ಕನಕಪುರ: ಶಿಥಿಲಾವಸ್ಥೆಯಲ್ಲಿ 75 ಶಾಲಾ ಕಟ್ಟಡಗಳ 144 ಕೊಠಡಿ
ಓದೇಶ ಸಕಲೇಶಪುರ / ಕೃಷ್ಣಮೂರ್ತಿ ಬರಡನಹಳ್ಳಿ
Published : 15 ಜುಲೈ 2024, 4:59 IST
Last Updated : 15 ಜುಲೈ 2024, 4:59 IST
ಫಾಲೋ ಮಾಡಿ
Comments
ಕನಕಪುರ ತಾಲ್ಲೂಕಿನ ಕೋನಮಾನಹಳ್ಳಿ ಸರ್ಕಾರಿ ಶಾಲೆಯ ಕೊಠಡಿಗಳು ಶಿಥಿಲವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪಡಸಾಲೆಯಲ್ಲೇ ಪಾಠ ನಡೆಯುತ್ತಿದೆ
ಶಿಥಿಲವಾಗಿರುವ ಹಳೆಯ ಶಾಲೆಗಳ ದುರಸ್ತಿ ಬದಲು ಹೊಸ ಕಟ್ಟಡಗಳನ್ನು ನಿರ್ಮಿಸಿ ಎಂದು ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಒತ್ತಾಯಿಸುತ್ತಾರೆ. ಹಾಗಾಗಿ ಕೆಲ ಶಾಲೆಗಳ ದುರಸ್ತಿ ನಡೆದಿಲ್ಲ
- ಕೆಎಸ್ ಸ್ವರೂಪ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
‘ಕ್ರಿಯಾಯೋಜನೆ ಕಳಿಸಿದಂತೆ ಕೆಲಸವಾಗುತ್ತಿಲ್ಲ’
‘ಮುಂಚೆ ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳ ದುರಸ್ತಿ ಮತ್ತು ಹೊಸ ಕಟ್ಟಡಕ್ಕೆ ಅನುದಾನ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಬರುತ್ತಿತ್ತು. ಆಗ ಶಾಲಾ ಶಿಕ್ಷಕರು ಮತ್ತು ಎಸ್ಡಿಎಂಸಿ ಅವರು ಕಟ್ಟಡ ದುರಸ್ತಿಗೆ ನೀಡುತ್ತಿದ್ದ ಮನವಿ ಪರಿಶೀಲಿಸಿ ತ್ವರಿತವಾಗಿ ದುರಸ್ತಿ ಕೆಲಸಗಳು ನಡೆಯುತ್ತಿದ್ದವು. ಈಗ ಜಿಲ್ಲಾ ಪಂಚಾಯಿತಿ ಮೂಲಕವೇ ಎಲ್ಲವೂ ನಿರ್ಧಾರವಾಗಬೇಕಿದೆ. ಕ್ರಿಯಾಯೋಜನೆ ಸಹ ಅವರ ಮೂಲಕವೇ ತಯಾರಾಗಬೇಕಿದೆ. ಇದರಿಂದಾಗಿ ವಿಳಂಬವಾಗುತ್ತಿದೆ. ಸದ್ಯ ತಾಲ್ಲೂಕಿನ ಶಾಲಾ ಕಟ್ಟಡಗಳ ಸ್ಥಿತಿ ಕುರಿತು ಶಿಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಹಂತ ಹಂತವಾಗಿ ಕ್ರಿಯಾಯೋಜನೆ ತಯಾರಿಸಿ ಕಳಿಸುತ್ತಾರೆ. ಅದಕ್ಕೆ ಅನುಮೋದನೆ ಸಿಕ್ಕರಷ್ಟೇ ದುರಸ್ತಿ ಭಾಗ್ಯ. ಇಲ್ಲದಿದ್ದರೆ ಮುಂದಿನ ವರ್ಷ ಮತ್ತೆ ಶಾಲೆಯನ್ನು ಕ್ರಿಯಾಯೋಜನೆಯಲ್ಲಿ ಸೇರಿಸಬೇಕು’ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕನಕಪುರ ತಾಲ್ಲೂಕು ಅಧ್ಯಕ್ಷ ಪ್ರಭಾಕರ ಎನ್.ಆರ್ ‘ಪ್ರಜಾವಾಣಿ’ಗೆ ತಿಳಿಸಿದರು.