ನಗರದ ವಿರುಪಾಪುರ ತಾಂಡದಲ್ಲಿ ಆಚರಿಸುವ ಮೊಹರಂ ಹಬ್ಬದಲ್ಲಿ ಲಂಬಾಣಿ ಮತ್ತು ಬೋವಿ (ವಡ್ಡರ) ಜನಾಂಗದ ನಡುವೆ ವೈಷಮ್ಯ ಉಂಟಾಗಿ, ಹಲವು ಬಾರಿ ಜಗಳಗಳಾಗಿ ಪ್ರಕರಣಗಳು ದಾಖಲಾಗಿವೆ. ವಿರುಪಾಪುರ ತಾಂಡದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆಯಲು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಪ್ರಕಾರ ಕಲಂ 163ರನ್ವಯ ವಿರುಪಾಪುರ ತಾಂಡದಲ್ಲಿ ಮೊಹರಂ ಹಬ್ಬ ನಿಷೇಧಿಸಿ, ಆದೇಶ ಹೊರಡಿಸಲಾಗಿದೆ.