ಸರ್ವೆ ನಂಬರ್ 21 ಮತ್ತು 23ರಲ್ಲಿ ಅನೇಕ ಬಡಾವಣೆಗಳು ಬಂದಿವೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾಗಿದೆ. ಕೆಡಿಎ ಆನುಮೋದನೆಯಾಗಿದೆ. ಸರ್ವೆ ನಂಬರ್ 22ರಲ್ಲಿ ಅರಣ್ಯಕ್ಕೆ ಜಾಗ ಸಿಗಬಹುದು. ಅಲ್ಲಿ ಅರಣ್ಯ ಅಭಿವೃದ್ಧಿ ಮಾಡಬಹುದು
ಸುರೇಶ್ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಅನಧಿಕೃತ ಬಡಾವಣೆ ತೆರವು
ಜೂನ್ 30 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಪಡೆಯದೇ ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿತ್ತು. ಇಂತಹ ಬಡಾವಣೆಗಳು ಡಿಕೆ ಹಳ್ಳಿ ಗ್ರಾಮ ಪಂ
ಅನುಮತಿ ಪಡೆಯದೆ ಖಾತೆ ತೆಗೆದಿರುವ ಪಂಚಾಯಿತಿಗಳು
ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಕೆಸರನಹಳ್ಳಿ ಐನೋರ ಹೊಸಹಳ್ಳಿ ಹುಲಿಬೆಲೆ ಚಿನ್ನಕೋಟೆ ದೊಡ್ಡೂರು ಕರಪನಹಳ್ಳಿ ಮತ್ತು ಕೆಜಿಎಫ್ ತಾಲ್ಲೂಕಿನ ಘಟ್ಟಕಾಮಧೇನಹಳ್ಳಿ ಕಮ್ಮಸಂದ್ರ ಬೇತಮಂಗಲ ಮತ್ತು ಪಾರಾಂಡಹಳ್ಳಿ ಈ ಪಂಚಾಯಿತಿಗಳು ಅನುಮತಿ ಪಡೆಯದೆ ಖಾತೆ ತೆಗೆದಿದ್ದಾವೆ.
ಕಂದಾಯ ಇಲಾಖೆಗೆ ಮನಸ್ಸಿಲ್ಲ
ಬಡಮಾಕನಹಳ್ಳಿ ಕಾಡು ಪ್ರದೇಶ ಮತ್ತು ಬಿಜಿಎಂಎಲ್ಗೆ ಹೊಂದಿಕೊಂಡಿರುವ ಡಿಕೆ ಹಳ್ಳಿ ಪ್ಲಾಂಟೇಷನ್ ಅರಣ್ಯ ಇಲಾಖೆ ವ್ಯಾಪ್ತಿಗೆ ನೀಡಲು ವಿಸ್ತೃತ ಪ್ರಸ್ತಾವವನ್ನು ಸರ್ಕಾರಕ್ಕೆ ಕಳಿಸಲಾಗಿತ್ತು. ಆದರೆ ಕಂದಾಯ ಇಲಾಖೆ ಈ ಪ್ರದೇಶವನ್ನು ನೀಡಲು ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಒತ್ತುವರಿಯನ್ನು ತಡೆದು ಕೃಷ್ಣಮೃಗಗಳಿಗೆ ವನ್ಯಧಾಮ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತಾಗಿದೆ.