‘ಕಾರ್ಕಳ ದಯಾಸಾಗರ್ ಸಂಸ್ಥೆ ಅಧ್ಯಕ್ಷ ಆರ್.ವಲೇರಿಯನ್ ಲೋಬೊ ಅವರು ಈಚೆಗೆ ನಮ್ಮ ಶಾಲೆಯ ಗೋಡೆಯಲ್ಲಿ ವರ್ಣ ಚಿತ್ರವನ್ನು ಉಚಿತವಾಗಿ ರಚಿಸಿದ್ದಾರೆ. ವಿದ್ಯಾ ಸರಸ್ವತಿ, ರಾಷ್ಟ್ರ ಪಕ್ಷಿ, ರಾಷ್ಟ್ರಪ್ರಾಣಿ, ಪ್ರಕೃತಿ ಮಾತೆ ಸೇರಿದಂತೆ ಸಾಲುಮರ ತಿಮ್ಮಕ್ಕ, ತುಳುನಾಡಿನ ಕಂಬಳ, ಯಕ್ಷಗಾನ, ಹಿಮ ಶಿಖರದಲ್ಲಿ ಸೈನಿಕರ ವರ್ಣ ಚಿತ್ರಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ’ ಎಂದು ಮುಖ್ಯಶಿಕ್ಷಕಿ ಹರಿಣಾಕ್ಷಿ ತಿಳಿಸಿದರು.