<p><strong>ಚಿತ್ರದುರ್ಗ</strong>: ದಂತ ವೈದ್ಯ ಕೆ.ವಿ.ಸಂತೋಷ್ ಅವರು ಔಷಧಿ ಚೀಟಿ ಮೇಲೆ ರೋಗಿಗಳ ಊರಿನ ಹೆಸರನ್ನು ತಪ್ಪದೇ ಬರೆಯುತ್ತಾರೆ. ಹಳ್ಳಿಗಳ ಮೇಲೆ ಅವ್ಯಕ್ತ ಕುತೂಹಲ, ಹಳ್ಳಿಗಳನ್ನು ನೋಡುವ, ಅಲ್ಲಿಯ ಸಂಸ್ಕೃತಿಯನ್ನು ಅರಿಯುವ ಹಂಬಲ. ಅವರ ಈ ಹುಡುಕಾಟದ ಮನೋಭಾವ ಹಳ್ಳಿಗಳ ಪರಂಪರೆ, ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಧ್ಯಯನಗೈಯಲು ಹಾದಿ ತೋರಿಸಿತು. ಅದೇ ಕುತೂಹಲ ತಾಲ್ಲೂಕು ದರ್ಶನ ಕೃತಿಗಳನ್ನು ಹೊರತರಲು ಸ್ಫೂರ್ತಿಯಾಯಿತು.</p>.<p>ಹೊಳಲ್ಕೆರೆಯಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿರುವ ಡಾ.ಸಂತೋಷ್ ಇಡೀ ತಾಲ್ಲೂಕಿನ ಹಳ್ಳಿಗಳ ಪರಂಪರೆಯ ಬಗ್ಗೆ ಅಧ್ಯಯನ ಮಾಡಿ 2014ರಲ್ಲಿ ‘ಹೊಳಲ್ಕೆರೆ ತಾಲ್ಲೂಕು ದರ್ಶನ’ ಕೃತಿ ಹೊರತಂದರು. 10 ವರ್ಷಗಳ ನಂತರ ಮತ್ತೆ ಇದೀಗ ‘ಚಿತ್ರದುರ್ಗ ತಾಲ್ಲೂಕು ದರ್ಶನ’ ಕೃತಿ ಹೊರತರುತ್ತಿದ್ದು, ತಮ್ಮ ಹುಡುಕಾಟದ ನೋಟವನ್ನು ಮುಂದುವರಿಸಿದ್ದಾರೆ.</p>.<p>ಕ್ಲಿನಿಕ್ಗೆ ಚಿಕಿತ್ಸೆಗಾಗಿ ಬರುವವರು ಸಂತೋಷ್ ಪಾಲಿಗೆ ಕೇವಲ ರೋಗಿಗಳಷ್ಟೇ ಅಲ್ಲ, ಆಯಾ ಹಳ್ಳಿಗಳ ಮಾಹಿತಿದಾತರೂ ಆಗಿದ್ದಾರೆ. ರೊಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಅವರು ಜನರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ, ಅಲ್ಲಿಗೆ ಭೇಟಿ ಕೊಟ್ಟು ವಿಶೇಷತೆಗಳ ಅಧ್ಯಯನ ಮಾಡಿ ಅದಕ್ಕೆ ಪುಸ್ತಕ ರೂಪ ನೀಡಿದ್ದಾರೆ.</p>.<p>‘ಹೊಳಲ್ಕೆರೆ ತಾಲ್ಲೂಕು ದರ್ಶನ’ ಕೃತಿಗೆ ಬಂದ ಮೆಚ್ಚುಗೆಯಿಂದ ಇನ್ನಷ್ಟು ಪ್ರೇರಣೆ ಪಡೆದ ಡಾ.ಸಂತೋಷ್ ಮತ್ತಷ್ಟು ಸಮಗ್ರ ಅಧ್ಯಯನದೊಂದಿಗೆ ಇದೀಗ ‘ಚಿತ್ರದುರ್ಗ ತಾಲ್ಲೂಕು ದರ್ಶನ’ ಕೃತಿಯನ್ನು ಓದುಗರ ಕೈಗಿಡುತ್ತಿದ್ದಾರೆ. ಆ. 15ರೊಳಗೆ ಕೃತಿ ಬಿಡುಗಡೆ ಮಾಡುವ ಚಿಂತನೆಯಲ್ಲಿದ್ದಾರೆ. ತಮ್ಮದೇ ‘ಸಂತೋಷ್ ಪ್ರಕಾಶನ’ದ ಮೂಲಕ ಕೃತಿ ಹೊರತರುತ್ತಿದ್ದು, ಅದಕ್ಕಾಗಿ ಸಾಕಷ್ಟು ಶ್ರಮ ಹಾಗೂ ಹಣ ಖರ್ಚು ಮಾಡಿದ್ದಾರೆ.</p>.<p>ಪ್ರತಿ ಶನಿವಾರ ಹಾಗೂ ಭಾನುವಾರ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಕ್ಷೇತ್ರಕಾರ್ಯ ಕೈಗೊಳ್ಳುವ ಅವರು ಹಳ್ಳಿಗಳ ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿತ್ರದುರ್ಗ ತಾಲ್ಲೂಕು ಐತಿಹಾಸಿಕವಾಗಿ ವಿಶ್ವಪ್ರಸಿದ್ಧಿ ಪಡೆದಿರುವ ಕಾರಣ ಸಂತೋಷ್ ಬಹಳ ಎಚ್ಚರಿಕೆಯಿಂದ, ಅಧ್ಯಯನಶೀಲತೆಯಿಂದ ಕೃತಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.</p>.<p>ಚಿತ್ರದುರ್ಗ ತಾಲ್ಲೂಕಿನಲ್ಲಿ ಕಂದಾಯ ಗ್ರಾಮ, ಉಪ ಗ್ರಾಮಗಳೂ ಸೇರಿ 280ಕ್ಕೂ ಹೆಚ್ಚು ಹಳ್ಳಿಗಳಿದ್ದು, ಅವುಗಳಲ್ಲಿ ಬಹುತೇಕ ಗ್ರಾಮಗಳಿಗೆ ಸ್ವತಃ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಚಿತ್ರದುರ್ಗ ನಗರ, ಕೋಟೆಯ ಪರಿಚಯ, ಐತಿಹಾಸಿಕ ಹಿನ್ನೆಲೆಯನ್ನು ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಜೊತೆಗೆ ಹಳ್ಳಿಗಳ ಸ್ಥಳನಾಮ, ವ್ಯಾಪ್ತಿ, ವಿಸ್ತೀರ್ಣ, ಆಡಳಿತಗಾರರ ಪರಿಚಯ, ರಾಜಕೀಯ ಪರಂಪರೆಯನ್ನು ವಿವರಿಸಿದ್ದಾರೆ.</p>.<p>ಗ್ರಾಮಗಳ ಸಂಸ್ಕೃತಿ ಬಗ್ಗೆಯೂ ಬೆಳಕು ಚೆಲ್ಲಿರುವ ಅವರು ಜನಾಂಗಗಳ ವಿಶೇಷತೆ, ಗ್ರಾಮ ದೇವತೆ, ವಿವಾಹ ಕ್ರಮ, ಧಾರ್ಮಿಕ, ಜಾನಪದ ಆಚರಣೆ, ಕ್ರೀಡೆ ಮುಂತಾದ ವಿಷಯಗಳನ್ನು ದಾಖಲಿಸಿದ್ದಾರೆ. ಪ್ರತಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಬರೆಯುವಾಗ ಅಲ್ಲಿರುವ ಚಾರಿತ್ರಿಕ ಸ್ಮಾರಕ, ದೇವಾಲಯಗಳ ಚಿತ್ರಗಳನ್ನೂ ಕೃತಿಯಲ್ಲಿ ಮುದ್ರಿಸಿದ್ದಾರೆ. 415 ಪುಟಗಳ ಕೃತಿ ತಾಲ್ಲೂಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.</p>.<p>ಜನ್ಮಭೂಮಿ ಕರ್ಮಭೂಮಿಯ ಚಿತ್ರಣ ವಿಠ್ಠಲರಾವ್– ಮಂಜುಳಾ ದಂಪತಿಯ ಪುತ್ರರಾಗಿರುವ ಸಂತೋಷ್ ಅವರಿಗೆ ಚಿತ್ರದುರ್ಗ ಜನ್ಮಭೂಮಿ ಹೊಳಲ್ಕೆರೆ ಕರ್ಮಭೂಮಿ. ತಾವು ಜೀವಿಸುವ ಹಾಗೂ ಕಾಯಕ ಮಾಡುವ ಎರಡೂ ನಗರಗಳ ಸಮಗ್ರ ದರ್ಶನವನ್ನು ಕೃತಿಗಿಳಿಸಿದ್ದಾರೆ. ಇದಕ್ಕೂ ಮೊದಲು ಅವರು ದಂತ ಆರೋಗ್ಯ ಕುರಿತಂತೆ ಪತ್ರಿಕೆ ನಿಯತಕಾಲಿಕೆಗಳಲ್ಲಿ ನೂರಾರು ಲೇಖನ ಬರೆದಿದ್ದಾರೆ. ಅವರ ಅಧ್ಯಯನ ಅವರನ್ನೊಬ್ಬ ಲೇಖಕನನ್ನಾಗಿ ರೂಪಿಸಿದೆ. ‘ನಮ್ಮ ತಂದೆ–ತಾಯಿ ಬಟ್ಟೆ ವ್ಯಾಪಾರ ಮಾಡುತ್ತ ಬದುಕು ನಡೆಸುತ್ತಿದ್ದರು. ನಾನು ಸಣ್ಣವನಿದ್ದಾಗ ಹೊರಗೆ ಹೋಗಲು ಬಿಡುತ್ತಿರಲಿಲ್ಲ ಪ್ರವಾಸಕ್ಕೆ ಕಳುಹಿಸುತ್ತಿರಲಿಲ್ಲ. ನಾನು ಯಾವ ಹಳ್ಳಿಗಳನ್ನೂ ನೋಡಿರಲಿಲ್ಲ. ದೊಡ್ಡವನಾಗಿ ಬೆಳೆಯುತ್ತಿದ್ದಂತೆ ಹಳ್ಳಿಗಳನ್ನು ನೋಡುವ ಅವರ ಜೀವನ ಕ್ರಮ ಅಧ್ಯಯನ ಮಾಡುವ ಕುತೂಹಲ ಮೂಡಿತು. ಇದೇ ಬರವಣಿಗೆಗೆ ಪ್ರೇರಣೆಯಾಯಿತು’ ಎಂದು ಡಾ.ಸಂತೋಷ್ ತಿಳಿಸಿದರು. ಡಾ.ಕೆ.ವಿ.ಸಂತೋಷ್ ಅವರನ್ನು ಮೊ: 9342466936 ಮೂಲಕ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ದಂತ ವೈದ್ಯ ಕೆ.ವಿ.ಸಂತೋಷ್ ಅವರು ಔಷಧಿ ಚೀಟಿ ಮೇಲೆ ರೋಗಿಗಳ ಊರಿನ ಹೆಸರನ್ನು ತಪ್ಪದೇ ಬರೆಯುತ್ತಾರೆ. ಹಳ್ಳಿಗಳ ಮೇಲೆ ಅವ್ಯಕ್ತ ಕುತೂಹಲ, ಹಳ್ಳಿಗಳನ್ನು ನೋಡುವ, ಅಲ್ಲಿಯ ಸಂಸ್ಕೃತಿಯನ್ನು ಅರಿಯುವ ಹಂಬಲ. ಅವರ ಈ ಹುಡುಕಾಟದ ಮನೋಭಾವ ಹಳ್ಳಿಗಳ ಪರಂಪರೆ, ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಧ್ಯಯನಗೈಯಲು ಹಾದಿ ತೋರಿಸಿತು. ಅದೇ ಕುತೂಹಲ ತಾಲ್ಲೂಕು ದರ್ಶನ ಕೃತಿಗಳನ್ನು ಹೊರತರಲು ಸ್ಫೂರ್ತಿಯಾಯಿತು.</p>.<p>ಹೊಳಲ್ಕೆರೆಯಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿರುವ ಡಾ.ಸಂತೋಷ್ ಇಡೀ ತಾಲ್ಲೂಕಿನ ಹಳ್ಳಿಗಳ ಪರಂಪರೆಯ ಬಗ್ಗೆ ಅಧ್ಯಯನ ಮಾಡಿ 2014ರಲ್ಲಿ ‘ಹೊಳಲ್ಕೆರೆ ತಾಲ್ಲೂಕು ದರ್ಶನ’ ಕೃತಿ ಹೊರತಂದರು. 10 ವರ್ಷಗಳ ನಂತರ ಮತ್ತೆ ಇದೀಗ ‘ಚಿತ್ರದುರ್ಗ ತಾಲ್ಲೂಕು ದರ್ಶನ’ ಕೃತಿ ಹೊರತರುತ್ತಿದ್ದು, ತಮ್ಮ ಹುಡುಕಾಟದ ನೋಟವನ್ನು ಮುಂದುವರಿಸಿದ್ದಾರೆ.</p>.<p>ಕ್ಲಿನಿಕ್ಗೆ ಚಿಕಿತ್ಸೆಗಾಗಿ ಬರುವವರು ಸಂತೋಷ್ ಪಾಲಿಗೆ ಕೇವಲ ರೋಗಿಗಳಷ್ಟೇ ಅಲ್ಲ, ಆಯಾ ಹಳ್ಳಿಗಳ ಮಾಹಿತಿದಾತರೂ ಆಗಿದ್ದಾರೆ. ರೊಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಅವರು ಜನರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ, ಅಲ್ಲಿಗೆ ಭೇಟಿ ಕೊಟ್ಟು ವಿಶೇಷತೆಗಳ ಅಧ್ಯಯನ ಮಾಡಿ ಅದಕ್ಕೆ ಪುಸ್ತಕ ರೂಪ ನೀಡಿದ್ದಾರೆ.</p>.<p>‘ಹೊಳಲ್ಕೆರೆ ತಾಲ್ಲೂಕು ದರ್ಶನ’ ಕೃತಿಗೆ ಬಂದ ಮೆಚ್ಚುಗೆಯಿಂದ ಇನ್ನಷ್ಟು ಪ್ರೇರಣೆ ಪಡೆದ ಡಾ.ಸಂತೋಷ್ ಮತ್ತಷ್ಟು ಸಮಗ್ರ ಅಧ್ಯಯನದೊಂದಿಗೆ ಇದೀಗ ‘ಚಿತ್ರದುರ್ಗ ತಾಲ್ಲೂಕು ದರ್ಶನ’ ಕೃತಿಯನ್ನು ಓದುಗರ ಕೈಗಿಡುತ್ತಿದ್ದಾರೆ. ಆ. 15ರೊಳಗೆ ಕೃತಿ ಬಿಡುಗಡೆ ಮಾಡುವ ಚಿಂತನೆಯಲ್ಲಿದ್ದಾರೆ. ತಮ್ಮದೇ ‘ಸಂತೋಷ್ ಪ್ರಕಾಶನ’ದ ಮೂಲಕ ಕೃತಿ ಹೊರತರುತ್ತಿದ್ದು, ಅದಕ್ಕಾಗಿ ಸಾಕಷ್ಟು ಶ್ರಮ ಹಾಗೂ ಹಣ ಖರ್ಚು ಮಾಡಿದ್ದಾರೆ.</p>.<p>ಪ್ರತಿ ಶನಿವಾರ ಹಾಗೂ ಭಾನುವಾರ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಕ್ಷೇತ್ರಕಾರ್ಯ ಕೈಗೊಳ್ಳುವ ಅವರು ಹಳ್ಳಿಗಳ ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿತ್ರದುರ್ಗ ತಾಲ್ಲೂಕು ಐತಿಹಾಸಿಕವಾಗಿ ವಿಶ್ವಪ್ರಸಿದ್ಧಿ ಪಡೆದಿರುವ ಕಾರಣ ಸಂತೋಷ್ ಬಹಳ ಎಚ್ಚರಿಕೆಯಿಂದ, ಅಧ್ಯಯನಶೀಲತೆಯಿಂದ ಕೃತಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.</p>.<p>ಚಿತ್ರದುರ್ಗ ತಾಲ್ಲೂಕಿನಲ್ಲಿ ಕಂದಾಯ ಗ್ರಾಮ, ಉಪ ಗ್ರಾಮಗಳೂ ಸೇರಿ 280ಕ್ಕೂ ಹೆಚ್ಚು ಹಳ್ಳಿಗಳಿದ್ದು, ಅವುಗಳಲ್ಲಿ ಬಹುತೇಕ ಗ್ರಾಮಗಳಿಗೆ ಸ್ವತಃ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಚಿತ್ರದುರ್ಗ ನಗರ, ಕೋಟೆಯ ಪರಿಚಯ, ಐತಿಹಾಸಿಕ ಹಿನ್ನೆಲೆಯನ್ನು ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಜೊತೆಗೆ ಹಳ್ಳಿಗಳ ಸ್ಥಳನಾಮ, ವ್ಯಾಪ್ತಿ, ವಿಸ್ತೀರ್ಣ, ಆಡಳಿತಗಾರರ ಪರಿಚಯ, ರಾಜಕೀಯ ಪರಂಪರೆಯನ್ನು ವಿವರಿಸಿದ್ದಾರೆ.</p>.<p>ಗ್ರಾಮಗಳ ಸಂಸ್ಕೃತಿ ಬಗ್ಗೆಯೂ ಬೆಳಕು ಚೆಲ್ಲಿರುವ ಅವರು ಜನಾಂಗಗಳ ವಿಶೇಷತೆ, ಗ್ರಾಮ ದೇವತೆ, ವಿವಾಹ ಕ್ರಮ, ಧಾರ್ಮಿಕ, ಜಾನಪದ ಆಚರಣೆ, ಕ್ರೀಡೆ ಮುಂತಾದ ವಿಷಯಗಳನ್ನು ದಾಖಲಿಸಿದ್ದಾರೆ. ಪ್ರತಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಬರೆಯುವಾಗ ಅಲ್ಲಿರುವ ಚಾರಿತ್ರಿಕ ಸ್ಮಾರಕ, ದೇವಾಲಯಗಳ ಚಿತ್ರಗಳನ್ನೂ ಕೃತಿಯಲ್ಲಿ ಮುದ್ರಿಸಿದ್ದಾರೆ. 415 ಪುಟಗಳ ಕೃತಿ ತಾಲ್ಲೂಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.</p>.<p>ಜನ್ಮಭೂಮಿ ಕರ್ಮಭೂಮಿಯ ಚಿತ್ರಣ ವಿಠ್ಠಲರಾವ್– ಮಂಜುಳಾ ದಂಪತಿಯ ಪುತ್ರರಾಗಿರುವ ಸಂತೋಷ್ ಅವರಿಗೆ ಚಿತ್ರದುರ್ಗ ಜನ್ಮಭೂಮಿ ಹೊಳಲ್ಕೆರೆ ಕರ್ಮಭೂಮಿ. ತಾವು ಜೀವಿಸುವ ಹಾಗೂ ಕಾಯಕ ಮಾಡುವ ಎರಡೂ ನಗರಗಳ ಸಮಗ್ರ ದರ್ಶನವನ್ನು ಕೃತಿಗಿಳಿಸಿದ್ದಾರೆ. ಇದಕ್ಕೂ ಮೊದಲು ಅವರು ದಂತ ಆರೋಗ್ಯ ಕುರಿತಂತೆ ಪತ್ರಿಕೆ ನಿಯತಕಾಲಿಕೆಗಳಲ್ಲಿ ನೂರಾರು ಲೇಖನ ಬರೆದಿದ್ದಾರೆ. ಅವರ ಅಧ್ಯಯನ ಅವರನ್ನೊಬ್ಬ ಲೇಖಕನನ್ನಾಗಿ ರೂಪಿಸಿದೆ. ‘ನಮ್ಮ ತಂದೆ–ತಾಯಿ ಬಟ್ಟೆ ವ್ಯಾಪಾರ ಮಾಡುತ್ತ ಬದುಕು ನಡೆಸುತ್ತಿದ್ದರು. ನಾನು ಸಣ್ಣವನಿದ್ದಾಗ ಹೊರಗೆ ಹೋಗಲು ಬಿಡುತ್ತಿರಲಿಲ್ಲ ಪ್ರವಾಸಕ್ಕೆ ಕಳುಹಿಸುತ್ತಿರಲಿಲ್ಲ. ನಾನು ಯಾವ ಹಳ್ಳಿಗಳನ್ನೂ ನೋಡಿರಲಿಲ್ಲ. ದೊಡ್ಡವನಾಗಿ ಬೆಳೆಯುತ್ತಿದ್ದಂತೆ ಹಳ್ಳಿಗಳನ್ನು ನೋಡುವ ಅವರ ಜೀವನ ಕ್ರಮ ಅಧ್ಯಯನ ಮಾಡುವ ಕುತೂಹಲ ಮೂಡಿತು. ಇದೇ ಬರವಣಿಗೆಗೆ ಪ್ರೇರಣೆಯಾಯಿತು’ ಎಂದು ಡಾ.ಸಂತೋಷ್ ತಿಳಿಸಿದರು. ಡಾ.ಕೆ.ವಿ.ಸಂತೋಷ್ ಅವರನ್ನು ಮೊ: 9342466936 ಮೂಲಕ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>