ಬಂಧಿತರು ಅ. 4ರಂದು ಶ್ರೀರಾಂಪುರ ಹಾಗೂ ಬೆಲಗೂರು ಗ್ರಾಮಗಳಲ್ಲಿನ 3 ಅಂಗಡಿಗಳಲ್ಲಿ ಅಂದಾಜು ₹ 22,000 ಮೌಲ್ಯದ ಗುಟ್ಕಾ, ಸಿಗರೇಟ್ ಖರೀದಿ ಮಾಡಿ ಅಂಗಡಿಯ ಫೋನ್ ಪೇ ಸ್ಕ್ಯಾನರ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಅಂಗಡಿ ಮಾಲೀಕರ ಮೊಬೈಲ್ಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಸಂದೇಶ ಸಹ ಬಂದಿದೆ. ಆದರೆ, ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ.