<p><strong>ಮುಳಬಾಗಿಲು:</strong> ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರ ಹೆದ್ದಾರಿಯಲ್ಲಿ ನಿರ್ಮಿಸಿರುವ ಕೆಲವು ತಂಗುದಾಣಗಳ ಹಾಗೂ ಹಲವಾರು ಗ್ರಾಮಗಳಿಗೆ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಪದಗಳು ಹಾಗೂ ಅಕ್ಷರಗಳು ತೆಲುಗುಮಯ ಆಗಿರುವುದು ಕಂಡುಬರುತ್ತಿದೆ.</p>.<p>ಬೆಂಗಳೂರಿನ ಕೆ.ಆರ್. ಪುರಂನಿಂದ ಮುಳಬಾಗಿಲು ತಾಲ್ಲೂಕಿನ ನಂಗಲಿಯವರೆಗೂ ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದೆ. ಮುಳಬಾಗಿಲಿನಿಂದ ನಂಗಲಿಯ ಗಡಿಯವರೆಗೂ ನಿರ್ಮಿಸಿರುವ ತಾತಿಕಲ್ಲು, ನಂಗಲಿ, ಎಂ. ಕೊತ್ತೂರು, ಎನ್. ವಡ್ಡಹಳ್ಳಿ, ಪದ್ಮಘಟ್ಟ ತನಿಖಾ ಠಾಣೆ ಮುಂತಾದ ಕಡೆಗಳಲ್ಲಿ ಹಾಕಲಾಗಿರುವ ತಂಗುದಾಣಗಳು ಹಾಗೂ ಗ್ರಾಮಗಳಿಗೆ ಮಾರ್ಗವನ್ನು ತೋರಿಸುವ ನಾಮ ಫಲಕಗಳಲ್ಲಿ ಕನ್ನಡ ಭಾಷೆಯ ಪದಗಳಲ್ಲಿ ತೆಲುಗು ಅರ್ಥ ಸೂಚಿಸುವ ಮೂಲಕ ಕನ್ನಡ ಭಾಷೆ ಮಾಯವಾಗಿದೆ.</p>.<p>ಮುಳಬಾಗಿಲು ತಾಲ್ಲೂಕು ಗಂಗರ, ಹೊಯ್ಸಳರ, ನೊಳಂಬರ, ಚೋಳರ ಹಾಗೂ ಮೈಸೂರು ಒಡೆಯರ ಆಳ್ವಿಕೆಗೆ ಒಳಗಾದ ಸಮಯದಲ್ಲಿ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಳ್ಳಲು ಹಾಗೂ ಸ್ಥಳೀಯ ಪುರಾಣವನ್ನು ಸೂಚಿಸುವ ಕಾರಣದಿಂದ ಕೆಲವು ಗ್ರಾಮಗಳಿಗೆ ಹೆಸರುಗಳನ್ನು ಇಡಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 75 ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯ ಹೆಸರುಗಳನ್ನು ಕೆಲವು ಕಡೆ ಮಾರ್ಪಡಿಸಿ, ಅಥವಾ ಮೂಲ ಅಕ್ಷರಕ್ಕೆ ಬದಲಾಗಿ ಬೇರೊಂದು ಅಕ್ಷರಗಳನ್ನು ಹಾಗೂ ಕಾಗುಣಿತಾಕ್ಷರಗಳನ್ನೇ ಬದಲಾಯಿಸಿ ನಾಮ ಫಲಕಗಳನ್ನು ಬರೆಸಲಾಗಿದೆ. ಹೀಗಾಗಿ ಹೆಸರುಗಳ ಮೂಲ ರೂಪಗಳೇ ಮಾಯವಾಗಿ ಭಿನ್ನಾರ್ಥ ವ್ಯಕ್ತವಾಗುತ್ತಿದೆ.</p>.<p>ಮುಳಬಾಗಿಲು ನಗರದ ನಂತರ ಅತಿದೊಡ್ಡ ಗ್ರಾಮ, ಜನಸಂಖ್ಯೆ, ವ್ಯಾಪಾರ ವಹಿವಾಟು ಹಾಗೂ ಸರ್ಕಾರದ ಬಹುತೇಕ ಕಚೇರಿಗಳನ್ನು ಒಳಗೊಂಡಿರುವ ನಂಗಲಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗದ ರಸ್ತೆಯಲ್ಲಿ ಪ್ರಯಾಣಿಕರು ನಿಲ್ಲಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆ ನೀಡಿರುವ ಲ್ಯಾಂಕೋ ಟೋಲ್ ನಿರ್ಮಿಸಿರುವ ತಂಗುದಾಣದ ಮೇಲೆ ‘ನಂಗಲಿ’ ಬದಲಾಗಿ ತೆಲುಗು ರೂಪಕವಾಗಿ ‘ನಂಗಿಲಿ’ ಎಂದು ಬರೆಯಲಾಗಿದೆ.ಹೀಗಾಗಿ ಗ್ರಾಮದ ಹೆಸರೇ ಅರ್ಥ ಕಳೆದುಕೊಂಡಿದೆ.</p>.<p>ತಾತಿಕಲ್ಲು ಗ್ರಾಮದ ಬಳಿ ನಿರ್ಮಿಸಿರುವ ತಂಗುದಾಣದ ಮೇಲೆ ‘ತಾತಿಕಲ್ಲು’ ಬದಲಾಗಿ ‘ತಾಟಿಕಲ್ಲು’ ಎಂದು ಬರೆಯಲಾಗಿದ್ದು, ತಾಟಿಕಲ್ಲು ಎನ್ನುವುದು ತೆಲುಗು ಭಾಷೆಯ ಪದವಾಗಿದೆ. ಹೀಗಾಗಿ ಕನ್ನಡ ಮಾಯವಾಗಿ ಕನ್ನಡ ಅಕ್ಷರಗಳಲ್ಲಿ ತೆಲುಗು ಅರ್ಥ ಎದ್ದು ಕಾಣುತ್ತಿದೆ. ಹೆದ್ದಾರಿ ನಿರ್ಮಾಣವಾಗಿ ಸುಮಾರು ಹತ್ತು ವರ್ಷಗಳು ಕಳೆಯುತ್ತಿದ್ದರೂ ಇನ್ನೂ ನಾಮಫಲಕದಲ್ಲಿನ ಪದ ಬದಲಾಗಿಲ್ಲ.</p>.<p>ಪದ್ಮಘಟ್ಟ ಬಳಿಯ ಆರ್ಟಿಒ ಕಚೇರಿಯ ಮುಂಭಾಗದಲ್ಲಿ ‘ಎನ್. ವಡ್ಡಹಳ್ಳಿ’ ಎಂಬ ಊರಿನ ಹೆಸರನ್ನು ‘ವೊಡಹಳ್ಳಿ’ ಎಂದು ಬರೆಯುವ ಮೂಲಕ ಮೂಲ ಅರ್ಥವೇ ಕೆಟ್ಟು, ಮತ್ತೊಂದು ಅರ್ಥವಿಲ್ಲದ ಹಾಗೂ ಸಂಬಂಧ ಇಲ್ಲದ ಪದವೊಂದನ್ನು ಬರೆಯಲಾಗಿದೆ ‘ಕೊತ್ತೂರು ಬದಲಾಗಿ ‘ಕೋತ್ತೂರು’ ಎಂಬ ದೀರ್ಘ ಅಕ್ಷರವನ್ನು ಸೇರಿಸಿ ಬರೆದಿರುವ ಕಾರಣದಿಂದ ಅರ್ಥವೇ ಕೆಟ್ಟಿದೆ. </p>.<p>ತ್ರಿಭಾಷಾ ಸೂತ್ರಕ್ಕೆ ವಿರೋಧ: ಸರ್ಕಾರ ಆಯಾ ರಾಜ್ಯ ಭಾಷೆಗಳಿಗೆ ಪ್ರಥಮ ಆದ್ಯತೆ ನಂತರ ಆಂಗ್ಲ ಹಾಗೂ ಹಿಂದಿ ಭಾಷೆಗೆ ಆದ್ಯತೆ ನೀಡಬೇಕು ಎಂಬ ಕಾನೂನನ್ನು ರೂಪಿಸಿದೆ. ಆದರೆ, ಕೆಲವು ಕಡೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಗಾಳಿಗೆ ತೂರಿ ಬಾರ್ ಹಾಗೂ ದೊಡ್ಡ ಮಟ್ಟದ ಅಂಗಡಿಗಳ ಹೆಸರುಗಳನ್ನು ಕೇವಲ ಆಂಗ್ಲ ಭಾಷೆಯ ದಪ್ಪ ಅಕ್ಷರಗಳಲ್ಲಿಯೇ ಬರೆಸಿರುವುದು ರಾಜಾರೋಷವಾಗಿ ಕಂಡು ಬರುತ್ತಿದೆ.</p>.<p>Quote - ತಾಲ್ಲೂಕಿನಲ್ಲಿ ಬಹುತೇಕರು ಕನ್ನಡ ಭಾಷೆಯನ್ನು ಮಾತನಾಡಿದರೂ ನಗರದಲ್ಲಿ ಇರುವ ಸಿನಿಮಾ ಮಂದಿರಗಳಲ್ಲಿ ಸದಾ ಅನ್ಯಭಾಷೆಯ ಚಲನಚಿತ್ರಗಳನ್ನೇ ಪ್ರದರ್ಶಿಸಲಾಗುತ್ತದೆ. ಆದರೆ ನವೆಂಬರ್ನ ಕರ್ನಾಟಕ ರಾಜ್ಯೋತ್ಸವ ದಿನದಂದು ಮಾತ್ರ ಕೇವಲ ಒಂದು ದಿನದ ಮಟ್ಟಿಗೆ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಕನ್ನಡ ಭಾಷೆ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರಿವು ಮೂಡಿಸಬೇಕಿದೆ. ನರಸಿಂಹ ಕುರುಬರಹಳ್ಳಿ</p>.<p>Quote - ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕನ್ನಡ ಭಾಷೆ ಹಾಗೂ ಅರ್ಥಗಳು ಭಿನ್ನಾರ್ಥವನ್ನು ಪಡೆಯುವ ರೀತಿಯಲ್ಲಿ ತಪ್ಪುಗಳಾಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಿಸಿದವರಿಗೆ ಹೇಳಿ ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಬಿ.ಆರ್.ಮುನಿವೆಂಕಟಪ್ಪ ಗ್ರೇಡ್ 2 ತಹಶೀಲ್ದಾರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರ ಹೆದ್ದಾರಿಯಲ್ಲಿ ನಿರ್ಮಿಸಿರುವ ಕೆಲವು ತಂಗುದಾಣಗಳ ಹಾಗೂ ಹಲವಾರು ಗ್ರಾಮಗಳಿಗೆ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಪದಗಳು ಹಾಗೂ ಅಕ್ಷರಗಳು ತೆಲುಗುಮಯ ಆಗಿರುವುದು ಕಂಡುಬರುತ್ತಿದೆ.</p>.<p>ಬೆಂಗಳೂರಿನ ಕೆ.ಆರ್. ಪುರಂನಿಂದ ಮುಳಬಾಗಿಲು ತಾಲ್ಲೂಕಿನ ನಂಗಲಿಯವರೆಗೂ ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದೆ. ಮುಳಬಾಗಿಲಿನಿಂದ ನಂಗಲಿಯ ಗಡಿಯವರೆಗೂ ನಿರ್ಮಿಸಿರುವ ತಾತಿಕಲ್ಲು, ನಂಗಲಿ, ಎಂ. ಕೊತ್ತೂರು, ಎನ್. ವಡ್ಡಹಳ್ಳಿ, ಪದ್ಮಘಟ್ಟ ತನಿಖಾ ಠಾಣೆ ಮುಂತಾದ ಕಡೆಗಳಲ್ಲಿ ಹಾಕಲಾಗಿರುವ ತಂಗುದಾಣಗಳು ಹಾಗೂ ಗ್ರಾಮಗಳಿಗೆ ಮಾರ್ಗವನ್ನು ತೋರಿಸುವ ನಾಮ ಫಲಕಗಳಲ್ಲಿ ಕನ್ನಡ ಭಾಷೆಯ ಪದಗಳಲ್ಲಿ ತೆಲುಗು ಅರ್ಥ ಸೂಚಿಸುವ ಮೂಲಕ ಕನ್ನಡ ಭಾಷೆ ಮಾಯವಾಗಿದೆ.</p>.<p>ಮುಳಬಾಗಿಲು ತಾಲ್ಲೂಕು ಗಂಗರ, ಹೊಯ್ಸಳರ, ನೊಳಂಬರ, ಚೋಳರ ಹಾಗೂ ಮೈಸೂರು ಒಡೆಯರ ಆಳ್ವಿಕೆಗೆ ಒಳಗಾದ ಸಮಯದಲ್ಲಿ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಳ್ಳಲು ಹಾಗೂ ಸ್ಥಳೀಯ ಪುರಾಣವನ್ನು ಸೂಚಿಸುವ ಕಾರಣದಿಂದ ಕೆಲವು ಗ್ರಾಮಗಳಿಗೆ ಹೆಸರುಗಳನ್ನು ಇಡಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 75 ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯ ಹೆಸರುಗಳನ್ನು ಕೆಲವು ಕಡೆ ಮಾರ್ಪಡಿಸಿ, ಅಥವಾ ಮೂಲ ಅಕ್ಷರಕ್ಕೆ ಬದಲಾಗಿ ಬೇರೊಂದು ಅಕ್ಷರಗಳನ್ನು ಹಾಗೂ ಕಾಗುಣಿತಾಕ್ಷರಗಳನ್ನೇ ಬದಲಾಯಿಸಿ ನಾಮ ಫಲಕಗಳನ್ನು ಬರೆಸಲಾಗಿದೆ. ಹೀಗಾಗಿ ಹೆಸರುಗಳ ಮೂಲ ರೂಪಗಳೇ ಮಾಯವಾಗಿ ಭಿನ್ನಾರ್ಥ ವ್ಯಕ್ತವಾಗುತ್ತಿದೆ.</p>.<p>ಮುಳಬಾಗಿಲು ನಗರದ ನಂತರ ಅತಿದೊಡ್ಡ ಗ್ರಾಮ, ಜನಸಂಖ್ಯೆ, ವ್ಯಾಪಾರ ವಹಿವಾಟು ಹಾಗೂ ಸರ್ಕಾರದ ಬಹುತೇಕ ಕಚೇರಿಗಳನ್ನು ಒಳಗೊಂಡಿರುವ ನಂಗಲಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗದ ರಸ್ತೆಯಲ್ಲಿ ಪ್ರಯಾಣಿಕರು ನಿಲ್ಲಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆ ನೀಡಿರುವ ಲ್ಯಾಂಕೋ ಟೋಲ್ ನಿರ್ಮಿಸಿರುವ ತಂಗುದಾಣದ ಮೇಲೆ ‘ನಂಗಲಿ’ ಬದಲಾಗಿ ತೆಲುಗು ರೂಪಕವಾಗಿ ‘ನಂಗಿಲಿ’ ಎಂದು ಬರೆಯಲಾಗಿದೆ.ಹೀಗಾಗಿ ಗ್ರಾಮದ ಹೆಸರೇ ಅರ್ಥ ಕಳೆದುಕೊಂಡಿದೆ.</p>.<p>ತಾತಿಕಲ್ಲು ಗ್ರಾಮದ ಬಳಿ ನಿರ್ಮಿಸಿರುವ ತಂಗುದಾಣದ ಮೇಲೆ ‘ತಾತಿಕಲ್ಲು’ ಬದಲಾಗಿ ‘ತಾಟಿಕಲ್ಲು’ ಎಂದು ಬರೆಯಲಾಗಿದ್ದು, ತಾಟಿಕಲ್ಲು ಎನ್ನುವುದು ತೆಲುಗು ಭಾಷೆಯ ಪದವಾಗಿದೆ. ಹೀಗಾಗಿ ಕನ್ನಡ ಮಾಯವಾಗಿ ಕನ್ನಡ ಅಕ್ಷರಗಳಲ್ಲಿ ತೆಲುಗು ಅರ್ಥ ಎದ್ದು ಕಾಣುತ್ತಿದೆ. ಹೆದ್ದಾರಿ ನಿರ್ಮಾಣವಾಗಿ ಸುಮಾರು ಹತ್ತು ವರ್ಷಗಳು ಕಳೆಯುತ್ತಿದ್ದರೂ ಇನ್ನೂ ನಾಮಫಲಕದಲ್ಲಿನ ಪದ ಬದಲಾಗಿಲ್ಲ.</p>.<p>ಪದ್ಮಘಟ್ಟ ಬಳಿಯ ಆರ್ಟಿಒ ಕಚೇರಿಯ ಮುಂಭಾಗದಲ್ಲಿ ‘ಎನ್. ವಡ್ಡಹಳ್ಳಿ’ ಎಂಬ ಊರಿನ ಹೆಸರನ್ನು ‘ವೊಡಹಳ್ಳಿ’ ಎಂದು ಬರೆಯುವ ಮೂಲಕ ಮೂಲ ಅರ್ಥವೇ ಕೆಟ್ಟು, ಮತ್ತೊಂದು ಅರ್ಥವಿಲ್ಲದ ಹಾಗೂ ಸಂಬಂಧ ಇಲ್ಲದ ಪದವೊಂದನ್ನು ಬರೆಯಲಾಗಿದೆ ‘ಕೊತ್ತೂರು ಬದಲಾಗಿ ‘ಕೋತ್ತೂರು’ ಎಂಬ ದೀರ್ಘ ಅಕ್ಷರವನ್ನು ಸೇರಿಸಿ ಬರೆದಿರುವ ಕಾರಣದಿಂದ ಅರ್ಥವೇ ಕೆಟ್ಟಿದೆ. </p>.<p>ತ್ರಿಭಾಷಾ ಸೂತ್ರಕ್ಕೆ ವಿರೋಧ: ಸರ್ಕಾರ ಆಯಾ ರಾಜ್ಯ ಭಾಷೆಗಳಿಗೆ ಪ್ರಥಮ ಆದ್ಯತೆ ನಂತರ ಆಂಗ್ಲ ಹಾಗೂ ಹಿಂದಿ ಭಾಷೆಗೆ ಆದ್ಯತೆ ನೀಡಬೇಕು ಎಂಬ ಕಾನೂನನ್ನು ರೂಪಿಸಿದೆ. ಆದರೆ, ಕೆಲವು ಕಡೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಗಾಳಿಗೆ ತೂರಿ ಬಾರ್ ಹಾಗೂ ದೊಡ್ಡ ಮಟ್ಟದ ಅಂಗಡಿಗಳ ಹೆಸರುಗಳನ್ನು ಕೇವಲ ಆಂಗ್ಲ ಭಾಷೆಯ ದಪ್ಪ ಅಕ್ಷರಗಳಲ್ಲಿಯೇ ಬರೆಸಿರುವುದು ರಾಜಾರೋಷವಾಗಿ ಕಂಡು ಬರುತ್ತಿದೆ.</p>.<p>Quote - ತಾಲ್ಲೂಕಿನಲ್ಲಿ ಬಹುತೇಕರು ಕನ್ನಡ ಭಾಷೆಯನ್ನು ಮಾತನಾಡಿದರೂ ನಗರದಲ್ಲಿ ಇರುವ ಸಿನಿಮಾ ಮಂದಿರಗಳಲ್ಲಿ ಸದಾ ಅನ್ಯಭಾಷೆಯ ಚಲನಚಿತ್ರಗಳನ್ನೇ ಪ್ರದರ್ಶಿಸಲಾಗುತ್ತದೆ. ಆದರೆ ನವೆಂಬರ್ನ ಕರ್ನಾಟಕ ರಾಜ್ಯೋತ್ಸವ ದಿನದಂದು ಮಾತ್ರ ಕೇವಲ ಒಂದು ದಿನದ ಮಟ್ಟಿಗೆ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಕನ್ನಡ ಭಾಷೆ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರಿವು ಮೂಡಿಸಬೇಕಿದೆ. ನರಸಿಂಹ ಕುರುಬರಹಳ್ಳಿ</p>.<p>Quote - ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕನ್ನಡ ಭಾಷೆ ಹಾಗೂ ಅರ್ಥಗಳು ಭಿನ್ನಾರ್ಥವನ್ನು ಪಡೆಯುವ ರೀತಿಯಲ್ಲಿ ತಪ್ಪುಗಳಾಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಿಸಿದವರಿಗೆ ಹೇಳಿ ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಬಿ.ಆರ್.ಮುನಿವೆಂಕಟಪ್ಪ ಗ್ರೇಡ್ 2 ತಹಶೀಲ್ದಾರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>