<p><strong>ಸಿರಿಗೆರೆ</strong>: ಕಳೆದ ವರ್ಷ ಅಡಿಕೆ ತೋಟಗಳಲ್ಲಿ ಸಮೃದ್ಧಿಯಾದ ಫಸಲು ಕಂಡಿದ್ದ ಅಡಿಕೆ ಬೆಳೆಗಾರರು ಈ ಬಾರಿ ಇಳುವರಿ ಕುಸಿತದ ಆತಂಕಕ್ಕೆ ಈಡಾಗಿದ್ದಾರೆ. ಬೇಸಿಗೆ ಅವಧಿಯಲ್ಲಿ ಅಧಿಕ ತಾಪಮಾನದಿಂದ ಬಳಲಿದ್ದ ಮರಗಳು ಇಂದಿಗೂ ಚೇತರಿಸಿಕೊಳ್ಳದ ಕಾರಣ ಅದರ ಪರಿಣಾಮ ಈಗ ರೈತರನ್ನು ಕಾಡುತ್ತಿದೆ.</p>.<p>ಗುಣಮಟ್ಟದ ಅಡಿಕೆ ಬೆಳೆಯಲು 30ರಿಂದ 32 ಡಿಗ್ರಿ ಸೆಲ್ಸಿಯಸ್ ತಾಪಮಾನದ ಅಗತ್ಯ ಇದೆ. ಆದರೆ ಕಳೆದ ಬೇಸಿಗೆಯಲ್ಲಿ ತಾಲ್ಲೂಕಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಿದ್ದ ಕಾರಣ ಮರಗಳು ಬಿಸಿಲಿನಿಂದ ಬಸವಳಿದಿದ್ದವು. ಮುಂಗಾರು ನಂತರ ತೋಟಗಳು ಹಸಿಯಾಗುತ್ತಿದ್ದಂತೆ ಹೊಂಬಾಳೆಯಲ್ಲಿ ಕಾಯಿಗಟ್ಟುತ್ತಿದ್ದ ಅಡಿಕೆ ದುಂಡುಗಳು ಉದುರಿ ನೆಲದ ಪಾಲಾಗುತ್ತಿರುವುದನ್ನು ರೈತರು ಆತಂಕದಿಂದ ನೋಡುವಂತಾಗಿದೆ.</p>.<p>ಬೇಸಿಗೆಯ ಹೆಚ್ಚು ಪರಿಣಾಮದಿಂದಾಗಿ ಮಳೆಗಾಲದಲ್ಲೂ ಕಾಯಿ ಉದುರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಈ ವರ್ಷದ ಫಸಲು ಕುಂಠಿತವಾಗುವ ಲಕ್ಷಣಗಳು ಎದುರಾಗಿದ್ದು ಬೆಳೆಗಾರರನ್ನು ಆತಂಕಕ್ಕೆ ಸಿಲುಕಿಸಿದೆ.</p>.<p>ಇದು ಒಂದು ಸಮಸ್ಯೆಯಾದರೆ, ಮತ್ತೊಂದೆಡೆ ಆರೋಗ್ಯಕರ ಹಸಿರು ಹೊಂಬಾಳೆಗಳಲ್ಲಿ ಕಾಯಿಗಟ್ಟುತ್ತಿದ್ದಂತೆ ಹಲವು ಕುಂಚಿಕೆಗಳು ಇದ್ದಕ್ಕಿದ್ದಂತೆ ಬಾಡಿಹೋಗಿ ಕಪ್ಪಾದ ಬಣ್ಣಕ್ಕೆ ತಿರುಗಿದ್ದು ಜೋತುಬೀಳುತ್ತಿವೆ. ಹೊಸದಾಗಿ ಫಸಲಿಗೆ ಬರುವ ಗಿಡಗಳಲ್ಲಿ ಈ ಸಮಸ್ಯೆಯನ್ನು ರೈತರು ಕಂಡಿದ್ದರು. ಆದರೆ, ಈ ವರ್ಷ ಹಳೆಯ ತೋಟಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಫಲ ಕೈಗೆ ಸಿಗುವ ಮುನ್ನವೇ ಹಲವು ತೊಂದರೆಗಳನ್ನು ಎದರಿಸಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಿದೆ.</p>.<p>ಹೊಸದಾಗಿ ತೋಟ ಮಾಡಿರುವವರು ಗಿಡಗಳಿಗೆ ತಗುಲುತ್ತಿರುವ ಕೆಂಪು ಚುಕ್ಕೆ ರೋಗಕ್ಕೆ ಪರಿತಪಿಸುತ್ತಿದ್ದಾರೆ. ಹಳೆ ತೋಟದ ರೈತರು ಹಳದಿ ಎಲೆ ರೋಗದ ಸಮಸ್ಯೆಗೆ ತುತ್ತಾಗಿದ್ದಾರೆ. ತೋಟಗಾರಿಕೆ ಇಲಾಖೆಯ ತಜ್ಞರಿಂದ ಮಾಹಿತಿ ಪಡೆದು ಪೋಷಣೆ ಮಾಡಿದ್ದರೂ ಇಂತಹ ಆತಂಕದಿಂದ ಕೆಲವು ರೈತರು ದೂರವಾಗಿಲ್ಲ. ಖರ್ಚು ಮಾಡಿ ಜಮೀನು ಸಿದ್ಧಗೊಳಿಸಿ, ಕೊಳವೆ ಬಾವಿ, ವಿದ್ಯುತ್ ಸಂಪರ್ಕ, ಡ್ರಿಪ್ ಸಂಪರ್ಕ ಮಾಡಿಕೊಂಡು ಈಗ ಇಂತಹ ಸಂಕಷ್ಟ ಎದುರಿಸಬೇಕಾಗಿ ಬಂದಿರುವುದು ಕೃಷಿಕರಿಗೆ ಸಹಜವಾಗಿ ನೋವು ತಂದಿದೆ.</p>.<p>‘ಕಳೆದ ಬಾರಿ ತಮ್ಮ ತೋಟದಲ್ಲಿ 20 ಕ್ವಿಂಟಲ್ ಅಡಿಕೆ ಬಂದಿತ್ತು. ಈ ವರ್ಷ 4 ಕ್ವಿಂಟಲ್ನಷ್ಟು ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಫಸಲು ಕುಂಠಿತ ಆಗಿರುವುದರಿಂದ ಖೇಣಿ ಮಾಡುತ್ತಿದ್ದ ವರ್ತಕರು ತೋಟಗಳ ಕಡೆ ಮುಖ ಮಾಡುವುದನ್ನೇ ಬಿಟ್ಟಿದ್ದಾರೆ. ಹಸಿ ಅಡಿಕೆ ಕೊಳ್ಳುತ್ತಿದ್ದ ಖೇಣಿದಾರರು ಸಹ ನಿರ್ದಿಷ್ಟ ದರದ ಕರಾರಿಗೆ ಬದ್ಧವಾಗಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ರೈತ ಎಸ್.ಯು. ಮಂಜುನಾಥ್ ಹೇಳಿದರು.</p>.<p><strong>ಅಳಿಲು ಕಾಟ: </strong>ಮುಂಗಾರು ಸುರಿಯುತ್ತಿದ್ದಂತೆ ತೋಟಗಳನ್ನು ಹಸನು ಮಾಡಿದ ಕೃಷಿಕರು ಈಗ ಮತ್ತೊಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ತೋಟ ಸ್ವಚ್ಛವಾಗುತ್ತಿದ್ದಂತೆ ಅಳಿಲುಗಳು ತಂಡೋಪತಂಡವಾಗಿ ಅಡಿಕೆ ಮರಗಳನ್ನೇರಿ ಕಾಯಿಗಟ್ಟುತ್ತಿರುವ ಅಡಿಕೆಯನ್ನು ಚೀಪಿ ನೆಲಕ್ಕುರುಳಿಸುತ್ತಿವೆ. ಹಲವು ತೋಟಗಳಲ್ಲಿ ಗಿಡಗಳ ಬುಡದಲ್ಲಿ ಕೆ.ಜಿ.ಗಟ್ಟಲೆ ಹಸಿ ಅಡಿಕೆಕಾಯಿ ಬಿದ್ದಿರುವುದು ಬೆಳೆಗಾರರ ಮತ್ತೊಂದು ಸಂಕಟಕ್ಕೆ ಕಾರಣವಾಗಿದೆ.</p>.<p>‘ಮುಖ್ಯವಾಗಿ ರೈತರು ತಮ್ಮ ತೋಟದಲ್ಲಿನ ಮಣ್ಣು ಪರೀಕ್ಷೆ ಮಾಡಿಸಬೇಕು. ವರ್ಷದಲ್ಲಿ ಒಮ್ಮೆಯಾದರೂ ಅಡಿಕೆ ಬೆಳೆಗೆ ಪೋಷಕಾಂಶಗಳು ಮತ್ತು ಜಿಂಕ್, ಬೊರಾನ್, ಐರನ್, ಮ್ಯಾಂಗನೀಸ್ ಯುಕ್ತ ಲಘು ಪೋಷಕಾಂಶಗಳನ್ನು ಭೂಮಿಗೆ ಕೊಡಬೇಕು. ಇವು ಗಿಡದ ಬೇರುಗಳನ್ನು ಸದೃಢಗೊಳಿಸಿ ಉತ್ತಮ ಬೆಳೆ ನೀಡಲು ಸಹಕಾರಿಯಾಗುತ್ತವೆ‘ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವನಜಾಕ್ಷಿ ಹೇಳಿದರು.</p>.<p> ಸಸಿಗೆ ಬೇಡಿಕೆ ಹೆಚ್ಚಳ ಭರಮಸಾಗರ ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ಬರುತ್ತಿದ್ದಂತೆಯೇ ಸಾಂಪ್ರದಾಯಿಕ ಕೃಷಿಕರೂ ಅಡಿಕೆ ಬೆಳೆಯತ್ತ ಗಮನ ಹರಿಸಿದ್ದಾರೆ. ಅಡಿಕೆಯಿಂದ ಬರುವ ಅಧಿಕ ಬೆಲೆ ರೈತರಲ್ಲಿ ಹುಮ್ಮಸ್ಸು ಹುಟ್ಟಿಸಿದೆ. ಇದರಿಂದ ಅಡಿಕೆ ಗಿಡಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ ₹ 28– 30ಕ್ಕೆ ಸಿಗುತ್ತಿದ್ದ ಸಸಿಗಳ ಬೆಲೆ ಈಗ ₹ 40ಕ್ಕೆ ಏರಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ</strong>: ಕಳೆದ ವರ್ಷ ಅಡಿಕೆ ತೋಟಗಳಲ್ಲಿ ಸಮೃದ್ಧಿಯಾದ ಫಸಲು ಕಂಡಿದ್ದ ಅಡಿಕೆ ಬೆಳೆಗಾರರು ಈ ಬಾರಿ ಇಳುವರಿ ಕುಸಿತದ ಆತಂಕಕ್ಕೆ ಈಡಾಗಿದ್ದಾರೆ. ಬೇಸಿಗೆ ಅವಧಿಯಲ್ಲಿ ಅಧಿಕ ತಾಪಮಾನದಿಂದ ಬಳಲಿದ್ದ ಮರಗಳು ಇಂದಿಗೂ ಚೇತರಿಸಿಕೊಳ್ಳದ ಕಾರಣ ಅದರ ಪರಿಣಾಮ ಈಗ ರೈತರನ್ನು ಕಾಡುತ್ತಿದೆ.</p>.<p>ಗುಣಮಟ್ಟದ ಅಡಿಕೆ ಬೆಳೆಯಲು 30ರಿಂದ 32 ಡಿಗ್ರಿ ಸೆಲ್ಸಿಯಸ್ ತಾಪಮಾನದ ಅಗತ್ಯ ಇದೆ. ಆದರೆ ಕಳೆದ ಬೇಸಿಗೆಯಲ್ಲಿ ತಾಲ್ಲೂಕಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಿದ್ದ ಕಾರಣ ಮರಗಳು ಬಿಸಿಲಿನಿಂದ ಬಸವಳಿದಿದ್ದವು. ಮುಂಗಾರು ನಂತರ ತೋಟಗಳು ಹಸಿಯಾಗುತ್ತಿದ್ದಂತೆ ಹೊಂಬಾಳೆಯಲ್ಲಿ ಕಾಯಿಗಟ್ಟುತ್ತಿದ್ದ ಅಡಿಕೆ ದುಂಡುಗಳು ಉದುರಿ ನೆಲದ ಪಾಲಾಗುತ್ತಿರುವುದನ್ನು ರೈತರು ಆತಂಕದಿಂದ ನೋಡುವಂತಾಗಿದೆ.</p>.<p>ಬೇಸಿಗೆಯ ಹೆಚ್ಚು ಪರಿಣಾಮದಿಂದಾಗಿ ಮಳೆಗಾಲದಲ್ಲೂ ಕಾಯಿ ಉದುರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಈ ವರ್ಷದ ಫಸಲು ಕುಂಠಿತವಾಗುವ ಲಕ್ಷಣಗಳು ಎದುರಾಗಿದ್ದು ಬೆಳೆಗಾರರನ್ನು ಆತಂಕಕ್ಕೆ ಸಿಲುಕಿಸಿದೆ.</p>.<p>ಇದು ಒಂದು ಸಮಸ್ಯೆಯಾದರೆ, ಮತ್ತೊಂದೆಡೆ ಆರೋಗ್ಯಕರ ಹಸಿರು ಹೊಂಬಾಳೆಗಳಲ್ಲಿ ಕಾಯಿಗಟ್ಟುತ್ತಿದ್ದಂತೆ ಹಲವು ಕುಂಚಿಕೆಗಳು ಇದ್ದಕ್ಕಿದ್ದಂತೆ ಬಾಡಿಹೋಗಿ ಕಪ್ಪಾದ ಬಣ್ಣಕ್ಕೆ ತಿರುಗಿದ್ದು ಜೋತುಬೀಳುತ್ತಿವೆ. ಹೊಸದಾಗಿ ಫಸಲಿಗೆ ಬರುವ ಗಿಡಗಳಲ್ಲಿ ಈ ಸಮಸ್ಯೆಯನ್ನು ರೈತರು ಕಂಡಿದ್ದರು. ಆದರೆ, ಈ ವರ್ಷ ಹಳೆಯ ತೋಟಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಫಲ ಕೈಗೆ ಸಿಗುವ ಮುನ್ನವೇ ಹಲವು ತೊಂದರೆಗಳನ್ನು ಎದರಿಸಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಿದೆ.</p>.<p>ಹೊಸದಾಗಿ ತೋಟ ಮಾಡಿರುವವರು ಗಿಡಗಳಿಗೆ ತಗುಲುತ್ತಿರುವ ಕೆಂಪು ಚುಕ್ಕೆ ರೋಗಕ್ಕೆ ಪರಿತಪಿಸುತ್ತಿದ್ದಾರೆ. ಹಳೆ ತೋಟದ ರೈತರು ಹಳದಿ ಎಲೆ ರೋಗದ ಸಮಸ್ಯೆಗೆ ತುತ್ತಾಗಿದ್ದಾರೆ. ತೋಟಗಾರಿಕೆ ಇಲಾಖೆಯ ತಜ್ಞರಿಂದ ಮಾಹಿತಿ ಪಡೆದು ಪೋಷಣೆ ಮಾಡಿದ್ದರೂ ಇಂತಹ ಆತಂಕದಿಂದ ಕೆಲವು ರೈತರು ದೂರವಾಗಿಲ್ಲ. ಖರ್ಚು ಮಾಡಿ ಜಮೀನು ಸಿದ್ಧಗೊಳಿಸಿ, ಕೊಳವೆ ಬಾವಿ, ವಿದ್ಯುತ್ ಸಂಪರ್ಕ, ಡ್ರಿಪ್ ಸಂಪರ್ಕ ಮಾಡಿಕೊಂಡು ಈಗ ಇಂತಹ ಸಂಕಷ್ಟ ಎದುರಿಸಬೇಕಾಗಿ ಬಂದಿರುವುದು ಕೃಷಿಕರಿಗೆ ಸಹಜವಾಗಿ ನೋವು ತಂದಿದೆ.</p>.<p>‘ಕಳೆದ ಬಾರಿ ತಮ್ಮ ತೋಟದಲ್ಲಿ 20 ಕ್ವಿಂಟಲ್ ಅಡಿಕೆ ಬಂದಿತ್ತು. ಈ ವರ್ಷ 4 ಕ್ವಿಂಟಲ್ನಷ್ಟು ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಫಸಲು ಕುಂಠಿತ ಆಗಿರುವುದರಿಂದ ಖೇಣಿ ಮಾಡುತ್ತಿದ್ದ ವರ್ತಕರು ತೋಟಗಳ ಕಡೆ ಮುಖ ಮಾಡುವುದನ್ನೇ ಬಿಟ್ಟಿದ್ದಾರೆ. ಹಸಿ ಅಡಿಕೆ ಕೊಳ್ಳುತ್ತಿದ್ದ ಖೇಣಿದಾರರು ಸಹ ನಿರ್ದಿಷ್ಟ ದರದ ಕರಾರಿಗೆ ಬದ್ಧವಾಗಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ರೈತ ಎಸ್.ಯು. ಮಂಜುನಾಥ್ ಹೇಳಿದರು.</p>.<p><strong>ಅಳಿಲು ಕಾಟ: </strong>ಮುಂಗಾರು ಸುರಿಯುತ್ತಿದ್ದಂತೆ ತೋಟಗಳನ್ನು ಹಸನು ಮಾಡಿದ ಕೃಷಿಕರು ಈಗ ಮತ್ತೊಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ತೋಟ ಸ್ವಚ್ಛವಾಗುತ್ತಿದ್ದಂತೆ ಅಳಿಲುಗಳು ತಂಡೋಪತಂಡವಾಗಿ ಅಡಿಕೆ ಮರಗಳನ್ನೇರಿ ಕಾಯಿಗಟ್ಟುತ್ತಿರುವ ಅಡಿಕೆಯನ್ನು ಚೀಪಿ ನೆಲಕ್ಕುರುಳಿಸುತ್ತಿವೆ. ಹಲವು ತೋಟಗಳಲ್ಲಿ ಗಿಡಗಳ ಬುಡದಲ್ಲಿ ಕೆ.ಜಿ.ಗಟ್ಟಲೆ ಹಸಿ ಅಡಿಕೆಕಾಯಿ ಬಿದ್ದಿರುವುದು ಬೆಳೆಗಾರರ ಮತ್ತೊಂದು ಸಂಕಟಕ್ಕೆ ಕಾರಣವಾಗಿದೆ.</p>.<p>‘ಮುಖ್ಯವಾಗಿ ರೈತರು ತಮ್ಮ ತೋಟದಲ್ಲಿನ ಮಣ್ಣು ಪರೀಕ್ಷೆ ಮಾಡಿಸಬೇಕು. ವರ್ಷದಲ್ಲಿ ಒಮ್ಮೆಯಾದರೂ ಅಡಿಕೆ ಬೆಳೆಗೆ ಪೋಷಕಾಂಶಗಳು ಮತ್ತು ಜಿಂಕ್, ಬೊರಾನ್, ಐರನ್, ಮ್ಯಾಂಗನೀಸ್ ಯುಕ್ತ ಲಘು ಪೋಷಕಾಂಶಗಳನ್ನು ಭೂಮಿಗೆ ಕೊಡಬೇಕು. ಇವು ಗಿಡದ ಬೇರುಗಳನ್ನು ಸದೃಢಗೊಳಿಸಿ ಉತ್ತಮ ಬೆಳೆ ನೀಡಲು ಸಹಕಾರಿಯಾಗುತ್ತವೆ‘ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವನಜಾಕ್ಷಿ ಹೇಳಿದರು.</p>.<p> ಸಸಿಗೆ ಬೇಡಿಕೆ ಹೆಚ್ಚಳ ಭರಮಸಾಗರ ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ಬರುತ್ತಿದ್ದಂತೆಯೇ ಸಾಂಪ್ರದಾಯಿಕ ಕೃಷಿಕರೂ ಅಡಿಕೆ ಬೆಳೆಯತ್ತ ಗಮನ ಹರಿಸಿದ್ದಾರೆ. ಅಡಿಕೆಯಿಂದ ಬರುವ ಅಧಿಕ ಬೆಲೆ ರೈತರಲ್ಲಿ ಹುಮ್ಮಸ್ಸು ಹುಟ್ಟಿಸಿದೆ. ಇದರಿಂದ ಅಡಿಕೆ ಗಿಡಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ ₹ 28– 30ಕ್ಕೆ ಸಿಗುತ್ತಿದ್ದ ಸಸಿಗಳ ಬೆಲೆ ಈಗ ₹ 40ಕ್ಕೆ ಏರಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>