<p><strong>ತರೀಕೆರೆ</strong>: ಸಮೀಪದ ಬಾವಿಕೆರೆ ಗ್ರಾಮದ ರೋಹಿತ್ ಎಂಬವರ ತೆಂಗಿನ ತೋಟದಲ್ಲಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಬಿಳಿ ನೊಣ ಹತೋಟಿಗೆ ಡ್ರೋನ್ ಸಹಾಯದಿಂದ ಜೈವಿಕ ಕೀಟನಾಶಕದ ಸಿಂಪಡಣೆಯ ಪ್ರಾತಿಕ್ಷಿಕೆಯನ್ನು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.</p>.<p>ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಕೆ. ಸೆಲ್ವರಾಜ್ ಡ್ರೋನ್ ಬಳಸಿ ಕೀಟನಾಶಕ ಸಿಂಪಡಣೆ ಮಾಡುವುದರಿಂದ ಆಗುವ ಉಪಯೋಗಗಳು ಹಾಗೂ ಡ್ರೋನ್ ಯಂತ್ರ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಗ್ರಾಮಸ್ಥರಿಗೆ ವಿವರಿಸಿದರು.</p>.<p> ಜಯಲಕ್ಷ್ಮಿ ಹೆಗ್ಡೆ ಮಾತನಾಡಿ, ‘ಡ್ರೋನ್ ಖರೀದಿಗೆ ರೈತರಿಗಾಗಿ ಲಭ್ಯವಿರುವ ವಿವಿಧ ಯೋಜನೆ ಹಾಗೂ ಸಬ್ಸಿಡಿ ಬಗ್ಗೆ ಮಾಹಿತಿ ನೀಡಿದರು. </p>.<p> ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಜೇಂದ್ರ ಟಿ.ಎಚ್, ಬಸವರಾಜ್, ಕೃಷ್ಣಾ ರೆಡ್ಡಿ , ಮಂಜುನಾಥ್ ಕುದರಿ ಮತ್ತು ಪವಿತ್ರಾ, ಗ್ರಾಮೀಣ ಕೃಷಿ ಕಾರ್ಯನುಭವ ವಿದ್ಯಾರ್ಥಿಗಳಾದ ಆದಿತ್ಯ, ಭರತ್, ಪಾಲ್, ದೀಕ್ಷಿತ್, ಗಗನ್, ರಾಜೇಂದರ್, ಮನೋಜಿ, ನಿತೀಶ್, ಶರತ್ ಕುಮಾರ್, ಶರತ್ ಮಾಳಗಿ, ಸುಷನ್, ಶ್ರೇಯಸ್, ವಿಶ್ವನಾಥ್ ಗೌಡ ಹಾಗೂ ಬಾವಿಕೆರೆ ಗ್ರಾಮದ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ</strong>: ಸಮೀಪದ ಬಾವಿಕೆರೆ ಗ್ರಾಮದ ರೋಹಿತ್ ಎಂಬವರ ತೆಂಗಿನ ತೋಟದಲ್ಲಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಬಿಳಿ ನೊಣ ಹತೋಟಿಗೆ ಡ್ರೋನ್ ಸಹಾಯದಿಂದ ಜೈವಿಕ ಕೀಟನಾಶಕದ ಸಿಂಪಡಣೆಯ ಪ್ರಾತಿಕ್ಷಿಕೆಯನ್ನು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.</p>.<p>ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಕೆ. ಸೆಲ್ವರಾಜ್ ಡ್ರೋನ್ ಬಳಸಿ ಕೀಟನಾಶಕ ಸಿಂಪಡಣೆ ಮಾಡುವುದರಿಂದ ಆಗುವ ಉಪಯೋಗಗಳು ಹಾಗೂ ಡ್ರೋನ್ ಯಂತ್ರ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಗ್ರಾಮಸ್ಥರಿಗೆ ವಿವರಿಸಿದರು.</p>.<p> ಜಯಲಕ್ಷ್ಮಿ ಹೆಗ್ಡೆ ಮಾತನಾಡಿ, ‘ಡ್ರೋನ್ ಖರೀದಿಗೆ ರೈತರಿಗಾಗಿ ಲಭ್ಯವಿರುವ ವಿವಿಧ ಯೋಜನೆ ಹಾಗೂ ಸಬ್ಸಿಡಿ ಬಗ್ಗೆ ಮಾಹಿತಿ ನೀಡಿದರು. </p>.<p> ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಜೇಂದ್ರ ಟಿ.ಎಚ್, ಬಸವರಾಜ್, ಕೃಷ್ಣಾ ರೆಡ್ಡಿ , ಮಂಜುನಾಥ್ ಕುದರಿ ಮತ್ತು ಪವಿತ್ರಾ, ಗ್ರಾಮೀಣ ಕೃಷಿ ಕಾರ್ಯನುಭವ ವಿದ್ಯಾರ್ಥಿಗಳಾದ ಆದಿತ್ಯ, ಭರತ್, ಪಾಲ್, ದೀಕ್ಷಿತ್, ಗಗನ್, ರಾಜೇಂದರ್, ಮನೋಜಿ, ನಿತೀಶ್, ಶರತ್ ಕುಮಾರ್, ಶರತ್ ಮಾಳಗಿ, ಸುಷನ್, ಶ್ರೇಯಸ್, ವಿಶ್ವನಾಥ್ ಗೌಡ ಹಾಗೂ ಬಾವಿಕೆರೆ ಗ್ರಾಮದ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>