<p><strong>ಮಂಗಳೂರು</strong>: ತುಳುನಾಟಕ ಕಲಾವಿದರ ಒಕ್ಕೂಟವು ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರಿಗೆ, ತಂತ್ರಜ್ಞರಿಗೆ ಸನ್ಮಾನ, ಮೃತ ಕಲಾವಿದರ ನೆನಪು ಕಾರ್ಯಕ್ರಮವನ್ನು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆ. 2ರಂದು ಸಂಜೆ 5.30ರಿಂದ ಏರ್ಪಡಿಸಿದೆ.</p>.<p>ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ‘ಕೊರೊನಾ ಬಳಿಕ ತೌಳವ ಪ್ರಶಸ್ತಿ ನೀಡಲು ಸಾಧ್ಯವಾಗಿರಲಿಲ್ಲ. 2020-21ನೇ ಸಾಲಿನ ಪ್ರಶಸ್ತಿಯನ್ನು ನಾಟಕಕಾರ ಬಿ. ಭೋಜ ಸುವರ್ಣ ಅವರಿಗೆ, 2021-22ನೇ ಸಾಲಿನ ಪ್ರಶಸ್ತಿಯನ್ನು ನಟ ಪಿ. ಪ್ರಭಾಕರ ಕಲ್ಯಾಣಿ ಅವರಿಗೆ ಹಾಗೂ 2022-23ನೇ ಸಾಲಿನ ಪ್ರಶಸ್ತಿಯನ್ನು ಪತ್ರಕರ್ತ ಹಾಗೂ ನಾಟಕಕಾರ ಪರಮಾನಂದ ವಿ.ಸಾಲಿಯಾನ್ ಅವರಿಗೆ ಹಾಗೂ 2023-24ನೇ ಸಾಲಿನ ಪ್ರಶಸ್ತಿಯನ್ನು ನಾಟಕ ಕಲಾವಿದೆ ಜಯಶೀಲ ಮರೋಳಿ ಅವರಿಗೆ ನೀಡಲಿದ್ದೇವೆ’ ಎಂದರು. </p>.<p>‘ತುಳು ನಾಟಕ ಕಲಾವಿದರಾದ ರಮಾ ಬಿ.ಸಿ.ರೋಡು. ರಾಧಾಕೃಷ್ಣ ಕೆ., ಕೆ. ಸದಾಶಿವ ಅಮೀನ್, ಸಂಜೀವ ಅಡ್ಯಾರ್, ಶ್ಯಾಮ್ ಅಂಚನ್ ಮೂಡುಬಿದಿರೆ, ಪುಷ್ಪರಾಜ್ ಶೆಟ್ಟಿ ಶಿಮಂತೂರು. ಜನಾರ್ಧನ ಪಡುಪಣಂಬೂರು, ಎ.ಕೆ.ವಿ. ಬೇಂಡೆಲ್, ನಾಗೇಶ್ ದೇವಾಡಿಗ ಕದ್ರಿ, ವಾಮನ ಪಡುಬಿದ್ರಿ, ಬಾಬು ಕೆ. ಮಾರೂರು ಮೂಡುಬಿದಿರೆ, ಗಂಗಾಧರ ಟೈಲರ್ ಉಬಾರ್, ವೀಣಾ ಜಯಂತ್ ಶೆಟ್ಟಿ, ಗಣಪತಿ ಎಸ್. ಆಚಾರ್. ಹರೀಶ್ ಕೆ. ಶಕ್ತಿನಗರ ಅವರನ್ನು ಸನ್ಮಾನಿಸಲಾಗುವುದು. ದಿ. ಸೀತಾರಾಮ ಕುಲಾಲ್, ದಿ. ರತ್ನಾಕರ ರಾವ್ ಕಾವೂರು, ದಿ. ಧನಂಜಯ ಕೊಲ್ಯ ಹಾಗೂ ದಿ. ಮಾಧವ ಜಪ್ಪು ಪಟ್ನ ಅವರ ನೆನಪು ಕಾರ್ಯಕ್ರಮ ಇರಲಿದೆ. ಮಧ್ಯಾಹ್ನ 2ರಿಂದ 5ರವರೆಗೆ ಕಿರು ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ’ ಎಂದು ತಿಳಿಸಿದರು. </p>.<p>ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಕ್ಷೇಮನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ, ಖಜಾಂಚಿ ಮೋಹನ ಕೊಪ್ಪಲ, ಉಪಾಧ್ಯಕ್ಷರಾದ ಗೋಕುಲ್ ಕದ್ರಿ ಹಾಗೂ ತಾರಾನಾಥ ಶೆಟ್ಟಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ತುಳುನಾಟಕ ಕಲಾವಿದರ ಒಕ್ಕೂಟವು ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರಿಗೆ, ತಂತ್ರಜ್ಞರಿಗೆ ಸನ್ಮಾನ, ಮೃತ ಕಲಾವಿದರ ನೆನಪು ಕಾರ್ಯಕ್ರಮವನ್ನು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆ. 2ರಂದು ಸಂಜೆ 5.30ರಿಂದ ಏರ್ಪಡಿಸಿದೆ.</p>.<p>ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ‘ಕೊರೊನಾ ಬಳಿಕ ತೌಳವ ಪ್ರಶಸ್ತಿ ನೀಡಲು ಸಾಧ್ಯವಾಗಿರಲಿಲ್ಲ. 2020-21ನೇ ಸಾಲಿನ ಪ್ರಶಸ್ತಿಯನ್ನು ನಾಟಕಕಾರ ಬಿ. ಭೋಜ ಸುವರ್ಣ ಅವರಿಗೆ, 2021-22ನೇ ಸಾಲಿನ ಪ್ರಶಸ್ತಿಯನ್ನು ನಟ ಪಿ. ಪ್ರಭಾಕರ ಕಲ್ಯಾಣಿ ಅವರಿಗೆ ಹಾಗೂ 2022-23ನೇ ಸಾಲಿನ ಪ್ರಶಸ್ತಿಯನ್ನು ಪತ್ರಕರ್ತ ಹಾಗೂ ನಾಟಕಕಾರ ಪರಮಾನಂದ ವಿ.ಸಾಲಿಯಾನ್ ಅವರಿಗೆ ಹಾಗೂ 2023-24ನೇ ಸಾಲಿನ ಪ್ರಶಸ್ತಿಯನ್ನು ನಾಟಕ ಕಲಾವಿದೆ ಜಯಶೀಲ ಮರೋಳಿ ಅವರಿಗೆ ನೀಡಲಿದ್ದೇವೆ’ ಎಂದರು. </p>.<p>‘ತುಳು ನಾಟಕ ಕಲಾವಿದರಾದ ರಮಾ ಬಿ.ಸಿ.ರೋಡು. ರಾಧಾಕೃಷ್ಣ ಕೆ., ಕೆ. ಸದಾಶಿವ ಅಮೀನ್, ಸಂಜೀವ ಅಡ್ಯಾರ್, ಶ್ಯಾಮ್ ಅಂಚನ್ ಮೂಡುಬಿದಿರೆ, ಪುಷ್ಪರಾಜ್ ಶೆಟ್ಟಿ ಶಿಮಂತೂರು. ಜನಾರ್ಧನ ಪಡುಪಣಂಬೂರು, ಎ.ಕೆ.ವಿ. ಬೇಂಡೆಲ್, ನಾಗೇಶ್ ದೇವಾಡಿಗ ಕದ್ರಿ, ವಾಮನ ಪಡುಬಿದ್ರಿ, ಬಾಬು ಕೆ. ಮಾರೂರು ಮೂಡುಬಿದಿರೆ, ಗಂಗಾಧರ ಟೈಲರ್ ಉಬಾರ್, ವೀಣಾ ಜಯಂತ್ ಶೆಟ್ಟಿ, ಗಣಪತಿ ಎಸ್. ಆಚಾರ್. ಹರೀಶ್ ಕೆ. ಶಕ್ತಿನಗರ ಅವರನ್ನು ಸನ್ಮಾನಿಸಲಾಗುವುದು. ದಿ. ಸೀತಾರಾಮ ಕುಲಾಲ್, ದಿ. ರತ್ನಾಕರ ರಾವ್ ಕಾವೂರು, ದಿ. ಧನಂಜಯ ಕೊಲ್ಯ ಹಾಗೂ ದಿ. ಮಾಧವ ಜಪ್ಪು ಪಟ್ನ ಅವರ ನೆನಪು ಕಾರ್ಯಕ್ರಮ ಇರಲಿದೆ. ಮಧ್ಯಾಹ್ನ 2ರಿಂದ 5ರವರೆಗೆ ಕಿರು ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ’ ಎಂದು ತಿಳಿಸಿದರು. </p>.<p>ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಕ್ಷೇಮನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ, ಖಜಾಂಚಿ ಮೋಹನ ಕೊಪ್ಪಲ, ಉಪಾಧ್ಯಕ್ಷರಾದ ಗೋಕುಲ್ ಕದ್ರಿ ಹಾಗೂ ತಾರಾನಾಥ ಶೆಟ್ಟಿ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>