<p><strong>ಮೊಳಕಾಲ್ಮುರು:</strong> ತಾಲ್ಲೂಕಿನಾದ್ಯಂತ ಶುಕ್ರವಾರ ಹೆಚ್ಚಿನ ಮಳೆಯಾಗಿದ್ದು, ಸಣ್ಣ ಪ್ರಮಾಣದ ಹಾನಿಗಳು ಸಂಭವಿಸಿವೆ.</p>.<p>ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 34 ಮಿಮೀ, ರಾಯಾಪುರ ಕೇಂದ್ರದಲ್ಲಿ 45.32 ಮಿಮೀ, ಬಿ.ಜಿ.ಕೆರೆಯಲ್ಲಿ 38.4 ಮಿಮೀ, ರಾಂಪುರ ಕೇಂದ್ರದಲ್ಲಿ 16 ಮಿಮೀ ಹಾಗೂ ದೇವಸಮುದ್ರ ಮಾಪನ ಕೇಂದ್ರದಲ್ಲಿ 20.2 ಮಿಮೀ ಮಳೆ ದಾಖಲಾಗಿದೆ.</p>.<p>ರಾತ್ರಿ 9 ಗಂಟೆಗೆ ಭಾರಿ ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಆಗಾಗ ವಿರಾಮ ನೀಡಿದರೂ ಬೆಳಗಿನ ಜಾವದವರೆಗೆ ಸುರಿಯುತು. ಅನೇಕ ಕಡೆ ಚೆಕ್ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಇದು ಈ ವರ್ಷ ಬಂದಿರುವ ದೊಡ್ಡ ಮಳೆಯಾಗಿದ್ದು, ಹಲವು ತಿಂಗಳುಗಳಿಂದ ಮಳೆಯನ್ನು ಕಾಣದ ತಾಲ್ಲೂಕಿನ ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ. ಕೆಲವೆಡೆ ಬಿತ್ತನೆ ಶೇಂಗಾ ಕಾಯಿ ಖರೀದಿ ಕಂಡುಬಂದಿತು.</p>.<p>ದೇವಸಮುದ್ರ ಹೋಬಳಿಯ ಓಬಳಾಪುರ ಹಾಗೂ ಜೆ.ಬಿ.ಹಳ್ಳಿಯಲ್ಲಿ ಕುಮಾರಿ, ಗಂಗಾರೆಡ್ಡಿ ಹಾಗೂ ಸಿದ್ದಲಿಂಗಪ್ಪ ಅವರಿಗೆ ಸೇರಿದ ಒಟ್ಟು 2 ಹೆಕ್ಟೇರ್ನಷ್ಟು ಬಾಳೆ ತೋಟ ಹಾನಿಗೀಡಾಗಿದೆ. ಚಿಕ್ಕೋಬನಹಳ್ಳಿ, ಮಾಚೇನಹಳ್ಳಿಯಲ್ಲಿ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ತಾಲ್ಲೂಕಿನಾದ್ಯಂತ ಶುಕ್ರವಾರ ಹೆಚ್ಚಿನ ಮಳೆಯಾಗಿದ್ದು, ಸಣ್ಣ ಪ್ರಮಾಣದ ಹಾನಿಗಳು ಸಂಭವಿಸಿವೆ.</p>.<p>ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 34 ಮಿಮೀ, ರಾಯಾಪುರ ಕೇಂದ್ರದಲ್ಲಿ 45.32 ಮಿಮೀ, ಬಿ.ಜಿ.ಕೆರೆಯಲ್ಲಿ 38.4 ಮಿಮೀ, ರಾಂಪುರ ಕೇಂದ್ರದಲ್ಲಿ 16 ಮಿಮೀ ಹಾಗೂ ದೇವಸಮುದ್ರ ಮಾಪನ ಕೇಂದ್ರದಲ್ಲಿ 20.2 ಮಿಮೀ ಮಳೆ ದಾಖಲಾಗಿದೆ.</p>.<p>ರಾತ್ರಿ 9 ಗಂಟೆಗೆ ಭಾರಿ ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಆಗಾಗ ವಿರಾಮ ನೀಡಿದರೂ ಬೆಳಗಿನ ಜಾವದವರೆಗೆ ಸುರಿಯುತು. ಅನೇಕ ಕಡೆ ಚೆಕ್ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಇದು ಈ ವರ್ಷ ಬಂದಿರುವ ದೊಡ್ಡ ಮಳೆಯಾಗಿದ್ದು, ಹಲವು ತಿಂಗಳುಗಳಿಂದ ಮಳೆಯನ್ನು ಕಾಣದ ತಾಲ್ಲೂಕಿನ ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ. ಕೆಲವೆಡೆ ಬಿತ್ತನೆ ಶೇಂಗಾ ಕಾಯಿ ಖರೀದಿ ಕಂಡುಬಂದಿತು.</p>.<p>ದೇವಸಮುದ್ರ ಹೋಬಳಿಯ ಓಬಳಾಪುರ ಹಾಗೂ ಜೆ.ಬಿ.ಹಳ್ಳಿಯಲ್ಲಿ ಕುಮಾರಿ, ಗಂಗಾರೆಡ್ಡಿ ಹಾಗೂ ಸಿದ್ದಲಿಂಗಪ್ಪ ಅವರಿಗೆ ಸೇರಿದ ಒಟ್ಟು 2 ಹೆಕ್ಟೇರ್ನಷ್ಟು ಬಾಳೆ ತೋಟ ಹಾನಿಗೀಡಾಗಿದೆ. ಚಿಕ್ಕೋಬನಹಳ್ಳಿ, ಮಾಚೇನಹಳ್ಳಿಯಲ್ಲಿ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>