ನೋಟಿಸ್ ಕೊಡಲಾಗಿದೆ: ಡಿಡಿಪಿಐ ಕೃಷ್ಣಮೂರ್ತಿ
ಫೋಟೊ, ವಿಡಿಯೊ ಗಮನಿಸಿದರೆ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದಂತಿದೆ. ಉಪಪ್ರಾಂಶುಪಾಲೆ ರಾಧಮ್ಮ ಅವರೊಂದಿಗೆ ಮಾತನಾಡಿ ವಿವರಣೆ ಪಡೆದಿದ್ದೇನೆ. ಎಸ್ಸೆಸ್ಸೆಲ್ಸಿ ಅಲ್ಲ; 9ನೇ ತರಗತಿ ವಿದ್ಯಾರ್ಥಿಗಳ ಕೈಯಲ್ಲಿ ತೋಟಗಾರಿಕೆ ಕೆಲಸ ಮಾಡಿಸಿದ್ದಾಗಿ ವಿವರಣೆ ನೀಡಿದ್ದಾರೆ. ಯಾವುದೇ ವಿದ್ಯಾರ್ಥಿಗಳಿಂದ ಇಂಥ ಯಾವುದೇ ಕೆಲಸ ಮಾಡಿಸುವುದು ತಪ್ಪು. ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ನೋಟಿಸ್ ಕೊಟ್ಟಿದ್ದಾರೆ. ಬುಧವಾರ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ