<p><strong>ಮುಳಬಾಗಿಲು</strong>: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪುರಂದರ ಭವನದಲ್ಲಿ ಪತ್ರಕರ್ತರ ದಿನಾಚರಣೆ, ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ಶಿಬಿರ, ನಿವೃತ್ತ ಯೋಧರು ಹಾಗೂ ರೈತರಿಗೆ ಅಭಿನಂದನಾ ಸಮಾರಂಭ ನಡೆಯಿತು.</p>.<p>ಪತ್ರಕರ್ತರ ದಿನಾಚರಣೆ ಪ್ರಯುಕ್ತ ಈ ಬಾರಿ ಜಾಲಪ್ಪ ಆಸ್ಪತ್ರೆ ಹಾಗೂ ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ಪತ್ರಕರ್ತರು, ಪತ್ರಕರ್ತರ ಮಕ್ಕಳು, ರೈತರು ಹಾಗೂ ನಿವೃತ್ತ ಯೋಧರಿಗೆ ಆರೋಗ್ಯ ಶಿಬಿರದಲ್ಲಿ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ವಿತರಿಸಲಾಯಿತು.</p>.<p>ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕೆಲವು ಯೂಟ್ಯೂಬ್ ಚಾನೆಲ್ ಅವರು ಅರ್ಧ ರಾತ್ರಿಯಲ್ಲಿ ಹೋಗಿ ಪ್ರವಾಸಿ ಮಂದಿರದಲ್ಲಿ ಕೊಠಡಿ ಬೇಕು ಎಂದು ದಮ್ಕಿ ಹಾಕುತ್ತಾರೆ. ಇನ್ನು ಕೆಲವು ಪತ್ರಿಕೆಗಳೇ ನನಗೆ ಗೊತ್ತಿಲ್ಲ. ಇಂತಹ ವ್ಯವಸ್ಥೆ ಮೊದಲು ನಿಲ್ಲಬೇಕು. ನಿಜವಾದ ಪತ್ರಕರ್ತನಿಗೆ ಬೆಲೆ ಸಿಗಬೇಕು ಎಂದು ಹೇಳಿದರು.</p>.<p>ಮುಳಬಾಗಿಲು ನಗರದಲ್ಲಿ ಪತ್ರಕರ್ತರ ಸಂಘಕ್ಕೆ ಕೆಲವೇ ದಿನಗಳಲ್ಲಿ ಸ್ವಂತ ನಿವೇಶನ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ನೀಡಲಾಗುವುದು. ಯಾವುದೇ ಕಾರಣಕ್ಕೂ ಕಟ್ಟಡ ನಿರ್ಮಾಣಕ್ಕೆ ಅವರಿವರ ಬಳಿ ಪತ್ರಕರ್ತರು ಕೈ ಒಡ್ಡಬಾರದು ಎಂದರು.</p>.<p>ರಾಜ್ಯ ಸರ್ಕಾರ ದಿನೇ ದಿನೇ ಸಾಲವನ್ನು ಜನತೆಯ ಮೇಲೆ ಹೆಚ್ಚು ಮಾಡುತ್ತಿದ್ದು, ಅಭಿವೃದ್ಧಿ ಮಾಡದೆ ಗ್ಯಾರಂಟಿಗಳಿಗೋಸ್ಕರ ಹಗರಣ ನಡೆಸುತ್ತಿದೆ. ಆದರೆ, ನನಗೆ ಸಿಕ್ಕಿರುವ ಅಧಿಕಾರದಲ್ಲಿ ತಾಲ್ಲೂಕನ್ನು ಅಭಿವೃದ್ಧಿಯತ್ತ ಕರೆದೊಯ್ಯುತ್ತೇನೆ ಎಂದು ತಿಳಿಸಿದರು.</p>.<p>ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಡಿವಿಜಿಯವರಿಂದ ಪ್ರಾರಂಭವಾದ ಪತ್ರಕರ್ತರ ಸಂಘಕ್ಕೆ ಡಿವಿಜಿ ತವರು ನೆಲದಲ್ಲಿಯೇ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ಕೂಡಲೇ ನಿವೇಶನ ಹಾಗೂ ಕಟ್ಟಡ ಕೆಲಸವಾಗಬೇಕಾಗಿದೆ ಎಂದು ಹೇಳಿದರು.</p>.<p>ಬಿ.ಎಸ್.ವೆಂಕಟಾಚಲಪತಿ, ಬಿ.ವಿ.ಗೋಪಿನಾಥ್, ಚಂದ್ರಶೇಖರ್, ಮುನಿರಾಜು, ರಘುಪತಿ ರೆಡ್ಡಿ, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಸತ್ಯಣ್ಣ, ವರದಪ್ಪ, ಜಮ್ಮನಹಳ್ಳಿ ಕೃಷ್ಣಪ್ಪ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪುರಂದರ ಭವನದಲ್ಲಿ ಪತ್ರಕರ್ತರ ದಿನಾಚರಣೆ, ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ಶಿಬಿರ, ನಿವೃತ್ತ ಯೋಧರು ಹಾಗೂ ರೈತರಿಗೆ ಅಭಿನಂದನಾ ಸಮಾರಂಭ ನಡೆಯಿತು.</p>.<p>ಪತ್ರಕರ್ತರ ದಿನಾಚರಣೆ ಪ್ರಯುಕ್ತ ಈ ಬಾರಿ ಜಾಲಪ್ಪ ಆಸ್ಪತ್ರೆ ಹಾಗೂ ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ಪತ್ರಕರ್ತರು, ಪತ್ರಕರ್ತರ ಮಕ್ಕಳು, ರೈತರು ಹಾಗೂ ನಿವೃತ್ತ ಯೋಧರಿಗೆ ಆರೋಗ್ಯ ಶಿಬಿರದಲ್ಲಿ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ವಿತರಿಸಲಾಯಿತು.</p>.<p>ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕೆಲವು ಯೂಟ್ಯೂಬ್ ಚಾನೆಲ್ ಅವರು ಅರ್ಧ ರಾತ್ರಿಯಲ್ಲಿ ಹೋಗಿ ಪ್ರವಾಸಿ ಮಂದಿರದಲ್ಲಿ ಕೊಠಡಿ ಬೇಕು ಎಂದು ದಮ್ಕಿ ಹಾಕುತ್ತಾರೆ. ಇನ್ನು ಕೆಲವು ಪತ್ರಿಕೆಗಳೇ ನನಗೆ ಗೊತ್ತಿಲ್ಲ. ಇಂತಹ ವ್ಯವಸ್ಥೆ ಮೊದಲು ನಿಲ್ಲಬೇಕು. ನಿಜವಾದ ಪತ್ರಕರ್ತನಿಗೆ ಬೆಲೆ ಸಿಗಬೇಕು ಎಂದು ಹೇಳಿದರು.</p>.<p>ಮುಳಬಾಗಿಲು ನಗರದಲ್ಲಿ ಪತ್ರಕರ್ತರ ಸಂಘಕ್ಕೆ ಕೆಲವೇ ದಿನಗಳಲ್ಲಿ ಸ್ವಂತ ನಿವೇಶನ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ನೀಡಲಾಗುವುದು. ಯಾವುದೇ ಕಾರಣಕ್ಕೂ ಕಟ್ಟಡ ನಿರ್ಮಾಣಕ್ಕೆ ಅವರಿವರ ಬಳಿ ಪತ್ರಕರ್ತರು ಕೈ ಒಡ್ಡಬಾರದು ಎಂದರು.</p>.<p>ರಾಜ್ಯ ಸರ್ಕಾರ ದಿನೇ ದಿನೇ ಸಾಲವನ್ನು ಜನತೆಯ ಮೇಲೆ ಹೆಚ್ಚು ಮಾಡುತ್ತಿದ್ದು, ಅಭಿವೃದ್ಧಿ ಮಾಡದೆ ಗ್ಯಾರಂಟಿಗಳಿಗೋಸ್ಕರ ಹಗರಣ ನಡೆಸುತ್ತಿದೆ. ಆದರೆ, ನನಗೆ ಸಿಕ್ಕಿರುವ ಅಧಿಕಾರದಲ್ಲಿ ತಾಲ್ಲೂಕನ್ನು ಅಭಿವೃದ್ಧಿಯತ್ತ ಕರೆದೊಯ್ಯುತ್ತೇನೆ ಎಂದು ತಿಳಿಸಿದರು.</p>.<p>ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಡಿವಿಜಿಯವರಿಂದ ಪ್ರಾರಂಭವಾದ ಪತ್ರಕರ್ತರ ಸಂಘಕ್ಕೆ ಡಿವಿಜಿ ತವರು ನೆಲದಲ್ಲಿಯೇ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ಕೂಡಲೇ ನಿವೇಶನ ಹಾಗೂ ಕಟ್ಟಡ ಕೆಲಸವಾಗಬೇಕಾಗಿದೆ ಎಂದು ಹೇಳಿದರು.</p>.<p>ಬಿ.ಎಸ್.ವೆಂಕಟಾಚಲಪತಿ, ಬಿ.ವಿ.ಗೋಪಿನಾಥ್, ಚಂದ್ರಶೇಖರ್, ಮುನಿರಾಜು, ರಘುಪತಿ ರೆಡ್ಡಿ, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಸತ್ಯಣ್ಣ, ವರದಪ್ಪ, ಜಮ್ಮನಹಳ್ಳಿ ಕೃಷ್ಣಪ್ಪ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>