ಮೈಸೂರು: ದಸರಾ ಚಲನಚಿತ್ರೋತ್ಸವದ ಅಂಗವಾಗಿ ನಗರದ ಮಾಲ್ ಆಫ್ ಮೈಸೂರ್ನ ಐನಾಕ್ಸ್ ಚಿತ್ರಮಂದಿರ ಆವರಣದಲ್ಲಿ ‘ಕನ್ನಡ ಸಿನಿಮಾ ಬೆಳೆದು ಬಂದ ಹಾದಿ’ ಕುರಿತ ಛಾಯಾಚಿತ್ರಗಳ ಪ್ರದರ್ಶನವನ್ನು ಶುಕ್ರವಾರದಿಂದ ಆಯೋಜಿಸಲಾಗಿದ್ದು, ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು ಉದ್ಘಾಟಿಸಿದರು.
ಛಾಯಾಗ್ರಾಹಕ ಅಶ್ವತ್ಥನಾರಾಯಣ್ ಅವರು ಸೆರೆಹಿಡಿದಿರುವ ಅಪರೂಪದ ಫೋಟೊಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಚಲನಚಿತ್ರೋತ್ಸವ ಅಧಿಕಾರೇತರ ಸಮಿತಿಯ ಅಧ್ಯಕ್ಷ ಪ್ರವೀಣ್ ಕೃಪಾಕರ್, ಉಪ ಸಮಿತಿಯ ಉಪ ವಿಶೇಷಾಧಿಕಾರಿ ಕೆ.ಎನ್. ಬಸವರಾಜ, ಕಾರ್ಯಾಧ್ಯಕ್ಷ ಬಿ.ರಂಗೇಗೌಡ, ಕಾರ್ಯದರ್ಶಿ ಟಿ.ಕೆ. ಹರೀಶ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.