<p><strong>ಮೂಡುಬಿದಿರೆ</strong>: ಪ್ರತಿಯೊಬ್ಬ ವಿದ್ಯಾರ್ಥಿಯ ಯೋಚನೆ ಮತ್ತು ಗ್ರಹಿಸುವ ಕೌಶಲ ಆತನನ್ನು ಜ್ಞಾನದಾಹಿಯನ್ನಾಗಿ ಮಾಡುತ್ತದೆ. ನಿರಂತರ ಪ್ರಶ್ನಿಸುವ ಗುಣಗಳಿಂದ ಮನೋವಿಕಸನ ಸಾಧ್ಯ ಎಂದು ಇಸ್ರೊ ವಿಜ್ಞಾನಿ ಎಂ.ವೆಂಕಟರತ್ನಮ್ ಹೇಳಿದರು.</p>.<p>ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಒಂದು ಸಂಸ್ಥೆಯ ಶೈಕ್ಷಣಿಕ ಸಾಧನೆ ಆ ಶಿಕ್ಷಣ ಸಂಸ್ಥೆಯ ಬದ್ಧತೆಯನ್ನು ವಿವರಿಸುತ್ತದೆ. ಇಸ್ರೊ ವಿಜ್ಞಾನಿಯಾಗಿ ನಾವು ಚಂದ್ರಯಾನವನ್ನು ಸಂತೋಷಿಸಿದ್ದೆವು. ಆದರೆ, ಇಂದು ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ ಗಮನಿಸಿದಾಗ ಭಾರತದ ಭವಿಷ್ಯ ಉಜ್ವಲವಾಗಿದೆ ಎಂದು ಸಂತೋಷವಾಗುತ್ತಿದೆ ಎಂದರು.</p>.<p>ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಎಕ್ಸಲೆಂಟ್ ಮಾತನಾಡಿದರು.</p>.<p>ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು.</p>.<p>ವಿದ್ಯಾರ್ಥಿಗಳಾದ ಸ್ವಾತಿ ಪಾಟೀಲ್, ಸುಪ್ರೀತ್ ವಿಷ್ಣು ಬರೆದ ಕಾದಂಬರಿಗಳಾದ ‘ಇಟ್ಸ್ ಆಲ್ ಫಾರ್ ಯೂ’ ಹಾಗೂ ‘ಹಿಡನ್ ಇಕೋ’ ಬಿಡುಗಡೆ ಮಾಡಲಾಯಿತು.</p>.<p>ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ವಿದ್ಯಾರ್ಥಿನಾಯಕ ನೀರಜ್, ಸ್ಫೂರ್ತಿ ಪಾಟೀಲ್ ಭಾಗವಹಿಸಿದ್ದರು.</p>.<p>ದಿವ್ಯಾಲಕ್ಷ್ಮೀ ರೈ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕಿಯರಾದ ಸೌಮ್ಯಾ ಮತ್ತು ಪ್ರಿಯಾಂಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ</strong>: ಪ್ರತಿಯೊಬ್ಬ ವಿದ್ಯಾರ್ಥಿಯ ಯೋಚನೆ ಮತ್ತು ಗ್ರಹಿಸುವ ಕೌಶಲ ಆತನನ್ನು ಜ್ಞಾನದಾಹಿಯನ್ನಾಗಿ ಮಾಡುತ್ತದೆ. ನಿರಂತರ ಪ್ರಶ್ನಿಸುವ ಗುಣಗಳಿಂದ ಮನೋವಿಕಸನ ಸಾಧ್ಯ ಎಂದು ಇಸ್ರೊ ವಿಜ್ಞಾನಿ ಎಂ.ವೆಂಕಟರತ್ನಮ್ ಹೇಳಿದರು.</p>.<p>ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಒಂದು ಸಂಸ್ಥೆಯ ಶೈಕ್ಷಣಿಕ ಸಾಧನೆ ಆ ಶಿಕ್ಷಣ ಸಂಸ್ಥೆಯ ಬದ್ಧತೆಯನ್ನು ವಿವರಿಸುತ್ತದೆ. ಇಸ್ರೊ ವಿಜ್ಞಾನಿಯಾಗಿ ನಾವು ಚಂದ್ರಯಾನವನ್ನು ಸಂತೋಷಿಸಿದ್ದೆವು. ಆದರೆ, ಇಂದು ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ ಗಮನಿಸಿದಾಗ ಭಾರತದ ಭವಿಷ್ಯ ಉಜ್ವಲವಾಗಿದೆ ಎಂದು ಸಂತೋಷವಾಗುತ್ತಿದೆ ಎಂದರು.</p>.<p>ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಎಕ್ಸಲೆಂಟ್ ಮಾತನಾಡಿದರು.</p>.<p>ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು.</p>.<p>ವಿದ್ಯಾರ್ಥಿಗಳಾದ ಸ್ವಾತಿ ಪಾಟೀಲ್, ಸುಪ್ರೀತ್ ವಿಷ್ಣು ಬರೆದ ಕಾದಂಬರಿಗಳಾದ ‘ಇಟ್ಸ್ ಆಲ್ ಫಾರ್ ಯೂ’ ಹಾಗೂ ‘ಹಿಡನ್ ಇಕೋ’ ಬಿಡುಗಡೆ ಮಾಡಲಾಯಿತು.</p>.<p>ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ವಿದ್ಯಾರ್ಥಿನಾಯಕ ನೀರಜ್, ಸ್ಫೂರ್ತಿ ಪಾಟೀಲ್ ಭಾಗವಹಿಸಿದ್ದರು.</p>.<p>ದಿವ್ಯಾಲಕ್ಷ್ಮೀ ರೈ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕಿಯರಾದ ಸೌಮ್ಯಾ ಮತ್ತು ಪ್ರಿಯಾಂಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>