ಗೃಹ ಸಚಿವ ಜಿ.ಪರಮೇಶ್ವರ್ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಮೊದಲಿಗೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ... ಸಚಿವ ಪರಮೇಶ್ವರ್ ಅವರಿಗೆ ಜಯವಾಗಲಿ.. ಎಂದು ಘೋಷಣೆ ಕೂಗಿದರು. ಈ ಮಧ್ಯೆ ಕಾರ್ಯಕರ್ತರೊಬ್ಬರು, ‘ಮುಂದಿನ ಸಿಎಂ ಪರಮೇಶ್ವರ್ ಅವರಿಗೆ... ಎಂದು ಘೋಷಣೆ ಕೂಗಿದರು. ಆಗ ಸಚಿವ ಪರಮೇಶ್ವರ್, ‘ಸುಮ್ಮನಿರಿ, ಮಾಧ್ಯಮದವರು ಇದ್ದಾರೆ’ ಎಂದರು.