<p><strong>ಹೊಸದುರ್ಗ:</strong> ಬಸ್ಗಳಿಗೆ ಕಾಯುವ ಪ್ರಯಾಣಿಕರಿಗೆ ಪಟ್ಟಣದ ವಿವಿಧೆಡೆ ತಂಗುದಾಣಗಳಿಲ್ಲ. ಇದರಿಂದಾಗಿ ಮಕ್ಕಳು, ಮಹಿಳೆಯರು, ವೃದ್ಧರು ಹೈರಾಣಾಗುತ್ತಿದ್ದಾರೆ. ರಸ್ತೆಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ.</p>.<p>ಪಟ್ಟಣದ ಪೊಲೀಸ್ ಠಾಣೆ ಮುಂಭಾಗ, ಸಿದ್ಧರಾಮೇಶ್ವರ ಸಮುದಾಯ ಭವನ, ಟಿ.ಬಿ. ವೃತ್ತ, ಹುಳಿಯಾರು ವೃತ್ತಗಳಲ್ಲಿ ತಂಗುದಾಣಗಳಿಲ್ಲ. ನಿತ್ಯ ನೂರಾರು ಬಸ್ಗಳಲ್ಲಿ ಸಾವಿರಾರು ಜನ ಓಡಾಡುವ ಈ ಸ್ಥಳಗಳಲ್ಲಿ ನಿಲ್ದಾಣ ಇಲ್ಲದ ಕಾರಣ ಜನರು ಬಿಸಿಲಿನಲ್ಲಿ, ಮಳೆಯಲ್ಲಿ ನಿಲ್ಲಬೇಕಾಗಿದೆ.</p>.<p>ಹೊಳಲ್ಕೆರೆ, ದಾವಣಗೆರೆ, ಚಿತ್ರದುರ್ಗ, ಅಜ್ಜಂಪುರ, ಕಡೂರು, ಬೀರೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲುಗಡೆಗೆ ಪೋಲಿಸ್ ಠಾಣೆ ಮುಂಭಾಗ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸೋಮವಾರ ಹೊಸದುರ್ಗದಲ್ಲಿ ಸಂತೆ ನಡೆಯುವ ಕಾರಣ ಜನದಟ್ಟಣೆ ಹೆಚ್ಚು. ತಂಗುದಾಣ ಇಲ್ಲದ್ದರಿಂದ ಸಮಸ್ಯೆ ಹೆಚ್ಚಾಗಿದೆ.</p>.<p>‘ಹುಳಿಯಾರು ಮಾರ್ಗದಲ್ಲಿ ಸಂಚರಿಸುವವರ ಸಂಖ್ಯೆಯೂ ಹೆಚ್ಚಿದೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ತಂಗುದಾಣಗಳಿಲ್ಲದೇ ಸಮಸ್ಯೆಯಾಗಿದೆ. ಸಿದ್ಧರಾಮನಗರದಲ್ಲಿ ಪ್ರವಾಸಿ ಮಂದಿರದ ಎದುರು ಒಂದು ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಾಣವಾದರೆ ಅನುಕೂಲವಾಗುತ್ತದೆ’ ಎಂಬುದು ವಿದ್ಯಾರ್ಥಿಗಳ ಒತ್ತಾಯ.</p>.<p>‘ನಿರಂತರ ಮಳೆಯಾದರೆ ಜನರಿಗೆ ನಿಲ್ಲಲು ಸ್ಥಳಾವಕಾಶವಿಲ್ಲ. ಅಂಗಡಿಗಳ ಮುಂದೆ ನಿಲ್ಲಬೇಕು. ಒಮ್ಮೊಮ್ಮೆ ಅವರು ಸಹ ದೂರ ನಿಲ್ಲಲು ಸೂಚಿಸುತ್ತಾರೆ. ಪ್ರಯಾಣಿಕರ ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ಕಲ್ಪಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ಪ್ರಯಾಣಿಕ ಲೋಹಿತ್ ಕೆ. ಹೇಳಿದರು.</p>.<p><strong>ಇದ್ದೂ ಇಲ್ಲದಂತಾದ ತಂಗುದಾಣ:</strong></p>.<p>ಪಟ್ಟಣದ ಟಿ.ಬಿ. ವೃತ್ತದಲ್ಲಿನ ಪ್ರಯಾಣಿಕರ ತಂಗುದಾಣ ಇದ್ದೂ ಇಲ್ಲದಂತಾಗಿದೆ, ಸುತ್ತಲೂ ಮುಳ್ಳುಗಿಡಗಳು ಬೆಳೆದಿವೆ. ಮಳೆ ಬಂದಾಗ ಸೋರುತ್ತಿದೆ. ತಂಗುದಾಣಕ್ಕಿಂತ ಸ್ವಲ್ಪ ದೂರದಲ್ಲಿಯೇ ಬಸ್ ನಿಲುಗಡೆಯಾಗುತ್ತದೆ.</p>.<p>ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು, ಹೊಸ ನ್ಯಾಯಾಲಯದ ಎದುರು, ಶಾಂತಿನಗರ, ಎಪಿಎಂಸಿ ಮಾರುಕಟ್ಟೆ ಬಳಿ ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಈ ಸ್ಥಳಗಳಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕು ಎಂಬುದು ಜನರ ಒತ್ತಾಯ.</p>.<p>ಬಸ್ಗೆ ಕಾಯುವಾಗ ಮಳೆ ಬಂದರೆ ತೊಂದರೆಯಾಗುತ್ತದೆ. ಗರ್ಭಿಣಿಯರು ವೃದ್ಧರು ಅಂಗಡಿಗಳ ಪಕ್ಕದಲ್ಲಿ ಕೂರುತ್ತಾರೆ. ವಿದ್ಯಾರ್ಥಿಗಳು ಬಿಸಿಲು ಮಳೆಯಲ್ಲೇ ನಿಲ್ಲುತ್ತಾರೆ. </p><p>-ನಿತಿನ್ ಎಸ್.ಆರ್. ಬಿ.ಎ. ವಿದ್ಯಾರ್ಥಿ</p>.<p>ಪಟ್ಟಣದ ಪೋಲಿಸ್ ಠಾಣೆ ಎದುರು ಹಾಗೂ ಹುಳಿಯಾರು ವೃತ್ತದ ಸಮೀಪ ಬಸ್ ತಂಗುದಾಣ ನಿರ್ಮಿಸಲು ಸಭೆಯಲ್ಲಿ ಚರ್ಚಿಸಿ ಅನುದಾನ ಮೀಸಲಿಡಲಾಗುವುದು. ಹೊಳಲ್ಕೆರೆ ಮಾರ್ಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮುಗಿದ ನಂತರ ಟಿ.ಬಿ. ವೃತ್ತದಲ್ಲಿ ತಂಗುದಾಣ ನಿರ್ಮಿಸಲಾಗುವುದು. </p><p>-ತಿಮ್ಮರಾಜು ಜಿ.ವಿ. ಪುರಸಭೆ ಮುಖ್ಯಾಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ಬಸ್ಗಳಿಗೆ ಕಾಯುವ ಪ್ರಯಾಣಿಕರಿಗೆ ಪಟ್ಟಣದ ವಿವಿಧೆಡೆ ತಂಗುದಾಣಗಳಿಲ್ಲ. ಇದರಿಂದಾಗಿ ಮಕ್ಕಳು, ಮಹಿಳೆಯರು, ವೃದ್ಧರು ಹೈರಾಣಾಗುತ್ತಿದ್ದಾರೆ. ರಸ್ತೆಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ.</p>.<p>ಪಟ್ಟಣದ ಪೊಲೀಸ್ ಠಾಣೆ ಮುಂಭಾಗ, ಸಿದ್ಧರಾಮೇಶ್ವರ ಸಮುದಾಯ ಭವನ, ಟಿ.ಬಿ. ವೃತ್ತ, ಹುಳಿಯಾರು ವೃತ್ತಗಳಲ್ಲಿ ತಂಗುದಾಣಗಳಿಲ್ಲ. ನಿತ್ಯ ನೂರಾರು ಬಸ್ಗಳಲ್ಲಿ ಸಾವಿರಾರು ಜನ ಓಡಾಡುವ ಈ ಸ್ಥಳಗಳಲ್ಲಿ ನಿಲ್ದಾಣ ಇಲ್ಲದ ಕಾರಣ ಜನರು ಬಿಸಿಲಿನಲ್ಲಿ, ಮಳೆಯಲ್ಲಿ ನಿಲ್ಲಬೇಕಾಗಿದೆ.</p>.<p>ಹೊಳಲ್ಕೆರೆ, ದಾವಣಗೆರೆ, ಚಿತ್ರದುರ್ಗ, ಅಜ್ಜಂಪುರ, ಕಡೂರು, ಬೀರೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲುಗಡೆಗೆ ಪೋಲಿಸ್ ಠಾಣೆ ಮುಂಭಾಗ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸೋಮವಾರ ಹೊಸದುರ್ಗದಲ್ಲಿ ಸಂತೆ ನಡೆಯುವ ಕಾರಣ ಜನದಟ್ಟಣೆ ಹೆಚ್ಚು. ತಂಗುದಾಣ ಇಲ್ಲದ್ದರಿಂದ ಸಮಸ್ಯೆ ಹೆಚ್ಚಾಗಿದೆ.</p>.<p>‘ಹುಳಿಯಾರು ಮಾರ್ಗದಲ್ಲಿ ಸಂಚರಿಸುವವರ ಸಂಖ್ಯೆಯೂ ಹೆಚ್ಚಿದೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ತಂಗುದಾಣಗಳಿಲ್ಲದೇ ಸಮಸ್ಯೆಯಾಗಿದೆ. ಸಿದ್ಧರಾಮನಗರದಲ್ಲಿ ಪ್ರವಾಸಿ ಮಂದಿರದ ಎದುರು ಒಂದು ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಾಣವಾದರೆ ಅನುಕೂಲವಾಗುತ್ತದೆ’ ಎಂಬುದು ವಿದ್ಯಾರ್ಥಿಗಳ ಒತ್ತಾಯ.</p>.<p>‘ನಿರಂತರ ಮಳೆಯಾದರೆ ಜನರಿಗೆ ನಿಲ್ಲಲು ಸ್ಥಳಾವಕಾಶವಿಲ್ಲ. ಅಂಗಡಿಗಳ ಮುಂದೆ ನಿಲ್ಲಬೇಕು. ಒಮ್ಮೊಮ್ಮೆ ಅವರು ಸಹ ದೂರ ನಿಲ್ಲಲು ಸೂಚಿಸುತ್ತಾರೆ. ಪ್ರಯಾಣಿಕರ ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ಕಲ್ಪಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ಪ್ರಯಾಣಿಕ ಲೋಹಿತ್ ಕೆ. ಹೇಳಿದರು.</p>.<p><strong>ಇದ್ದೂ ಇಲ್ಲದಂತಾದ ತಂಗುದಾಣ:</strong></p>.<p>ಪಟ್ಟಣದ ಟಿ.ಬಿ. ವೃತ್ತದಲ್ಲಿನ ಪ್ರಯಾಣಿಕರ ತಂಗುದಾಣ ಇದ್ದೂ ಇಲ್ಲದಂತಾಗಿದೆ, ಸುತ್ತಲೂ ಮುಳ್ಳುಗಿಡಗಳು ಬೆಳೆದಿವೆ. ಮಳೆ ಬಂದಾಗ ಸೋರುತ್ತಿದೆ. ತಂಗುದಾಣಕ್ಕಿಂತ ಸ್ವಲ್ಪ ದೂರದಲ್ಲಿಯೇ ಬಸ್ ನಿಲುಗಡೆಯಾಗುತ್ತದೆ.</p>.<p>ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು, ಹೊಸ ನ್ಯಾಯಾಲಯದ ಎದುರು, ಶಾಂತಿನಗರ, ಎಪಿಎಂಸಿ ಮಾರುಕಟ್ಟೆ ಬಳಿ ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಈ ಸ್ಥಳಗಳಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕು ಎಂಬುದು ಜನರ ಒತ್ತಾಯ.</p>.<p>ಬಸ್ಗೆ ಕಾಯುವಾಗ ಮಳೆ ಬಂದರೆ ತೊಂದರೆಯಾಗುತ್ತದೆ. ಗರ್ಭಿಣಿಯರು ವೃದ್ಧರು ಅಂಗಡಿಗಳ ಪಕ್ಕದಲ್ಲಿ ಕೂರುತ್ತಾರೆ. ವಿದ್ಯಾರ್ಥಿಗಳು ಬಿಸಿಲು ಮಳೆಯಲ್ಲೇ ನಿಲ್ಲುತ್ತಾರೆ. </p><p>-ನಿತಿನ್ ಎಸ್.ಆರ್. ಬಿ.ಎ. ವಿದ್ಯಾರ್ಥಿ</p>.<p>ಪಟ್ಟಣದ ಪೋಲಿಸ್ ಠಾಣೆ ಎದುರು ಹಾಗೂ ಹುಳಿಯಾರು ವೃತ್ತದ ಸಮೀಪ ಬಸ್ ತಂಗುದಾಣ ನಿರ್ಮಿಸಲು ಸಭೆಯಲ್ಲಿ ಚರ್ಚಿಸಿ ಅನುದಾನ ಮೀಸಲಿಡಲಾಗುವುದು. ಹೊಳಲ್ಕೆರೆ ಮಾರ್ಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮುಗಿದ ನಂತರ ಟಿ.ಬಿ. ವೃತ್ತದಲ್ಲಿ ತಂಗುದಾಣ ನಿರ್ಮಿಸಲಾಗುವುದು. </p><p>-ತಿಮ್ಮರಾಜು ಜಿ.ವಿ. ಪುರಸಭೆ ಮುಖ್ಯಾಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>