ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಇಲಿ, ಹೆಗ್ಗಣಗಳ ಆಶ್ರಯತಾಣವಾದ ವಾಲ್ಮೀಕಿ ಭವನ

‘ಒಳಗೆ ತಳಕು ಹೊರಗೆ ಹುಳುಕು’ ಸ್ಥಿತಿಯಲ್ಲಿ ಕಟ್ಟಡ; ಪ್ರವೇಶದ್ವಾರದಲ್ಲಿ ದುರ್ವಾಸನೆ, ಅವೈಜ್ಞಾನಿಕ ಕಾಮಗಾರಿ
Published : 14 ಸೆಪ್ಟೆಂಬರ್ 2024, 6:36 IST
Last Updated : 14 ಸೆಪ್ಟೆಂಬರ್ 2024, 6:36 IST
ಫಾಲೋ ಮಾಡಿ
Comments
ಮುಗಿಲೆತ್ತರಕ್ಕೆ ನಿಂತಿರುವ ವಾಲ್ಮೀಕಿ ಭವನ ಅನಾಥ ಚುನಾವಣೆ ವೇಳೆ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆ ತನಿಖೆಗೆ ಒಳಪಡಿಸುವಂತೆ ಸ್ಥಳೀಯರ ಒತ್ತಾಯ
ವಾಲ್ಮೀಕಿ ಭವನದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜಿಲ್ಲಾಧಿಕಾರಿ ಅನುಮತಿ ಪಡೆದು ಭವನವನ್ನು ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು. ನಂತರ ನಿರ್ವಹಣಾ ಸಮಿತಿ ರಚಿಸಲಾಗುವುದು
ದಿವಾಕರ್‌ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಬೀಗದ ಕೀ ಯಾರ ಬಳಿ ಇದೆ?
ವಾಲ್ಮೀಕಿ ಭವನದ ಬಾಗಿಲು ತೆರೆಸಿ ಒಳಗಿನ ಸ್ಥಿತಿಯನ್ನು ವೀಕ್ಷಿಸಲು ನಡೆಸಿದ ಪ್ರಯತ್ನಗಳು ಫಲಕೊಡಲಿಲ್ಲ. ಭವನದ ಬೀಗದ ಕೀ ಯಾರ ಬಳಿ ಇದೆ ಎಂಬುದೇ ಅಧಿಕಾರಿಗಳಿಗೆ ಗೊತ್ತಿಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ‘ಗುತ್ತಿಗೆ ಕಂಪನಿಯವರು ನಮಗೆ ಇನ್ನೂ ಹಸ್ತಾಂತರ ಮಾಡಿಲ್ಲ ಹೀಗಾಗಿ ನಮ್ಮ ಬಳಿ ಕೀ ಇಲ್ಲ’ ಎಂದರು. ಗುತ್ತಿಗೆದಾರರನ್ನು ಸಂಪರ್ಕಿಸಲು ಯತ್ನಿಸಿದಾಗ ಯಾರೂ ಕರೆ ಸ್ವೀಕಾರ ಮಾಡಲಿಲ್ಲ. ‘ಭವನದ ಬಾಗಿಲು ತೆರೆದರೆ ಒಳಗಿನ ಸ್ಥಿತಿ ತಿಳಿಯುತ್ತಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಯಾರಿಗೂ ಕೀ ಕೊಡುತ್ತಿಲ್ಲ. ಅಧಿಕಾರಿಗಳ ನಡೆ ಅನುಮಾನಾಸ್ಪದವಾಗಿದ್ದು ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಭವನದ ಕಾಮಗಾರಿ ಪರಿಶೀಲಿಸಬೇಕು’ ಪರಿಶಿಷ್ಟ ವರ್ಗಗಳ ಮುಖಂಡರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT