ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ರಕ್ತದ ಕಲೆಗಳನ್ನು ಅವಲೋಕಿಸಿದರು. ಹಾವೇರಿಯಿಂದ ಶ್ವಾನದಳ ಆಗಮಿಸಿದ್ದರೂ ನಿರಂತರ ಮಳೆಯಿಂದಾಗಿ ಸ್ಪಷ್ಟತೆ ಸಿಗಲಿಲ್ಲದಾಯಿತು. ರಕ್ತದ ಮಾದರಿ ಸಂಗ್ರಹಿಸಿ ಎಫ್.ಎಸ್.ಎಲ್. ಗೆ ಹೆಚ್ಚಿನ ತನಿಖೆಗೆ ಕಳಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಸ್ಥಳದಲ್ಲಿದ್ದು, ಎಂದಿನಂತೆ ಶಾಲಾ ತರಗತಿಗಳು, ಮಧ್ಯಾಹ್ನದ ಬಿಸಿಯೂಟ ನಡೆಯಿತು.