ಮೇಲೆ ನಲಿದಾಡುತ್ತದೆ. ಕನ್ನಡ ಸಾಹಿತ್ಯ ಲೋಕದ ಹಳಗನ್ನಡ, ನವ್ಯ, ನವೋದಯ ಪ್ರಕಾರಗಳಲ್ಲೂ ನವನವೀನ ರೂಪ ಪಡೆದು ಜನಮಾನಸದಲ್ಲಿ ಉಳಿದಿದೆ.</p>.<p>ಸಮಾನ ಮನಸ್ಕ ಗಮಕ ಪ್ರೇಮಿಗಳು ಹುಟ್ಟುಹಾಕಿದ ಗಮಕ ಕಲಾಭಿಮಾನಿಗಳ ಸಂಘ ಈಗ ಸಾರ್ಥಕ 40 ವರ್ಷ ಪೂರೈಸಿ ಮುನ್ನಡೆಯುತ್ತಿದೆ. ಕಾವ್ಯ ವಾಚನ, ವ್ಯಾಖ್ಯಾನದ ಹಾದಿಯಲ್ಲಿ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಭಾವಗೀತೆ, ವಚನಗಳನ್ನು ತನ್ನೆಡೆಗೆ ಸೆಳೆದುಕೊಂಡಿದೆ. ವಾಚನ, ವ್ಯಾಖ್ಯಾನ ಅಷ್ಟೇ ಅಲ್ಲದೇ ಶ್ರವ್ಯ ರೂಪಕ, ನೃತ್ಯ ರೂಪಕ ಮಂತಾದ ಧಾರೆಗಳ ಮೂಲಕ ಜನರ ಮನಸ್ಸಿನಲ್ಲಿ ಹರಿಯುತ್ತಿದೆ. </p>.<p>ರಾಘವೇಂದ್ರರಾವ್, ಸತ್ಯನಾರಾಯಣರಾವ್ ಅವರ ನೇತೃತ್ವದಲ್ಲಿ ಸಂಘ ಬೆಂಗಳೂರಿನಲ್ಲಿ ಹುಟ್ಟು ಪಡೆದಿತ್ತು. ಶೇಷಾಚಲಯ್ಯ, ಚಂದ್ರಶೇಖರಯ್ಯ, ಕೇಶವಮೂರ್ತಿ ಮುಂತಾದವರ ಪ್ರಯತ್ನದಿಂದ ಚಿತ್ರದುರ್ಗದಲ್ಲಿ ತನ್ನ ದಾರಿ ಮುಂದುವರಿಸಿತು. ಶೇಷಾಚಲಯ್ಯ, ಚಿದಂಬರರಾವ್, ಶ್ಯಾಮಜೋಯಿಸ್ ಅಧ್ಯಕ್ಷತೆಯಲ್ಲಿ ಮುನ್ನಡೆದ ಸಂಘ ಸದ್ಯ ಕೆ.ಆರ್.ರಮಾದೇವಿ ಅವರ ಅಧ್ಯಕ್ಷತೆಯಲ್ಲಿ ಮುಂದೆ ಸಾಗುತ್ತಿದೆ.</p>.<p>ಸಂಗೀತ ವಿದುಷಿಯರಾದ ಚಂಪಕ ಶ್ರೀಧರ್, ಮೀನಾಕ್ಷಿ ಭಟ್ ಅವರು ಮಕ್ಕಳಿಗೆ ಶಾಸ್ತ್ರೀಯ ಸಂಗೀತದ ಜೊತೆಗೆ ಗಮಕ ಪಾಠವನ್ನೂ ಹೇಳಿಕೊಡುತ್ತಿದ್ದಾರೆ. ಚಿಣ್ಣರ ಧ್ವನಿ ಸಂಸ್ಕಾರ, ಸ್ಫುಟ ಸಾಹಿತ್ಯ ವಾಚನವನ್ನು ಗಮಕ ಕಲೆಗೆ ಒಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅನಂತ ಕೃಷ್ಣ, ರಾಜೀವಲೋಚನ ಮುಂತಾದ ವಾಖ್ಯಾನಕಾರರೂ ಸಾಥ್ ಕೊಟ್ಟಿದ್ದಾರೆ.</p>.<p>ಕಾವ್ಯ, ಪದ್ಯ, ವಚನ, ಜನಪದ, ಭಾವಗೀತೆಗಳನ್ನು ಗಮಕ ನೃತ್ಯರೂಪಕಕ್ಕೆ ಅಳವಡಿಸುವಲ್ಲಿ ಸಂಘ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ನಂಬಿ ಕೆಟ್ಟವರಿಲ್ಲವೋ, ಶಬರಿ ಶಂಕರ ವಿಲಾಸ, ಶ್ರೀನಿವಾಸ ಕಲ್ಯಾಣ, ಕೀಚಕ ವಧೆ, ಸಂಪೂರ್ಣ ರಾಮಾಯಣ ಮುಂತಾದ ನೃತ್ಯ ರೂಪಕಗಳನ್ನು ವೇದಿಕೆಗೆ ತರಲಾಗಿದೆ. ಜೊತೆಗೆ ತಾಳಮದ್ದಳೆ ಮಾದರಿಯಲ್ಲಿ ಕಾವ್ಯಗಳನ್ನು ವಾಚನ, ಸಂವಹನ, ನಿರೂಪಣಾ ರೀತಿಯಲ್ಲಿ ಶ್ರವ್ಯರೂಪಕವಾಗಿ ಪ್ರಸ್ತುತಪಡಿಸಲಾಗಿದೆ.</p>.<p>ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ ಬಾಲ ಗಮಕಿ, ಯುವ ಗಮಕಿ, ವ್ಯಾಖ್ಯಾನಕಾರರನ್ನು ಚಿತ್ರದುರ್ಗಕ್ಕೆ ಆಹ್ವಾನಿಸಿ ಸಂಘದ ಸದಸ್ಯರು ವೇದಿಕೆ ಕೊಟ್ಟಿದ್ದಾರೆ. ಆ ಮೂಲಕ ಸ್ಥಳೀಯ ಮಕ್ಕಳಲ್ಲೂ ಗಮಕದ ಮೇಲೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಿದ್ದಾರೆ.</p>.<p>‘ಗಮಕ ಕಲೆಯ ಮೇಲೆ ಪೋಷಕರಲ್ಲಿ ಆಸಕ್ತಿ ಬೆಳೆಸುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳನ್ನು ಹತ್ತಾರು ಚಟುವಟಿಕೆಗಳಿಗೆ ತೊಡಗಿಸುತ್ತಾರೆ. ಗಮಕ ಕಲಿಕೆಗೂ ಮಕ್ಕಳನ್ನು ಕಳುಹಿಸಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ ಹೇಳಿದರು.</p>.<p>ವಚನ ಗಾಯನ ವ್ಯಾಖ್ಯಾನ ಇಂದು ಗಮಕ ಕಲಾಭಿಮಾನಿಗಳ ಸಂಘ 40 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಜೆಸಿಆರ್ ಗಣಪತಿ ದೇವಾಲಯ ಸಮಿತಿ ಸಹಯೋಗದಲ್ಲಿ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ತಿಂಗಳ ವಚನ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಜುಲೈ 28ರಂದು ಸಂಜೆ 6 ಗಂಟೆಗೆ ಜೆಸಿಆರ್ ಗಣಪತಿ ದೇವಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಇದೇ ಪ್ರಥಮ ಬಾರಿಗೆ ಬಸವಾದಿ ಶಿವಶರಣರ ವಚನ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದ್ದು ಗಾಯಕಿ ಕೋಕಿಲ ರುದ್ರಮೂರ್ತಿ ಅವರು ವಚನ ವಾಚನ ಮಾಡಲಿದ್ದಾರೆ. ನಿವೃತ್ತ ಉಪನ್ಯಾಸಕಿ ಕವಯತ್ರಿ ಸಿ.ಬಿ. ಶೈಲಾಜಯಕುಮಾರ್ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>