<p><strong>ಚಿತ್ರದುರ್ಗ</strong>: ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರಾಜ್ಯದಾದ್ಯಂತ ಆರಂಭಿಸಲಾಗಿರುವ ಸಂಚಾರ ಪಶು ಚಿಕಿತ್ಸಾಲಯ (ವೆಟ್ ಆಂಬುಲೆನ್ಸ್) ಸೇವೆಯು ವೈದ್ಯರ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದೆ.</p>.<p>ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಿರುವ ಪಶು ವೈದ್ಯರು ಆಂಬುಲೆನ್ಸ್ಗಳಲ್ಲಿ ಇರಬೇಕು. ಆದರೆ, ವೈದ್ಯರೇ ಇಲ್ಲದ ಕಾರಣ ವಾಹನಗಳು ನೆಪಕ್ಕಷ್ಟೇ ಓಡಾಡುತ್ತಿದ್ದು ಆರೋಗ್ಯ ಸೇವೆ ಮರೀಚಿಕೆಯಾಗಿದೆ.</p>.<p>ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿದ್ದು, ವೆಟ್ ಆಂಬುಲೆನ್ಸ್ ಸೇವೆ ರೈತರಿಗೆ ಆಸರೆಯಾಗಬಲ್ಲವು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ನಿಗದಿಗಿಂತ ಕಡಿಮೆ ವೇತನ ನೀಡಿದ ಕಾರಣ ಬಹುತೇಕ ವೈದ್ಯರು ಕೆಲಸ ಬಿಟ್ಟುಹೋಗಿದ್ದಾರೆ. ಈಗ ಅವರ ಸಹಾಯಕರು ಮಾತ್ರ ಇದ್ದು, ಆಂಬುಲೆನ್ಸ್ಗಳಲ್ಲಿ ಅವಶ್ಯ ಔಷಧಿಗಳೂ ಇಲ್ಲದ ಕಾರಣ ಸಂಚಾರ ಚಿಕಿತ್ಸಾಲಯಗಳು ಇದ್ದೂ ಇಲ್ಲದಂತಾಗಿದೆ.</p>.<p>ಆಶ್ಚರ್ಯಕರ ವಿಷಯವೆಂದರೆ, ರಾಜ್ಯ ಸರ್ಕಾರ ಈ ಯೋಜನೆಗಾಗಿ ಮಾಸಿಕ ₹ 5 ಕೋಟಿ ವೆಚ್ಚ ಭರಿಸುತ್ತಿದೆ.</p>.<p>ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯವು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದಾದ್ಯಂತ ಸಂಚಾರ ಪಶು ವಾಹನ ಸೇವೆ ಆರಂಭಿಸಿದೆ. ರಾಜ್ಯದಲ್ಲಿ 2023, ಆ.5ರಿಂದ 275 ಸಂಚಾರ ಪಶು ವಾಹನಗಳ ಸೇವೆ ಆರಂಭಗೊಂಡಿದೆ. ಆಂಬುಲೆನ್ಸ್ಗಳ ನಿರ್ವಹಣಾ ಜವಾಬ್ದಾರಿಯನ್ನು ಮೆ.ಎಡುಸ್ಟಾರ್ಕ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ₹ 173 ಕೋಟಿಗೆ ಹೊರಗುತ್ತಿಗೆ ಪಡೆದಿದೆ.</p>.<p>ಸಿಬ್ಬಂದಿ ನೇಮಕಾತಿ, ಔಷಧ ಖರೀದಿ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ನಿಯಮಾನುಸಾರ ಪ್ರತಿ ಆಂಬುಲೆನ್ಸ್ನಲ್ಲಿ ಒಬ್ಬ ವೈದ್ಯ, ಒಬ್ಬ ಸಹಾಯಕ, ಒಬ್ಬ ‘ಡಿ’ ಗ್ರೂಪ್ ನೌಕರ ಹಾಗೂ ಚಾಲಕ ಇರಬೇಕು. ವೈದ್ಯರಿಗೆ ₹ 51,600, ಸಹಾಯಕರಿಗೆ ₹ 20,000, ಚಾಲಕರಿಗೆ ₹ 18,000 ವೇತನ ನೀಡಬೇಕು. 275 ಆಂಬುಲೆನ್ಸ್ಗಳಿಗೆ 300 ಜನ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿತ್ತು.</p>.<p>ನಿಯಮಗಳನ್ನು ಗಾಳಿಗೆ ತೂರಿರುವ ಖಾಸಗಿ ಕಂಪನಿ ವೈದ್ಯರಿಗೆ ₹ 40,000, ಸಹಾಯಕರಿಗೆ ₹ 18,000, ‘ಡಿ’ ಗ್ರೂಪ್ ಸಿಬ್ಬಂದಿಗೆ ₹ 15,000 ವೇತನ ನೀಡುತ್ತಿವೆ. ಕಡಿಮೆ ಸಂಬಳದ ಕಾರಣ ಬಹುತೇಕ ವೈದ್ಯರು ಕೆಲಸ ಬಿಟ್ಟಿದ್ದಾರೆ. ಸಹಾಯಕ, ಚಾಲಕ ಮಾತ್ರ ಇದ್ದಾರೆ. ಕೆಲ ಆಂಬುಲೆನ್ಸ್ಗಳಿಗೆ ಸಹಾಯಕರೂ ಇಲ್ಲದೇ ಅವು ನಿಂತಲ್ಲೇ ನಿಂತಿವೆ ಎಂದು ಮೂಲಗಳು ತಿಳಿಸಿವೆ.</p>.<p>‘300 ವೈದ್ಯರ ನೇಮಕಾತಿ ಬದಲು 260 ಮಂದಿಯನ್ನಷ್ಟೇ ನೇಮಕ ಮಾಡಿಕೊಳ್ಳಲಾಗಿದೆ. ನಿಗದಿತ ವೇತನವನ್ನೂ ನೀಡುತ್ತಿಲ್ಲ. ಜಾನುವಾರುಗಳ ಅಗತ್ಯ ಔಷಧಿಯನ್ನೂ ಖರೀದಿಸಿಲ್ಲ. ಆದರೂ ಸರ್ಕಾರ ಪ್ರತಿ ತಿಂಗಳು ₹ 5 ಕೋಟಿ ವೆಚ್ಚ ಭರಿಸುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಗಳೂ ಪರಿಶೀಲಿಸುತಿಲ್ಲ. ಇದರ ವಿರುದ್ಧ ಸರ್ಕಾರದ ಕಾರ್ಯದರ್ಶಿ, ಇಲಾಖಾ ಆಯುಕ್ತರು, ನಿರ್ದೇಶಕರಿಗೆ ದೂರು ಕೊಟ್ಟರೂ ಯಾವ ಪ್ರಯೋಜನವೂ ಆಗಿಲ್ಲ. ಅನಿವಾರ್ಯವಾಗಿ ಕೆಲಸ ಬಿಟ್ಟಿದ್ದೇವೆ’ ಎಂದು ಪಶು ವೈದ್ಯರೊಬ್ಬರು ತಿಳಿಸಿದರು.</p>.<p>‘ನಮ್ಮ ಜಿಲ್ಲೆಯಲ್ಲಿ ಹಾವು ಕಡಿತದಿಂದ ಹೆಚ್ಚು ಜಾನುವಾರು ಸಾಯುತ್ತಿವೆ. ಆದರೆ ಸಂಚಾರ ಪಶು ವಾಹನದಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ಇಲ್ಲವಾಗಿದೆ. ಜೊತೆಗೆ ಸಮಯಾಧಾರಿತ ಲಸಿಕೆಯನ್ನೂ ಹಾಕುತ್ತಿಲ್ಲ. ಯಾವ ಕಾರಣಕ್ಕೆ ಆಂಬುಲೆನ್ಸ್ ಇವೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಭರಮಸಾಗರದ ರೈತ ತಿಪ್ಪೇಸ್ವಾಮಿ ಆರೋಪಿಸಿದರು.</p>.<p>ಹೊರರಾಜ್ಯಗಳತ್ತ ವೈದ್ಯರ ವಲಸೆ ‘ಸಂಚಾರ ಪಶು ಚಿಕಿತ್ಸಾಲಯಗಳು ಬೇರೆ ರಾಜ್ಯಗಳಲ್ಲಿ ಯಶಸ್ವಿಯಾಗಿದ್ದು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿವೆ. ಜೊತೆಗೆ ನಿಗದಿತ ವೇತನ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವು ಪಶು ವೈದ್ಯರು ಹೊರರಾಜ್ಯಗಳಿಗೆ ವಲಸೆ ಹೋಗಿ ನೌಕರಿ ಪಡೆದಿದ್ದಾರೆ’ ಎಂದು ಪಶುವೈದ್ಯರೊಬ್ಬರು ತಿಳಿಸಿದರು.</p>.<div><blockquote>ಸಂಚಾರ ಪಶು ಚಿಕಿತ್ಸಾಲಯಗಳ ನಿರ್ವಹಣೆ ಕುರಿತಂತೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರಿಶೀಲನಾ ಸಭೆ ನಡೆಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡುತ್ತೇನೆ.</blockquote><span class="attribution">ಶ್ರೀರೂಪ, ಆಯುಕ್ತರು, ಪಶುಸಂಗೋಪನಾ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರಾಜ್ಯದಾದ್ಯಂತ ಆರಂಭಿಸಲಾಗಿರುವ ಸಂಚಾರ ಪಶು ಚಿಕಿತ್ಸಾಲಯ (ವೆಟ್ ಆಂಬುಲೆನ್ಸ್) ಸೇವೆಯು ವೈದ್ಯರ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದೆ.</p>.<p>ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಿರುವ ಪಶು ವೈದ್ಯರು ಆಂಬುಲೆನ್ಸ್ಗಳಲ್ಲಿ ಇರಬೇಕು. ಆದರೆ, ವೈದ್ಯರೇ ಇಲ್ಲದ ಕಾರಣ ವಾಹನಗಳು ನೆಪಕ್ಕಷ್ಟೇ ಓಡಾಡುತ್ತಿದ್ದು ಆರೋಗ್ಯ ಸೇವೆ ಮರೀಚಿಕೆಯಾಗಿದೆ.</p>.<p>ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿದ್ದು, ವೆಟ್ ಆಂಬುಲೆನ್ಸ್ ಸೇವೆ ರೈತರಿಗೆ ಆಸರೆಯಾಗಬಲ್ಲವು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ನಿಗದಿಗಿಂತ ಕಡಿಮೆ ವೇತನ ನೀಡಿದ ಕಾರಣ ಬಹುತೇಕ ವೈದ್ಯರು ಕೆಲಸ ಬಿಟ್ಟುಹೋಗಿದ್ದಾರೆ. ಈಗ ಅವರ ಸಹಾಯಕರು ಮಾತ್ರ ಇದ್ದು, ಆಂಬುಲೆನ್ಸ್ಗಳಲ್ಲಿ ಅವಶ್ಯ ಔಷಧಿಗಳೂ ಇಲ್ಲದ ಕಾರಣ ಸಂಚಾರ ಚಿಕಿತ್ಸಾಲಯಗಳು ಇದ್ದೂ ಇಲ್ಲದಂತಾಗಿದೆ.</p>.<p>ಆಶ್ಚರ್ಯಕರ ವಿಷಯವೆಂದರೆ, ರಾಜ್ಯ ಸರ್ಕಾರ ಈ ಯೋಜನೆಗಾಗಿ ಮಾಸಿಕ ₹ 5 ಕೋಟಿ ವೆಚ್ಚ ಭರಿಸುತ್ತಿದೆ.</p>.<p>ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯವು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದಾದ್ಯಂತ ಸಂಚಾರ ಪಶು ವಾಹನ ಸೇವೆ ಆರಂಭಿಸಿದೆ. ರಾಜ್ಯದಲ್ಲಿ 2023, ಆ.5ರಿಂದ 275 ಸಂಚಾರ ಪಶು ವಾಹನಗಳ ಸೇವೆ ಆರಂಭಗೊಂಡಿದೆ. ಆಂಬುಲೆನ್ಸ್ಗಳ ನಿರ್ವಹಣಾ ಜವಾಬ್ದಾರಿಯನ್ನು ಮೆ.ಎಡುಸ್ಟಾರ್ಕ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ₹ 173 ಕೋಟಿಗೆ ಹೊರಗುತ್ತಿಗೆ ಪಡೆದಿದೆ.</p>.<p>ಸಿಬ್ಬಂದಿ ನೇಮಕಾತಿ, ಔಷಧ ಖರೀದಿ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ನಿಯಮಾನುಸಾರ ಪ್ರತಿ ಆಂಬುಲೆನ್ಸ್ನಲ್ಲಿ ಒಬ್ಬ ವೈದ್ಯ, ಒಬ್ಬ ಸಹಾಯಕ, ಒಬ್ಬ ‘ಡಿ’ ಗ್ರೂಪ್ ನೌಕರ ಹಾಗೂ ಚಾಲಕ ಇರಬೇಕು. ವೈದ್ಯರಿಗೆ ₹ 51,600, ಸಹಾಯಕರಿಗೆ ₹ 20,000, ಚಾಲಕರಿಗೆ ₹ 18,000 ವೇತನ ನೀಡಬೇಕು. 275 ಆಂಬುಲೆನ್ಸ್ಗಳಿಗೆ 300 ಜನ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿತ್ತು.</p>.<p>ನಿಯಮಗಳನ್ನು ಗಾಳಿಗೆ ತೂರಿರುವ ಖಾಸಗಿ ಕಂಪನಿ ವೈದ್ಯರಿಗೆ ₹ 40,000, ಸಹಾಯಕರಿಗೆ ₹ 18,000, ‘ಡಿ’ ಗ್ರೂಪ್ ಸಿಬ್ಬಂದಿಗೆ ₹ 15,000 ವೇತನ ನೀಡುತ್ತಿವೆ. ಕಡಿಮೆ ಸಂಬಳದ ಕಾರಣ ಬಹುತೇಕ ವೈದ್ಯರು ಕೆಲಸ ಬಿಟ್ಟಿದ್ದಾರೆ. ಸಹಾಯಕ, ಚಾಲಕ ಮಾತ್ರ ಇದ್ದಾರೆ. ಕೆಲ ಆಂಬುಲೆನ್ಸ್ಗಳಿಗೆ ಸಹಾಯಕರೂ ಇಲ್ಲದೇ ಅವು ನಿಂತಲ್ಲೇ ನಿಂತಿವೆ ಎಂದು ಮೂಲಗಳು ತಿಳಿಸಿವೆ.</p>.<p>‘300 ವೈದ್ಯರ ನೇಮಕಾತಿ ಬದಲು 260 ಮಂದಿಯನ್ನಷ್ಟೇ ನೇಮಕ ಮಾಡಿಕೊಳ್ಳಲಾಗಿದೆ. ನಿಗದಿತ ವೇತನವನ್ನೂ ನೀಡುತ್ತಿಲ್ಲ. ಜಾನುವಾರುಗಳ ಅಗತ್ಯ ಔಷಧಿಯನ್ನೂ ಖರೀದಿಸಿಲ್ಲ. ಆದರೂ ಸರ್ಕಾರ ಪ್ರತಿ ತಿಂಗಳು ₹ 5 ಕೋಟಿ ವೆಚ್ಚ ಭರಿಸುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಗಳೂ ಪರಿಶೀಲಿಸುತಿಲ್ಲ. ಇದರ ವಿರುದ್ಧ ಸರ್ಕಾರದ ಕಾರ್ಯದರ್ಶಿ, ಇಲಾಖಾ ಆಯುಕ್ತರು, ನಿರ್ದೇಶಕರಿಗೆ ದೂರು ಕೊಟ್ಟರೂ ಯಾವ ಪ್ರಯೋಜನವೂ ಆಗಿಲ್ಲ. ಅನಿವಾರ್ಯವಾಗಿ ಕೆಲಸ ಬಿಟ್ಟಿದ್ದೇವೆ’ ಎಂದು ಪಶು ವೈದ್ಯರೊಬ್ಬರು ತಿಳಿಸಿದರು.</p>.<p>‘ನಮ್ಮ ಜಿಲ್ಲೆಯಲ್ಲಿ ಹಾವು ಕಡಿತದಿಂದ ಹೆಚ್ಚು ಜಾನುವಾರು ಸಾಯುತ್ತಿವೆ. ಆದರೆ ಸಂಚಾರ ಪಶು ವಾಹನದಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ಇಲ್ಲವಾಗಿದೆ. ಜೊತೆಗೆ ಸಮಯಾಧಾರಿತ ಲಸಿಕೆಯನ್ನೂ ಹಾಕುತ್ತಿಲ್ಲ. ಯಾವ ಕಾರಣಕ್ಕೆ ಆಂಬುಲೆನ್ಸ್ ಇವೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಭರಮಸಾಗರದ ರೈತ ತಿಪ್ಪೇಸ್ವಾಮಿ ಆರೋಪಿಸಿದರು.</p>.<p>ಹೊರರಾಜ್ಯಗಳತ್ತ ವೈದ್ಯರ ವಲಸೆ ‘ಸಂಚಾರ ಪಶು ಚಿಕಿತ್ಸಾಲಯಗಳು ಬೇರೆ ರಾಜ್ಯಗಳಲ್ಲಿ ಯಶಸ್ವಿಯಾಗಿದ್ದು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿವೆ. ಜೊತೆಗೆ ನಿಗದಿತ ವೇತನ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವು ಪಶು ವೈದ್ಯರು ಹೊರರಾಜ್ಯಗಳಿಗೆ ವಲಸೆ ಹೋಗಿ ನೌಕರಿ ಪಡೆದಿದ್ದಾರೆ’ ಎಂದು ಪಶುವೈದ್ಯರೊಬ್ಬರು ತಿಳಿಸಿದರು.</p>.<div><blockquote>ಸಂಚಾರ ಪಶು ಚಿಕಿತ್ಸಾಲಯಗಳ ನಿರ್ವಹಣೆ ಕುರಿತಂತೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರಿಶೀಲನಾ ಸಭೆ ನಡೆಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡುತ್ತೇನೆ.</blockquote><span class="attribution">ಶ್ರೀರೂಪ, ಆಯುಕ್ತರು, ಪಶುಸಂಗೋಪನಾ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>