<p><strong>ಮಾಗಡಿ:</strong> ತಾಲ್ಲೂಕಿನ ಸೋಲೂರು ಹೋಬಳಿ ಪೆಮ್ಮನಹಳ್ಳಿಯಲ್ಲಿ ಗುರುವಾರ ಹೊಸ ರಾಗಿ ತಳಿ ಎಂ.ಎಲ್. 322ರ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.</p>.<p>ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಡಾ. ದಿನೇಶ, ಎಂ.ಎಸ್. ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕ ರೈತರು ದೀರ್ಘಾವಧಿ ತಳಿಗಳಾದ ಎಂ.ಆರ್.-1 ಮತ್ತು ಎಂ.ಆರ್. 6 ಬೆಳೆಯುತ್ತಿದ್ದಾರೆ. ಜುಲೈ ತಿಂಗಳಿನಲ್ಲಿ ಮಳೆ ಸರಿಯಾದ ಪ್ರಮಾಣದಲ್ಲಿ ಬೀಳದೆ ಬಿತ್ತನೆ ತಡವಾದಾಗ ಈ ತಳಿಗಳ ಬಿತ್ತನೆ ಕಷ್ಟವಾಗಿತ್ತು. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ಸುಧಾರಿತ ಮಧ್ಯಮಾವಧಿ ತಳಿ ಎಂ.ಎಲ್.-322 ಅನ್ನು ಜಿಲ್ಲೆಯ ರೈತರಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದೆ. ಈ ವರ್ಷ ಮಳೆ ಕಡಿಮೆಯಾದರೂ ಸಹ ಎರಡು ಸಂರಕ್ಷಣಾ ನೀರಾವರಿ ನೀಡಿ ಪೆಮ್ಮನಹಳ್ಳಿ ರೈತ ಗಂಗಹನುಮಯ್ಯ ಉತ್ತಮವಾಗಿ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ ಎಂದರು.</p>.<p>ಪ್ರಾತ್ಯಕ್ಷಿಕೆಯಲ್ಲಿ 15 ರೈತರಿಗೆ ತಡವಾದ ಮುಂಗಾರಿಗೆ ಸೂಕ್ತವಾಗುವಂತೆ ಈ ತಳಿ ಪರಿಚಯಿಸಿದ್ದು, ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಾರಿಯ ಕೃಷಿಮೇಳದಲ್ಲಿ ಹೊಸ ತಳಿಯನ್ನು ಲೋಕಾರ್ಪಣೆ ಮಾಡಿದ್ದು, ರೈತರು ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥೆ ಡಾ. ಲತಾ ಆರ್. ಕುಲಕರ್ಣಿ ಅವರು ರಾಗಿಯಲ್ಲಿರುವ ಪೋಷಕಾಂಶಗಳು ಮತ್ತು ರಾಗಿ ಸೇವನೆಯ ಮಹತ್ವದ ಬಗ್ಗೆ ವಿವರಿಸಿದರು. </p>.<p>ಪೆಮ್ಮನಹಳ್ಳಿ, ಹಕ್ಕಿನಾಳು, ನಾಗನಹಳ್ಳಿಯ 40ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ತಾಲ್ಲೂಕಿನ ಸೋಲೂರು ಹೋಬಳಿ ಪೆಮ್ಮನಹಳ್ಳಿಯಲ್ಲಿ ಗುರುವಾರ ಹೊಸ ರಾಗಿ ತಳಿ ಎಂ.ಎಲ್. 322ರ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.</p>.<p>ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಡಾ. ದಿನೇಶ, ಎಂ.ಎಸ್. ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕ ರೈತರು ದೀರ್ಘಾವಧಿ ತಳಿಗಳಾದ ಎಂ.ಆರ್.-1 ಮತ್ತು ಎಂ.ಆರ್. 6 ಬೆಳೆಯುತ್ತಿದ್ದಾರೆ. ಜುಲೈ ತಿಂಗಳಿನಲ್ಲಿ ಮಳೆ ಸರಿಯಾದ ಪ್ರಮಾಣದಲ್ಲಿ ಬೀಳದೆ ಬಿತ್ತನೆ ತಡವಾದಾಗ ಈ ತಳಿಗಳ ಬಿತ್ತನೆ ಕಷ್ಟವಾಗಿತ್ತು. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ಸುಧಾರಿತ ಮಧ್ಯಮಾವಧಿ ತಳಿ ಎಂ.ಎಲ್.-322 ಅನ್ನು ಜಿಲ್ಲೆಯ ರೈತರಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದೆ. ಈ ವರ್ಷ ಮಳೆ ಕಡಿಮೆಯಾದರೂ ಸಹ ಎರಡು ಸಂರಕ್ಷಣಾ ನೀರಾವರಿ ನೀಡಿ ಪೆಮ್ಮನಹಳ್ಳಿ ರೈತ ಗಂಗಹನುಮಯ್ಯ ಉತ್ತಮವಾಗಿ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ ಎಂದರು.</p>.<p>ಪ್ರಾತ್ಯಕ್ಷಿಕೆಯಲ್ಲಿ 15 ರೈತರಿಗೆ ತಡವಾದ ಮುಂಗಾರಿಗೆ ಸೂಕ್ತವಾಗುವಂತೆ ಈ ತಳಿ ಪರಿಚಯಿಸಿದ್ದು, ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಾರಿಯ ಕೃಷಿಮೇಳದಲ್ಲಿ ಹೊಸ ತಳಿಯನ್ನು ಲೋಕಾರ್ಪಣೆ ಮಾಡಿದ್ದು, ರೈತರು ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥೆ ಡಾ. ಲತಾ ಆರ್. ಕುಲಕರ್ಣಿ ಅವರು ರಾಗಿಯಲ್ಲಿರುವ ಪೋಷಕಾಂಶಗಳು ಮತ್ತು ರಾಗಿ ಸೇವನೆಯ ಮಹತ್ವದ ಬಗ್ಗೆ ವಿವರಿಸಿದರು. </p>.<p>ಪೆಮ್ಮನಹಳ್ಳಿ, ಹಕ್ಕಿನಾಳು, ನಾಗನಹಳ್ಳಿಯ 40ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>