ನೋಂದಣಿಗೆ ಅರ್ಜಿ ಸಲ್ಲಿಸಿದಾಗ ನೀಡಿದ ಮಾಹಿತಿ ಬ್ಯಾಂಕ್ ಖಾತೆ ಮಾಹಿತಿ ಪಡಿತರ ಚೀಟಿ ಹಾಗೂ ಆಧಾರ್ನಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ
ಎಂ.ಮುದ್ದಣ್ಣ, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಅಧಿಕಾರಿಗಳ ಮೇಲೆ ಒತ್ತಡ
‘ಗೃಹಲಕ್ಷ್ಮಿ’ ಹಣಕ್ಕಾಗಿ ಮಹಿಳೆಯರು ನಿತ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ತೆರಳಿ ವಿಚಾರಿಸುತ್ತಿದ್ದಾರೆ. ಇದು ಇಲಾಖೆ ಅಧಿಕಾರಿಗಳ ಮೇಲೆ ಮತ್ತಷ್ಟು ಒತ್ತಡ ಹೆಚ್ಚಿಸಿದೆ. ‘ನಿತ್ಯ ಕನಿಷ್ಠ ನೂರು ಮಹಿಳೆಯರು ಕಚೇರಿಗೆ ಭೇಟಿ ನೀಡುತ್ತಾರೆ. ತಮಗೆ ಇನ್ನೂ ಹಣ ಬಂದಿಲ್ಲವೆಂದು ಹೇಳಿಕೊಳ್ಳುತ್ತಾರೆ. ತಾಂತ್ರಿಕ ಕಾರಣಗಳನ್ನು ತಿಳಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಸಿಬ್ಬಂದಿ ಕೂಡ ಕಡಿಮೆ ಇರುವುದರಿಂದ ಎಲ್ಲರ ಮೇಲೆ ಒತ್ತಡ ಹೆಚ್ಚಿದೆ. ಜೊತೆಗೆ ಇಲಾಖೆಯ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಮುದ್ದಣ್ಣ ತಿಳಿಸಿದರು.