ಬಜಪೆ ಮಸೀದಿ ಕಡೆಯಿಂದ ಸ್ಕೂಟರ್ನಲ್ಲಿ ಬಂದು ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ಮತ್ತೆ ಮಾರುಕಟ್ಟೆ ಸಮೀಪದ ಫೈನಾನ್ಸ್ ಸಂಸ್ಥೆ ಒಳಗೆ ಏಕಾಏಕಿ ನುಗ್ಗಿದ ಅಪರಿಚಿತರು, ಆಸಿಡ್ ತುಂಬಿದ್ದ ಸಣ್ಣ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟಿದ್ದಾರೆ. ಬಳಿಕ ಕ್ಯಾಶ್ ಕೌಂಟರ್ಗೆ ಕೈ ಹಾಕಲು ಪ್ರಯತ್ನಿಸಿದ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ದೂಡಿ ಹಾಕಿದ್ದು, ಅವರು ಕಿರುಚಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.