<p><strong>ಕೆಜಿಎಫ್</strong>: ರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ನಗರದಲ್ಲಿ ನ್ಯಾಯಾಧೀಶರು, ವಿದ್ಯಾರ್ಥಿಗಳು ಮತ್ತು ಕೆಲ ಸಂಘಟನೆ ಪದಾಧಿಕಾರಿಗಳು ಜಾಗೃತಿ ಜಾಥಾ ನಡೆಸಿದರು.</p>.<p>ಈ ಸಂಬಂಧ ಜೈನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ಮಾತನಾಡಿ, ಮಕ್ಕಳನ್ನು ಅಪಹರಣ ಮಾಡಿ ಇಲ್ಲವೇ, ಹಣಕೊಟ್ಟು ಖರೀದಿ ಮಾಡಿ ಅವುಗಳಿಗೆ ಮಂಪು ಬರುವಂತಹ ಚುಚ್ಚುಮದ್ದು ನೀಡಿ ಈಡೀ ದಿನ ಮಲಗುವಂತೆ ಮಾಡಿ ಬಿಕ್ಷಾಟನೆ ಮಾಡುವ ಜಾಲಗಳು ಇನ್ನೂ ಸಕ್ರಿಯವಾಗಿ ಇವೆ. ಮಾನವನ ಕಳ್ಳಸಾಗಾಣಿಕೆ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ. ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಿವೆ. ವಿಶ್ವಸಂಸ್ಥೆ ಕೂಡ ಮಾನವ ಕಳ್ಳ ಸಾಗಾಣಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.</p>.<p>ನ್ಯಾಯಾಧೀಶರಾದ ಮುಜಾಫರ್ ಎ.ಮಾಂಜರಿ, ವಿನೋದ್ ಕುಮಾರ್, ಎಂ.ಮಂಜು, ಎಸ್.ಎನ್.ರಾಜಗೋಪಾಲಗೌಡ, ರೇಖಾ ಸೇಥಿ, ನವೀನ್, ತ್ಯಾಗರಾಜ್, ಮಂಜುನಾಥ್, ನಾಗರಾಜ್, ಬಿ.ಸಿ.ಪರಮೇಶ್, ಮಣ್ಣಿ ವಣ್ಣನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್</strong>: ರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ನಗರದಲ್ಲಿ ನ್ಯಾಯಾಧೀಶರು, ವಿದ್ಯಾರ್ಥಿಗಳು ಮತ್ತು ಕೆಲ ಸಂಘಟನೆ ಪದಾಧಿಕಾರಿಗಳು ಜಾಗೃತಿ ಜಾಥಾ ನಡೆಸಿದರು.</p>.<p>ಈ ಸಂಬಂಧ ಜೈನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ಮಾತನಾಡಿ, ಮಕ್ಕಳನ್ನು ಅಪಹರಣ ಮಾಡಿ ಇಲ್ಲವೇ, ಹಣಕೊಟ್ಟು ಖರೀದಿ ಮಾಡಿ ಅವುಗಳಿಗೆ ಮಂಪು ಬರುವಂತಹ ಚುಚ್ಚುಮದ್ದು ನೀಡಿ ಈಡೀ ದಿನ ಮಲಗುವಂತೆ ಮಾಡಿ ಬಿಕ್ಷಾಟನೆ ಮಾಡುವ ಜಾಲಗಳು ಇನ್ನೂ ಸಕ್ರಿಯವಾಗಿ ಇವೆ. ಮಾನವನ ಕಳ್ಳಸಾಗಾಣಿಕೆ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ. ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಿವೆ. ವಿಶ್ವಸಂಸ್ಥೆ ಕೂಡ ಮಾನವ ಕಳ್ಳ ಸಾಗಾಣಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.</p>.<p>ನ್ಯಾಯಾಧೀಶರಾದ ಮುಜಾಫರ್ ಎ.ಮಾಂಜರಿ, ವಿನೋದ್ ಕುಮಾರ್, ಎಂ.ಮಂಜು, ಎಸ್.ಎನ್.ರಾಜಗೋಪಾಲಗೌಡ, ರೇಖಾ ಸೇಥಿ, ನವೀನ್, ತ್ಯಾಗರಾಜ್, ಮಂಜುನಾಥ್, ನಾಗರಾಜ್, ಬಿ.ಸಿ.ಪರಮೇಶ್, ಮಣ್ಣಿ ವಣ್ಣನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>