‘ಜಿಲ್ಲಾಡಳಿತ ಹಾಗೂ ಪೊಲೀಸರ ನಿರ್ಧಾರ ಸ್ವಾಗತಾರ್ಹ. ಜನರ ಓಡಾಟವಿದ್ದರಷ್ಟೇ ದಸರಾದ ರಂಗು ಹೆಚ್ಚಲು ಸಾಧ್ಯ. ಆರಂಭದಲ್ಲೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಶಾಸಕರಾದ ಕೆ.ಹರೀಶ್ ಗೌಡ, ತನ್ವೀರ್ ಸೇಠ್ ಅವರಲ್ಲೂ ಮನವಿ ಮಾಡಿಕೊಂಡಿದ್ದೆವು. ದಸರಾ ಸಮಯದಲ್ಲಿ ಎಂದಿನಂತೆ ಅಧಿಕಾರಿಗಳಿಗೆ ಸಹಕರಿಸುತ್ತೇವೆ’ ಎಂದು ಡಿ.ದೇವರಾಜ ಅರಸು ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ವೀರಭದ್ರ ತಿಳಿಸಿದರು.