<p><strong>ಕೋಲಾರ</strong>: ‘ಕನ್ನಡ ನಾಡಿನಲ್ಲಿ ಕನ್ನಡದ ಮೊದಲ ರಾಜವಂಶ ಕದಂಬರದ್ದಾಗಿದ್ದು, ನಾಡಿಗೆ ಇವರ ಕೊಡುಗೆ ಅನನ್ಯವಾದುದು’ ಎಂದು ಉಪನ್ಯಾಸಕ ಜೆ.ಜಿ.ನಾಗರಾಜ್ ತಿಳಿಸಿದರು.</p>.<p>ನಗರದ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡದ ರಾಜವಂಶ ಕದಂಬರು’ ಒಂದು ನೆನಪು ಕಾರ್ಯಕ್ರಮದಲ್ಲಿ ‘ಕದಂಬ ಮಯೂರ ಶರ್ಮ’ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಈ ನೆಲದಲ್ಲಿ ಮೊದಲು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಆದೇಶಿಸಿ ಕನ್ನಡದ ಆಳ್ವಿಕೆಯನ್ನು ಮಾಡಿದ ಮೊದಲ ರಾಜವಂಶ ಕದಂಬರದ್ದಾಗಿದೆ. ಸ್ಕಂಧ ಎಂಬ ಕನ್ನಡ ನಾಣ್ಯವನ್ನು ಚಲಾವಣೆಗೆ ತಂದಿದ್ದು, ಈ ವಿಚಾರ ಇಂದಿನ ಪೀಳಿಗೆಗೆ ಅರ್ಥವಾಗಬೇಕಾಗಿದೆ, ಕನ್ನಡದ ಪ್ರೀತಿ ಗಟ್ಟಿಗೊಳ್ಳಬೇಕಾಗಿದೆ’ ಎಂದರು.</p>.<p>‘ಡಾ.ರಾಜ್ಕುಮಾರ್ ನಟಿಸಿದ ಮಯೂರ ಸಿನಿಮಾ ಕದಂಬರ ಮಯೂರ ವರ್ಮನ ಇತಿಹಾಸವನ್ನು ನೆನಪಿಸುವಂತಹದ್ದಾಗಿದೆ. ಇದರಿಂದ ನಾಡಿನಲ್ಲಿ ಕನ್ನಡ ಅಭಿಮಾನ ಹೆಚ್ಚಾಯಿತು’ ಎಂದು ತಿಳಿಸಿದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ‘ಕದಂಬ ವಂಶದ ಮಯೂರ ವರ್ಮ ಸಾಮ್ರಾಜ್ಯ ಸ್ಥಾಪಿಸಿದ ದಿನ ಮೇ 28. ಈ ದಿನವನ್ನು ಕನ್ನಡ ದೇಶದ ಏಕೀಕರಣ ದಿನವನ್ನಾಗಿ ಜಯ ಕರ್ನಾಟಕ ಸಂಘಟನೆಯಿಂದ ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಎರಡು ಶತಮಾನ ಕನ್ನಡ ನಾಡನ್ನು ಆಳಿದ ಕದಂಬ ರಾಜವಂಶವನ್ನು ನೆನಪಿಸುವ ಕಾರ್ಯಕ್ರಮವನ್ನು ರೂಪಿಸಿರುವುದರ ಉದ್ದೇಶ ಇಂದಿನ ಕನ್ನಡಿಗರಿಗೆ ಕದಂಬರ ಕನ್ನಡ ಪ್ರೀತಿಯ ಬದ್ಧತೆ ಅರ್ಥೈಸುವುದಾಗಿದೆ’ ಎಂದರು.</p>.<p>‘ರಾಜ್ಯ ಸರ್ಕಾರವು ಕನ್ನಡದ ರಾಜವಂಶ ಕದಂಬರ ಆಳ್ವಿಕೆಯನ್ನು ನೆನಪಿಸಿಕೊಳ್ಳುವಂಥ ಕಾರ್ಯಕ್ರಮ ರೂಪಿಸಬೇಕು’ ಎಂದು ಹೇಳಿದರು.</p>.<p>ನಗರಸಭೆ ಸದಸ್ಯ ಎಂ.ಪ್ರಸಾದ್ ಬಾಬು, ಅಶ್ವಥ್ ನಾರಾಯಣಗೌಡ, ನಿವೃತ್ತ ಎಎಸ್ಐ ರವಿಂದ್ರನಾಥ್, ರಮೇಶ್ ಬಾಬು, ವಿ.ಸುಬ್ರಮಣಿ, ನಂದೀಶ್, ಕೆ.ಎನ್.ಮುನಿಕೃಷ್ಣ. ಎಂ.ಶಬರೀಶ್, ರವಿ ಕೀಲುಕೋಟೆ, ಕೆ.ಎಂ.ಶಿವಕುಮಾರ್, ಧನಂಜಯ, ಅಭಿಲಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ‘ಕನ್ನಡ ನಾಡಿನಲ್ಲಿ ಕನ್ನಡದ ಮೊದಲ ರಾಜವಂಶ ಕದಂಬರದ್ದಾಗಿದ್ದು, ನಾಡಿಗೆ ಇವರ ಕೊಡುಗೆ ಅನನ್ಯವಾದುದು’ ಎಂದು ಉಪನ್ಯಾಸಕ ಜೆ.ಜಿ.ನಾಗರಾಜ್ ತಿಳಿಸಿದರು.</p>.<p>ನಗರದ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡದ ರಾಜವಂಶ ಕದಂಬರು’ ಒಂದು ನೆನಪು ಕಾರ್ಯಕ್ರಮದಲ್ಲಿ ‘ಕದಂಬ ಮಯೂರ ಶರ್ಮ’ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಈ ನೆಲದಲ್ಲಿ ಮೊದಲು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಆದೇಶಿಸಿ ಕನ್ನಡದ ಆಳ್ವಿಕೆಯನ್ನು ಮಾಡಿದ ಮೊದಲ ರಾಜವಂಶ ಕದಂಬರದ್ದಾಗಿದೆ. ಸ್ಕಂಧ ಎಂಬ ಕನ್ನಡ ನಾಣ್ಯವನ್ನು ಚಲಾವಣೆಗೆ ತಂದಿದ್ದು, ಈ ವಿಚಾರ ಇಂದಿನ ಪೀಳಿಗೆಗೆ ಅರ್ಥವಾಗಬೇಕಾಗಿದೆ, ಕನ್ನಡದ ಪ್ರೀತಿ ಗಟ್ಟಿಗೊಳ್ಳಬೇಕಾಗಿದೆ’ ಎಂದರು.</p>.<p>‘ಡಾ.ರಾಜ್ಕುಮಾರ್ ನಟಿಸಿದ ಮಯೂರ ಸಿನಿಮಾ ಕದಂಬರ ಮಯೂರ ವರ್ಮನ ಇತಿಹಾಸವನ್ನು ನೆನಪಿಸುವಂತಹದ್ದಾಗಿದೆ. ಇದರಿಂದ ನಾಡಿನಲ್ಲಿ ಕನ್ನಡ ಅಭಿಮಾನ ಹೆಚ್ಚಾಯಿತು’ ಎಂದು ತಿಳಿಸಿದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ‘ಕದಂಬ ವಂಶದ ಮಯೂರ ವರ್ಮ ಸಾಮ್ರಾಜ್ಯ ಸ್ಥಾಪಿಸಿದ ದಿನ ಮೇ 28. ಈ ದಿನವನ್ನು ಕನ್ನಡ ದೇಶದ ಏಕೀಕರಣ ದಿನವನ್ನಾಗಿ ಜಯ ಕರ್ನಾಟಕ ಸಂಘಟನೆಯಿಂದ ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಎರಡು ಶತಮಾನ ಕನ್ನಡ ನಾಡನ್ನು ಆಳಿದ ಕದಂಬ ರಾಜವಂಶವನ್ನು ನೆನಪಿಸುವ ಕಾರ್ಯಕ್ರಮವನ್ನು ರೂಪಿಸಿರುವುದರ ಉದ್ದೇಶ ಇಂದಿನ ಕನ್ನಡಿಗರಿಗೆ ಕದಂಬರ ಕನ್ನಡ ಪ್ರೀತಿಯ ಬದ್ಧತೆ ಅರ್ಥೈಸುವುದಾಗಿದೆ’ ಎಂದರು.</p>.<p>‘ರಾಜ್ಯ ಸರ್ಕಾರವು ಕನ್ನಡದ ರಾಜವಂಶ ಕದಂಬರ ಆಳ್ವಿಕೆಯನ್ನು ನೆನಪಿಸಿಕೊಳ್ಳುವಂಥ ಕಾರ್ಯಕ್ರಮ ರೂಪಿಸಬೇಕು’ ಎಂದು ಹೇಳಿದರು.</p>.<p>ನಗರಸಭೆ ಸದಸ್ಯ ಎಂ.ಪ್ರಸಾದ್ ಬಾಬು, ಅಶ್ವಥ್ ನಾರಾಯಣಗೌಡ, ನಿವೃತ್ತ ಎಎಸ್ಐ ರವಿಂದ್ರನಾಥ್, ರಮೇಶ್ ಬಾಬು, ವಿ.ಸುಬ್ರಮಣಿ, ನಂದೀಶ್, ಕೆ.ಎನ್.ಮುನಿಕೃಷ್ಣ. ಎಂ.ಶಬರೀಶ್, ರವಿ ಕೀಲುಕೋಟೆ, ಕೆ.ಎಂ.ಶಿವಕುಮಾರ್, ಧನಂಜಯ, ಅಭಿಲಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>