ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಗೂಡಿನಬಳಿ ರಸ್ತೆಗೆ ನೇತ್ರಾವತಿ ನದಿ ನೆರೆ ನೀರು ನುಗ್ಗಿದ್ದು ರಸ್ತೆಯಲ್ಲೇ ನಾಡದೋಣಿ ಸನ್ನದ್ಧಗೊಳಿಸಲಾಗಿದೆ
ಬಂಟ್ವಾಳ ತಾಲ್ಲೂಕಿನ ನೇತ್ರಾವತಿ ನದಿ ತೀರದಲ್ಲಿ ಜಲಾವೃತಗೊಂಡ ಮನೆಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಹಿತ ತಹಶೀಲ್ದಾರ್ ಅರ್ಚನಾ ಭಟ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿದರು
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಬಸ್ತಿಪಡ್ಪು ಸಮೀಪದಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆ ಸುತ್ತಲೂ ನೀರು ನಿಂತಿದೆ
ಬಂಟ್ವಾಳ ತಾಲ್ಲೂಕಿನ ನೇತ್ರಾವತಿ ನದಿ ತೀರದಲ್ಲಿ ಜಲಾವೃತಗೊಂಡ ಮನೆ ಮತ್ತು ಅಂಗಡಿಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಬೂಡಾ ಅಧ್ಯಕ್ಷ ಬೇಬಿ ಕುಂದರ್ ಭೇಟಿ ನೀಡಿದರು
ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ನಿತ್ಯಾನಂದ ಸ್ವಾಮಿ ಭಜನಾ ಮಂದಿರ ಎದುರಿನ ಹಿಂದೂ ರುದ್ರಭೂಮಿ ಸುತ್ತಲೂ ಜಲಾವೃತಗೊಂಡಿದೆ