<p><strong>ಮುಡಿಪು</strong>: ಯುವವಾಹಿನಿಯಲ್ಲಿ ಅಧ್ಯಕ್ಷ ಪದವಿ ಒಂದು ವರ್ಷದ ಅವಧಿಗೆ ಸೀಮಿತವಾಗಿದ್ದು, ಆ ಒಂದು ವರ್ಷದಲ್ಲಿ ಅಧ್ಯಕ್ಷ ತನ್ನ ತಂಡದೊಂದಿಗೆ ಎಷ್ಟು ಸಾಧನೆ ಮಾಡಲು ಸಾಧ್ಯವೋ ಅಷ್ಟು ಸಾಧನೆ ಮಾಡಲು ಅವಕಾಶ ಕೊಡುತ್ತದೆಯೇ ಹೊರತು ಇನ್ನಷ್ಟು ವರ್ಷ ಪದವಿಯಲ್ಲಿ ಇರಬೇಕು ಎಂದು ಅಧಿಕಾರದಲ್ಲಿರಲು ಅವಕಾಶ ನೀಡಲಾರದು ಎಂದು ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಹೇಳಿದರು.</p>.<p>ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿ 34ನೇ ನೂತನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಯಾವುದೇ ಸಂಘಟನೆ ಸಮಾಜಮುಖಿ ಚಟುವಟಿಕೆ, ಸಮಾಜವನ್ನು ಬಲಿಷ್ಠಗೊಳಿಸುವುದು ಹಾಗೂ ಸಮಾಜದವರಿಗೆ ಸ್ಪಂದಿಸುವುದರಿಂದ ಪ್ರತಿಭೆ ಬೆಳೆಯುತ್ತದೆ ಎನ್ನುವುದಕ್ಕೆ ಯುವವಾಹಿನಿ ಕಾರ್ಯವೈಖರಿ ಉದಾಹರಣೆ ಎಂದರು.</p>.<p>ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ.ಸುವರ್ಣ ‘ಯುವ ಸಿಂಚನ’ ಸಂಚಿಕೆ ಬಿಡುಗಡೆ ಮಾಡಿದರು.</p>.<p>ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.</p>.<p>ಕ್ರೀಡಾಪಟು, ಪ್ರತಿಭಾವಂತ ವಿದ್ಯಾರ್ಥಿನಿ ರೀಕ್ತಾ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸುಂದರ ಸುವರ್ಣ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಮಂಗಳೂರು ವಿವಿ ಉಪನ್ಯಾಸಕ ಭೋಜ ಪೂಜಾರಿ, ಬೆಂಗಳೂರಿನ ಉಪನ್ಯಾಸಕಿ ವಿನುತಾ ಸಾಲ್ಯಾನ್, ಜಗದೀಶಚಂದ್ರ ಡಿ.ಕೆ., ಕೊಲ್ಯ ಘಟಕಾಧ್ಯಕ್ಷ ಲತೀಶ್ ಸಂಕೊಳಿಗೆ ಭಾಗವಹಿಸಿದ್ದರು.</p>.<p>ಯುವವಾಹಿನಿಯ ನೂತನ 34ನೇ ಗ್ರಾಮಚಾವಡಿ ಘಟಕ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ಸ್ವಾಗತಿಸಿದರು.</p>.<p>ಸುರೇಖಾ ಎಚ್.ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ದಯಾನಂದ, ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಅಜಿತ್ ಪೂಜಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಡಿಪು</strong>: ಯುವವಾಹಿನಿಯಲ್ಲಿ ಅಧ್ಯಕ್ಷ ಪದವಿ ಒಂದು ವರ್ಷದ ಅವಧಿಗೆ ಸೀಮಿತವಾಗಿದ್ದು, ಆ ಒಂದು ವರ್ಷದಲ್ಲಿ ಅಧ್ಯಕ್ಷ ತನ್ನ ತಂಡದೊಂದಿಗೆ ಎಷ್ಟು ಸಾಧನೆ ಮಾಡಲು ಸಾಧ್ಯವೋ ಅಷ್ಟು ಸಾಧನೆ ಮಾಡಲು ಅವಕಾಶ ಕೊಡುತ್ತದೆಯೇ ಹೊರತು ಇನ್ನಷ್ಟು ವರ್ಷ ಪದವಿಯಲ್ಲಿ ಇರಬೇಕು ಎಂದು ಅಧಿಕಾರದಲ್ಲಿರಲು ಅವಕಾಶ ನೀಡಲಾರದು ಎಂದು ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಹೇಳಿದರು.</p>.<p>ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿ 34ನೇ ನೂತನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಯಾವುದೇ ಸಂಘಟನೆ ಸಮಾಜಮುಖಿ ಚಟುವಟಿಕೆ, ಸಮಾಜವನ್ನು ಬಲಿಷ್ಠಗೊಳಿಸುವುದು ಹಾಗೂ ಸಮಾಜದವರಿಗೆ ಸ್ಪಂದಿಸುವುದರಿಂದ ಪ್ರತಿಭೆ ಬೆಳೆಯುತ್ತದೆ ಎನ್ನುವುದಕ್ಕೆ ಯುವವಾಹಿನಿ ಕಾರ್ಯವೈಖರಿ ಉದಾಹರಣೆ ಎಂದರು.</p>.<p>ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ.ಸುವರ್ಣ ‘ಯುವ ಸಿಂಚನ’ ಸಂಚಿಕೆ ಬಿಡುಗಡೆ ಮಾಡಿದರು.</p>.<p>ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.</p>.<p>ಕ್ರೀಡಾಪಟು, ಪ್ರತಿಭಾವಂತ ವಿದ್ಯಾರ್ಥಿನಿ ರೀಕ್ತಾ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸುಂದರ ಸುವರ್ಣ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ಮಂಗಳೂರು ವಿವಿ ಉಪನ್ಯಾಸಕ ಭೋಜ ಪೂಜಾರಿ, ಬೆಂಗಳೂರಿನ ಉಪನ್ಯಾಸಕಿ ವಿನುತಾ ಸಾಲ್ಯಾನ್, ಜಗದೀಶಚಂದ್ರ ಡಿ.ಕೆ., ಕೊಲ್ಯ ಘಟಕಾಧ್ಯಕ್ಷ ಲತೀಶ್ ಸಂಕೊಳಿಗೆ ಭಾಗವಹಿಸಿದ್ದರು.</p>.<p>ಯುವವಾಹಿನಿಯ ನೂತನ 34ನೇ ಗ್ರಾಮಚಾವಡಿ ಘಟಕ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ಸ್ವಾಗತಿಸಿದರು.</p>.<p>ಸುರೇಖಾ ಎಚ್.ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ದಯಾನಂದ, ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಅಜಿತ್ ಪೂಜಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>