<p><strong>ಮುಳಬಾಗಿಲು:</strong> ತಾಲ್ಲೂಕಿನ ನಂಗಲಿ ಗ್ರಾಮದ ಸ್ಮಶಾನ ಸ್ಥಳ ಸರ್ವೆ ನಡೆಸಿ ಹಿಂದೂ ರುದ್ರಭೂಮಿ ಎಂದು ಪ್ರತ್ಯೇಕ ಖಾತೆ ಮಾಡಬೇಕೆಂದು ಗ್ರಾಮಸ್ಥರು ನೀಡಿದ್ದ ಮನವಿಗೆ ಸ್ಪಂದಿಸಿ ಶನಿವಾರ ಸರ್ವೆ ಹಾಗೂ ಕಂದಾಯ ಅಧಿಕಾರಿಗಳು ಸ್ಮಶಾನ ಸರ್ವೆ ನಡೆಸಿದರು.</p>.<p>ನಂಗಲಿಯಲ್ಲಿ ಸುಮಾರು 2 ಸಾವಿರ ಮನೆ ಹಾಗೂ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ವಿಸ್ತಾರವಾದ ಸ್ಮಶಾನ ಭೂಮಿ ಇದ್ದರೂ ದಾಖಲೆಗಳಲ್ಲಿ ಸ್ಮಶಾನ ಎಂದು ತೋರಿಸುತ್ತಿರಲಿಲ್ಲ. ಹಾಗಾಗಿ ಗ್ರಾಮಸ್ಥರು ಜುಲೈ 17 ರಂದು ಗ್ರೇಡ್ 2 ತಹಶೀಲ್ದಾರ್ ಬಿ.ಆರ್. ಮುನಿವೆಂಕಟಪ್ಪರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಪ್ರಜಾವಾಣಿಯಲ್ಲಿ ‘ಸ್ಮಶಾನ ಜಾಗ: ಖಾತೆಗೆ ಮನವಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ.</p>.<p>ಉಪ ತಹಶೀಲ್ದಾರ್ ಕೆ.ಟಿ.ವೆಂಕಟೇಶಪ್ಪ, ಸರ್ವೆ ಅಧಿಕಾರಿ ಪ್ರಭು, ಗ್ರಾಮ ಲೆಕ್ಕಾಧಿಕಾರಿ ಶ್ರೀನಿಧಿ, ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ. ಶ್ರೀಧರ್, ರಮೇಶ್, ಕಿಶೋರ್, ಮೋಹನ್, ಮಣಿ, ಚಂದ್ರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ತಾಲ್ಲೂಕಿನ ನಂಗಲಿ ಗ್ರಾಮದ ಸ್ಮಶಾನ ಸ್ಥಳ ಸರ್ವೆ ನಡೆಸಿ ಹಿಂದೂ ರುದ್ರಭೂಮಿ ಎಂದು ಪ್ರತ್ಯೇಕ ಖಾತೆ ಮಾಡಬೇಕೆಂದು ಗ್ರಾಮಸ್ಥರು ನೀಡಿದ್ದ ಮನವಿಗೆ ಸ್ಪಂದಿಸಿ ಶನಿವಾರ ಸರ್ವೆ ಹಾಗೂ ಕಂದಾಯ ಅಧಿಕಾರಿಗಳು ಸ್ಮಶಾನ ಸರ್ವೆ ನಡೆಸಿದರು.</p>.<p>ನಂಗಲಿಯಲ್ಲಿ ಸುಮಾರು 2 ಸಾವಿರ ಮನೆ ಹಾಗೂ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ವಿಸ್ತಾರವಾದ ಸ್ಮಶಾನ ಭೂಮಿ ಇದ್ದರೂ ದಾಖಲೆಗಳಲ್ಲಿ ಸ್ಮಶಾನ ಎಂದು ತೋರಿಸುತ್ತಿರಲಿಲ್ಲ. ಹಾಗಾಗಿ ಗ್ರಾಮಸ್ಥರು ಜುಲೈ 17 ರಂದು ಗ್ರೇಡ್ 2 ತಹಶೀಲ್ದಾರ್ ಬಿ.ಆರ್. ಮುನಿವೆಂಕಟಪ್ಪರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಪ್ರಜಾವಾಣಿಯಲ್ಲಿ ‘ಸ್ಮಶಾನ ಜಾಗ: ಖಾತೆಗೆ ಮನವಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ.</p>.<p>ಉಪ ತಹಶೀಲ್ದಾರ್ ಕೆ.ಟಿ.ವೆಂಕಟೇಶಪ್ಪ, ಸರ್ವೆ ಅಧಿಕಾರಿ ಪ್ರಭು, ಗ್ರಾಮ ಲೆಕ್ಕಾಧಿಕಾರಿ ಶ್ರೀನಿಧಿ, ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ. ಶ್ರೀಧರ್, ರಮೇಶ್, ಕಿಶೋರ್, ಮೋಹನ್, ಮಣಿ, ಚಂದ್ರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>