<p><strong>ಕೆಜಿಎಫ್:</strong> ಬಿಜಿಎಂಎಲ್ನ ಹಲವಾರು ಬಡಾವಣೆ ನಿವಾಸಿಗಳು ಓಡಾಡುತ್ತಿದ್ದ ರೈಲ್ವೆ ಕೆಳಸೇತುವೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧಿಸಿದ ಕಾರಣ ಶನಿವಾರ ಮೈನಿಂಗ್ ಕಾಲೊನಿ ನಿವಾಸಿಗಳು ಪ್ರತಿಭಟನೆ ನಡೆಸಿದರು.</p>.<p>ಕೋರಮಂಡಲ್ ಟ್ಯಾಂಕ್ ಬ್ಲಾಕ್ ಬಳಿ ರೈಲ್ವೆ ಇಲಾಖೆಯು ನೀರು ಹೋಗಲು ಕೆಳಸೇತುವೆ ನಿರ್ಮಾಣ ಮಾಡಿತ್ತು. ಬ್ರಿಟಿಷರು ಚಿನ್ನದ ಗಣಿ ನಡೆಸುತ್ತಿದ್ದ ಕಾಲದಲ್ಲಿ ರೈಲ್ವೆ ಹಳಿ ಹಾಕಲು 1914ರಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇತ್ತೀಚಿಗೆ ಸೇತುವೆ ಶಿಥಿಲವಾಗಿದ್ದು, ರೈಲ್ವೆ ಇಲಾಖೆ ಸೇತುವೆ ಸಮೀಪ ಎಚ್ಚರಿಕೆ ಬೋರ್ಡ್ ಹಾಕಿತ್ತು. ಕೆಳಸೇತುವೆಯಲ್ಲಿ ಓಡಾಡುವುದು ಅಪಾಯ ಮತ್ತು ಕಾನೂನಿಗೆ ವಿರುದ್ಧ ಎಂಬ ಒಕ್ಕಣೆಯನ್ನು ಬರೆಸಿತ್ತು. ಸೇತುವೆ ಬಗ್ಗೆ ಶುಕ್ರವಾರದಂದು ಅನ್ಬರಸನ್ ಎಂಬುವರು ವಿಡಿಯೊ ಮಾಡಿ, ಸೇತುವೆ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದ್ದರು.</p>.<p>ಈ ಹಿನ್ನಲೆಯಲ್ಲಿ ಮುಂಜಾನೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು ಕೆಳಸೇತುವೆ ಮುಚ್ಚಿ, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಿದರು. ಇದರಿಂದ ಕುಪಿತಗೊಂಡ ನೂರಾರು ನಿವಾಸಿಗಳು ಸೇತುವೆ ಮುಂಭಾಗದಲ್ಲಿ ಧರಣಿ ಕುಳಿತರು. ರೈಲ್ವೆ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದರು. ಸೌತ್ ಟ್ಯಾಂಕ್ ಬ್ಲಾಕ್, ನಾರ್ತ್ ಟ್ಯಾಂಕ್ ಬ್ಲಾಕ್, ಹೆನ್ರೀಸ್, ಕೋರಮಂಡಲ್ ಮೊದಲಾದ ಬಡಾವಣೆಗಳಿಗೆ ಹೋಗಲು ನೂರಾರು ವರ್ಷದಿಂದ ಈ ಮಾರ್ಗವನ್ನು ಉಪಯೋಗಿಸಲಾಗುತ್ತಿದೆ. ಏಕಾಏಕಿ ಮಾರ್ಗ ಮುಚ್ಚಿದರೆ ನಾಲ್ಕೈದು ಕಿ.ಮೀ ಸುತ್ತಿ ಹಾಕಿಕೊಂಡು ಹೋಗಬೇಕಾಗುತ್ತದೆ. ನಿವಾಸಿಗಳು ಸಾಕುತ್ತಿರುವ ಕುರಿ, ಮೇಕೆಗಳು ಇದೇ ಮಾರ್ಗದಲ್ಲಿ ಮೇಯಲು ಹೋಗುತ್ತಿದ್ದವು. ಈಗ ಅವು ರೈಲ್ವೆ ಹಳಿಗಳ ಮೇಲೆ ಹಾದುಹೋಗಬೇಕಾಗಿದೆ. ಇದರಿಂದ ಪ್ರಾಣಿಗಳು ರೈಲಿಗೆ ಸಿಲುಕಿ ಸಾಯುವ ಸಂಭವವಿದೆ. ವಯಸ್ಸಾದವರು ಮತ್ತು ಮಹಿಳೆಯರು ಕೂಡ ರೈಲ್ವೆ ಹಳಿ ದಾಟಿಕೊಂಡು ಬೇರೆ ಪ್ರದೇಶಗಳಿಗೆ ಹೋಗುವುದು ಅಪಾಯಕಾರಿಯಾಗಿದೆ. ಯಾವುದೇ ಕಾರಣದಿಂದಲೂ ಕೆಳಸೇತುವೆ ನಿರ್ಬಂಧ ಹೇರಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.</p>.<p>ನಂತರ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನಿವಾಸಿಗಳ ಪ್ರತಿನಿಧಿಗಳನ್ನು ಬಂಗಾರಪೇಟೆಯ ಹಿರಿಯ ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋದರು. ಸೇತುವೆ ಶಿಥಿಲವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಂದಿದೆ. ಇಲಾಖೆಯಿಂದ ಕೂಡ ನಾಮಫಲಕ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಸೇತುವೆ ಕೆಳಗೆ ವಾಹನ ಸಂಚಾರಕ್ಕೆ ಅನುಮತಿ ಕೊಟ್ಟರೆ ಅನಾಹುತವಾಗುವ ಸಂಭವ ಇದೆ. ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಅನುಕೂಲವಾಗುವಂತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.</p>.<p>ಚರ್ಚೆಯ ನಂತರ ಅಂಡರ್ಪಾಸ್ ಬಳಿ ಕಬ್ಬಿಣದ ಸರಳನ್ನು ನೆಡಲಾಯಿತು. ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಶಾಶ್ವತವಾಗಿ ಸಂಚಾರ ನಿರ್ಬಂಧ ಮಾಡಲಾಯಿತು.</p>.<p> <strong>ಹೊಸ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹ</strong></p><p> ರೈಲ್ವೆ ಅಧಿಕಾರಿಗಳು ಕೆಳಸೇತುವೆ ಮುಚ್ಚಿರುವುದರಿಂದ ಸಾವಿರಾರು ನಾಗರಿಕರಿಗೆ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಸಂಸದರು ಮಧ್ಯೆ ಪ್ರವೇಶಿಸಿ ಹೊಸದಾಗಿ ಕೆಳಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ಬಿಜಿಎಂಎಲ್ನ ಹಲವಾರು ಬಡಾವಣೆ ನಿವಾಸಿಗಳು ಓಡಾಡುತ್ತಿದ್ದ ರೈಲ್ವೆ ಕೆಳಸೇತುವೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧಿಸಿದ ಕಾರಣ ಶನಿವಾರ ಮೈನಿಂಗ್ ಕಾಲೊನಿ ನಿವಾಸಿಗಳು ಪ್ರತಿಭಟನೆ ನಡೆಸಿದರು.</p>.<p>ಕೋರಮಂಡಲ್ ಟ್ಯಾಂಕ್ ಬ್ಲಾಕ್ ಬಳಿ ರೈಲ್ವೆ ಇಲಾಖೆಯು ನೀರು ಹೋಗಲು ಕೆಳಸೇತುವೆ ನಿರ್ಮಾಣ ಮಾಡಿತ್ತು. ಬ್ರಿಟಿಷರು ಚಿನ್ನದ ಗಣಿ ನಡೆಸುತ್ತಿದ್ದ ಕಾಲದಲ್ಲಿ ರೈಲ್ವೆ ಹಳಿ ಹಾಕಲು 1914ರಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇತ್ತೀಚಿಗೆ ಸೇತುವೆ ಶಿಥಿಲವಾಗಿದ್ದು, ರೈಲ್ವೆ ಇಲಾಖೆ ಸೇತುವೆ ಸಮೀಪ ಎಚ್ಚರಿಕೆ ಬೋರ್ಡ್ ಹಾಕಿತ್ತು. ಕೆಳಸೇತುವೆಯಲ್ಲಿ ಓಡಾಡುವುದು ಅಪಾಯ ಮತ್ತು ಕಾನೂನಿಗೆ ವಿರುದ್ಧ ಎಂಬ ಒಕ್ಕಣೆಯನ್ನು ಬರೆಸಿತ್ತು. ಸೇತುವೆ ಬಗ್ಗೆ ಶುಕ್ರವಾರದಂದು ಅನ್ಬರಸನ್ ಎಂಬುವರು ವಿಡಿಯೊ ಮಾಡಿ, ಸೇತುವೆ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದ್ದರು.</p>.<p>ಈ ಹಿನ್ನಲೆಯಲ್ಲಿ ಮುಂಜಾನೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು ಕೆಳಸೇತುವೆ ಮುಚ್ಚಿ, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಿದರು. ಇದರಿಂದ ಕುಪಿತಗೊಂಡ ನೂರಾರು ನಿವಾಸಿಗಳು ಸೇತುವೆ ಮುಂಭಾಗದಲ್ಲಿ ಧರಣಿ ಕುಳಿತರು. ರೈಲ್ವೆ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದರು. ಸೌತ್ ಟ್ಯಾಂಕ್ ಬ್ಲಾಕ್, ನಾರ್ತ್ ಟ್ಯಾಂಕ್ ಬ್ಲಾಕ್, ಹೆನ್ರೀಸ್, ಕೋರಮಂಡಲ್ ಮೊದಲಾದ ಬಡಾವಣೆಗಳಿಗೆ ಹೋಗಲು ನೂರಾರು ವರ್ಷದಿಂದ ಈ ಮಾರ್ಗವನ್ನು ಉಪಯೋಗಿಸಲಾಗುತ್ತಿದೆ. ಏಕಾಏಕಿ ಮಾರ್ಗ ಮುಚ್ಚಿದರೆ ನಾಲ್ಕೈದು ಕಿ.ಮೀ ಸುತ್ತಿ ಹಾಕಿಕೊಂಡು ಹೋಗಬೇಕಾಗುತ್ತದೆ. ನಿವಾಸಿಗಳು ಸಾಕುತ್ತಿರುವ ಕುರಿ, ಮೇಕೆಗಳು ಇದೇ ಮಾರ್ಗದಲ್ಲಿ ಮೇಯಲು ಹೋಗುತ್ತಿದ್ದವು. ಈಗ ಅವು ರೈಲ್ವೆ ಹಳಿಗಳ ಮೇಲೆ ಹಾದುಹೋಗಬೇಕಾಗಿದೆ. ಇದರಿಂದ ಪ್ರಾಣಿಗಳು ರೈಲಿಗೆ ಸಿಲುಕಿ ಸಾಯುವ ಸಂಭವವಿದೆ. ವಯಸ್ಸಾದವರು ಮತ್ತು ಮಹಿಳೆಯರು ಕೂಡ ರೈಲ್ವೆ ಹಳಿ ದಾಟಿಕೊಂಡು ಬೇರೆ ಪ್ರದೇಶಗಳಿಗೆ ಹೋಗುವುದು ಅಪಾಯಕಾರಿಯಾಗಿದೆ. ಯಾವುದೇ ಕಾರಣದಿಂದಲೂ ಕೆಳಸೇತುವೆ ನಿರ್ಬಂಧ ಹೇರಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.</p>.<p>ನಂತರ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನಿವಾಸಿಗಳ ಪ್ರತಿನಿಧಿಗಳನ್ನು ಬಂಗಾರಪೇಟೆಯ ಹಿರಿಯ ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋದರು. ಸೇತುವೆ ಶಿಥಿಲವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಂದಿದೆ. ಇಲಾಖೆಯಿಂದ ಕೂಡ ನಾಮಫಲಕ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಸೇತುವೆ ಕೆಳಗೆ ವಾಹನ ಸಂಚಾರಕ್ಕೆ ಅನುಮತಿ ಕೊಟ್ಟರೆ ಅನಾಹುತವಾಗುವ ಸಂಭವ ಇದೆ. ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಅನುಕೂಲವಾಗುವಂತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.</p>.<p>ಚರ್ಚೆಯ ನಂತರ ಅಂಡರ್ಪಾಸ್ ಬಳಿ ಕಬ್ಬಿಣದ ಸರಳನ್ನು ನೆಡಲಾಯಿತು. ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಶಾಶ್ವತವಾಗಿ ಸಂಚಾರ ನಿರ್ಬಂಧ ಮಾಡಲಾಯಿತು.</p>.<p> <strong>ಹೊಸ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹ</strong></p><p> ರೈಲ್ವೆ ಅಧಿಕಾರಿಗಳು ಕೆಳಸೇತುವೆ ಮುಚ್ಚಿರುವುದರಿಂದ ಸಾವಿರಾರು ನಾಗರಿಕರಿಗೆ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಸಂಸದರು ಮಧ್ಯೆ ಪ್ರವೇಶಿಸಿ ಹೊಸದಾಗಿ ಕೆಳಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>