<p><strong>ಮೊಳಕಾಲ್ಮುರು</strong>: ಶಿಕ್ಷಣದ ಗುಣಮಟ್ಟ ಹೆಚ್ಚಳದ ಜೊತೆಗೆ ವಿದ್ಯಾರ್ಥಿಗಳ ಹಾಜರಾತಿ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ನೂತನವಾಗಿ ‘ಶಿಕ್ಷಾ ಸಪ್ತಾ’ ಎಂಬ ಕಾರ್ಯಕ್ರಮವನ್ನು ಪ್ರಸಕ್ತ ವರ್ಷದಿಂದ ಜಾರಿಗೆ ತಂದಿದೆ.</p>.<p>ಸಮಗ್ರ ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಶಿಕ್ಷಣ ಮಂತ್ರಾಲಯದ ಮೂಲಕ ಇದನ್ನು ಅನುಷ್ಠಾನ ಮಾಡುತ್ತಿದೆ. ಒಂದು ವಾರದ ಈ ಕಾರ್ಯಕ್ರಮ ಜುಲೈ 22ರಿಂದ ಆರಂಭವಾಗಿದ್ದು, ಜುಲೈ 28ಕ್ಕೆ ಮುಕ್ತಾಯವಾಗಲಿದೆ. ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಹಿರಿಯ, ಕಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಆಯೋಜಿಸುವಂತೆ ಇಲಾಖೆ ಸುತ್ತೋಲೆಯಲ್ಲಿ ಸೂಚಿಸಿದೆ.</p>.<p>7 ದಿನಗಳ ಈ ಯೋಜನೆಯಲ್ಲಿ ಮೊದಲು ‘ಕಲಿಕೋಪಕರಣಗಳ ದಿನʼ, ನಂತರ ‘ಭಾರತ ಹಾಗೂ ಕರ್ನಾಟಕದ ಚಟುವಟಿಕೆಗಳ ದಿನʼ, ‘ಕ್ರೀಡಾದಿನ’, ‘ಸಾಂಸ್ಕೃತಿಕ ದಿನ’, ‘ಕೌಶಲ ಮತ್ತು ಡಿಜಿಟಲ್ ಉಪಕ್ರಮಗಳ ದಿನ’, ‘ಇಕೋ ಕ್ಲಬ್ ಮತ್ತು ಪೌಷ್ಟಿಕಾಂಶ ದಿನʼ, ಅಂತಿಮವಾಗಿ ‘ಸಮುದಾಯ ಪಾಲ್ಗೊಳ್ಳುವಿಕೆ ದಿನʼ ಇರಲಿದೆ.</p>.<p>ಒಂದೊಂದು ಚಟುವಟಿಕೆಗೆ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಪ್ರತಿದಿನದ ಚಟುವಟಿಕೆಯನ್ನು ಮೊಬೈಲ್ ಆ್ಯಪ್ ಮೂಲಕ ಇಲಾಖೆಗೆ ಅಪ್ಲೋಡ್ ಮಾಡಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>‘ಇತ್ತೀಚಿನ ದಿನಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿರುವ ಜತೆಗೆ ಕಲಿಕಾ ಸಾಮರ್ಥ್ಯ ಕುಗ್ಗುತ್ತಿದೆ. ಆದ್ದರಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಇದರಲ್ಲಿ ಎಲ್ಲರ ಸಹಭಾಗಿತ್ವ ಇರುವಂತೆ ಚಟುವಟಿಕೆ ರೂಪಿಸಲಾಗಿದೆ’ ಎಂದು ಬಿಆರ್ಪಿ ಮಂಜುನಾಥ್ ಹೇಳಿದರು. </p>.<p>‘ನಮ್ಮ ಸಂಸ್ಕೃತಿ, ಉಡುಗೆ– ತೊಡುಗೆ, ಆಹಾರ ಪದ್ಧತಿ, ಭಾಷಾ ವೈವಿಧ್ಯ, ಪರಿಸರದ ಮಹತ್ವ, ಬೀದಿಬದಿ ಆಹಾರ ಸೇವನೆಯಿಂದ ಆಗುವ ಅಪಾಯ, ಹಣ್ಣು, ತರಕಾರಿ, ಮೊಟ್ಟೆ ಸೇವನೆಯಿಂದ ಆಗುವ ಲಾಭ ಹೀಗೆ 7 ದಿನವೂ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ’ ಎಂದರು.</p>.<p>‘ಎಸ್ಡಿಎಂಸಿ, ಪಂಚಾಯಿತಿ ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ದಾನಿಗಳು, ಪಾಲಕರನ್ನು ಕರೆಯಿಸಿ ಶಾಲೆ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಗುವುದು. ಈ ಯೋಜನೆಯಲ್ಲಿ ಏನಾದರೂ ಲೋಪ ಕಂಡುಬಂದಲ್ಲಿ ಮುಂದಿನ ವರ್ಷದಿಂದ ಸರಿಪಡಿಸಿಕೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು. </p>.<div><blockquote>ಬೇರೆ ಯೋಜನೆಗಳಿಗಿಂತ ಇದು ಭಿನ್ನವಾಗಿದ್ದು ಚಟುವಟಿಕೆ ಆಧಾರಿತ ಕಾರ್ಯಕ್ರಮವಾಗಿರುವ ಕಾರಣ ಮಕ್ಕಳ ಮನಮುಟ್ಟಲಿದೆ. ಎಲ್ಲ ಕಡೆ ಉತ್ತಮವಾಗಿ ಕಾರ್ಯಕ್ರಮ ಮೂಡಿಬಂದಿದೆ</blockquote><span class="attribution"> ತಿಪ್ಪೇಸ್ವಾಮಿ ಬಿಆರ್ಸಿ ಮೊಳಕಾಲ್ಮುರು </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು</strong>: ಶಿಕ್ಷಣದ ಗುಣಮಟ್ಟ ಹೆಚ್ಚಳದ ಜೊತೆಗೆ ವಿದ್ಯಾರ್ಥಿಗಳ ಹಾಜರಾತಿ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು ನೂತನವಾಗಿ ‘ಶಿಕ್ಷಾ ಸಪ್ತಾ’ ಎಂಬ ಕಾರ್ಯಕ್ರಮವನ್ನು ಪ್ರಸಕ್ತ ವರ್ಷದಿಂದ ಜಾರಿಗೆ ತಂದಿದೆ.</p>.<p>ಸಮಗ್ರ ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಶಿಕ್ಷಣ ಮಂತ್ರಾಲಯದ ಮೂಲಕ ಇದನ್ನು ಅನುಷ್ಠಾನ ಮಾಡುತ್ತಿದೆ. ಒಂದು ವಾರದ ಈ ಕಾರ್ಯಕ್ರಮ ಜುಲೈ 22ರಿಂದ ಆರಂಭವಾಗಿದ್ದು, ಜುಲೈ 28ಕ್ಕೆ ಮುಕ್ತಾಯವಾಗಲಿದೆ. ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಹಿರಿಯ, ಕಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಆಯೋಜಿಸುವಂತೆ ಇಲಾಖೆ ಸುತ್ತೋಲೆಯಲ್ಲಿ ಸೂಚಿಸಿದೆ.</p>.<p>7 ದಿನಗಳ ಈ ಯೋಜನೆಯಲ್ಲಿ ಮೊದಲು ‘ಕಲಿಕೋಪಕರಣಗಳ ದಿನʼ, ನಂತರ ‘ಭಾರತ ಹಾಗೂ ಕರ್ನಾಟಕದ ಚಟುವಟಿಕೆಗಳ ದಿನʼ, ‘ಕ್ರೀಡಾದಿನ’, ‘ಸಾಂಸ್ಕೃತಿಕ ದಿನ’, ‘ಕೌಶಲ ಮತ್ತು ಡಿಜಿಟಲ್ ಉಪಕ್ರಮಗಳ ದಿನ’, ‘ಇಕೋ ಕ್ಲಬ್ ಮತ್ತು ಪೌಷ್ಟಿಕಾಂಶ ದಿನʼ, ಅಂತಿಮವಾಗಿ ‘ಸಮುದಾಯ ಪಾಲ್ಗೊಳ್ಳುವಿಕೆ ದಿನʼ ಇರಲಿದೆ.</p>.<p>ಒಂದೊಂದು ಚಟುವಟಿಕೆಗೆ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಪ್ರತಿದಿನದ ಚಟುವಟಿಕೆಯನ್ನು ಮೊಬೈಲ್ ಆ್ಯಪ್ ಮೂಲಕ ಇಲಾಖೆಗೆ ಅಪ್ಲೋಡ್ ಮಾಡಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>‘ಇತ್ತೀಚಿನ ದಿನಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿರುವ ಜತೆಗೆ ಕಲಿಕಾ ಸಾಮರ್ಥ್ಯ ಕುಗ್ಗುತ್ತಿದೆ. ಆದ್ದರಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಇದರಲ್ಲಿ ಎಲ್ಲರ ಸಹಭಾಗಿತ್ವ ಇರುವಂತೆ ಚಟುವಟಿಕೆ ರೂಪಿಸಲಾಗಿದೆ’ ಎಂದು ಬಿಆರ್ಪಿ ಮಂಜುನಾಥ್ ಹೇಳಿದರು. </p>.<p>‘ನಮ್ಮ ಸಂಸ್ಕೃತಿ, ಉಡುಗೆ– ತೊಡುಗೆ, ಆಹಾರ ಪದ್ಧತಿ, ಭಾಷಾ ವೈವಿಧ್ಯ, ಪರಿಸರದ ಮಹತ್ವ, ಬೀದಿಬದಿ ಆಹಾರ ಸೇವನೆಯಿಂದ ಆಗುವ ಅಪಾಯ, ಹಣ್ಣು, ತರಕಾರಿ, ಮೊಟ್ಟೆ ಸೇವನೆಯಿಂದ ಆಗುವ ಲಾಭ ಹೀಗೆ 7 ದಿನವೂ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ’ ಎಂದರು.</p>.<p>‘ಎಸ್ಡಿಎಂಸಿ, ಪಂಚಾಯಿತಿ ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ದಾನಿಗಳು, ಪಾಲಕರನ್ನು ಕರೆಯಿಸಿ ಶಾಲೆ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಗುವುದು. ಈ ಯೋಜನೆಯಲ್ಲಿ ಏನಾದರೂ ಲೋಪ ಕಂಡುಬಂದಲ್ಲಿ ಮುಂದಿನ ವರ್ಷದಿಂದ ಸರಿಪಡಿಸಿಕೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು. </p>.<div><blockquote>ಬೇರೆ ಯೋಜನೆಗಳಿಗಿಂತ ಇದು ಭಿನ್ನವಾಗಿದ್ದು ಚಟುವಟಿಕೆ ಆಧಾರಿತ ಕಾರ್ಯಕ್ರಮವಾಗಿರುವ ಕಾರಣ ಮಕ್ಕಳ ಮನಮುಟ್ಟಲಿದೆ. ಎಲ್ಲ ಕಡೆ ಉತ್ತಮವಾಗಿ ಕಾರ್ಯಕ್ರಮ ಮೂಡಿಬಂದಿದೆ</blockquote><span class="attribution"> ತಿಪ್ಪೇಸ್ವಾಮಿ ಬಿಆರ್ಸಿ ಮೊಳಕಾಲ್ಮುರು </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>