‘ವಾರದ ರಜೆ ಭಾನುವಾರ ಇರುವುದರಿಂದ ರೈಲಿನ ಸೀಟ್ಗಳು ಸಿಗಲಿಲ್ಲ. ಬೆಳಿಗ್ಗೆ ಬೇಗ ಬೆಂಗಳೂರು ತಲುಪಿ ನಿಗದಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕೆಕೆಆರ್ಟಿಸಿಯ ಎ.ಸಿ. ಸ್ಲೀಪರ್ ಬಸ್ಗೆ ₹1,150 ಕೊಟ್ಟು ಸೀಟ್ ಬುಕ್ ಮಾಡಿದೆ. ಬಸ್ ಹತ್ತುವಾಗ ಎ.ಸಿ. ಸ್ಲೀಫರ್ ಬಸ್ ಫೇಲಾಗಿದೆ ಎಂದು ನಾನ್ ಎ.ಸಿ. ಸ್ಲೀಪರ್ ಬಿಟ್ಟಿದ್ದಾರೆ. ಮಳೆ ನೀರು ಬಸ್ ಒಳಗೆ ಸೋರಿಕೆಯಾಗುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ‘ಪ್ರಜಾವಾಣಿ’ಗೆ ತಿಳಿಸಿದರು.