ವ್ಯಾಪಾರಸ್ಥರಿಲ್ಲದೆ ಖಾಲಿಯಿರುವ ಮಾರುಕಟ್ಟೆ
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವಿನ ವ್ಯಾಪಾರಸ್ಥರು
ರಸ್ತೆ ಬದಿಯಲ್ಲಿ ಸೊಪ್ಪು ಮಾರಾಟ
ಈಗ ನಿರ್ಮಾಣವಾಗಿರುವ ಮಾರುಕಟ್ಟೆ ಜಾಗ ಚಿಕ್ಕದಾಗಿದ್ದು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ವ್ಯಾಪಾರಸ್ಥರು ಮಾರುಕಟ್ಟೆಗೆ ಬರಲು ಒಪ್ಪದೆ ಬೀದಿಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.
–ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿಮಾರುಕಟ್ಟೆಯಿಂದ ಪ್ರಯೋಜನವಿಲ್ಲ ಮಾಜಿ ಶಾಸಕ ಎ.ಮಂಜುನಾಥ ಅವರ ಅವಧಿಯಲ್ಲಿ ಯಾವುದೇ ಯೋಜನೆ ಇಲ್ಲದೆ ಮಾರುಕಟ್ಟೆ ನಿರ್ಮಾಣ ಮಾಡಿದ ಪರಿಣಾಮ ಅನುಕೂಲಕ್ಕೆ ಬಾರದಂತಾಗಿದೆ. ಪುರಸಭೆ ಐಡಿಎಸ್ಎಂಟಿ ಬಡಾವಣೆ ಹರಾಜಿನಲ್ಲಿ ಬರುವ ಹಣ ಹಾಗೂ ಸರ್ಕಾರದ ಶೇ 50 ರಷ್ಟು ಅನುದಾನ ಬಳಸಿಕೊಂಡು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಗುರಿ ಇದೆ.
–ಎಚ್.ಸಿ.ಬಾಲಕೃಷ್ಣ, ಶಾಸಕ ಕನಕಪುರ ಮಾರುಕಟ್ಟೆ ಮಾದರಿಯಲ್ಲಿ ನಿರ್ಮಾಣ ಮಾಜಿ ಸಂಸದ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲೇ ಕನಕಪುರದ ಮಾರುಕಟ್ಟೆ ಮಾದರಿಯಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಗಡಿ ಯೋಜನಾ ಪ್ರಾಧಿಕಾರ ಮಾರುಕಟ್ಟೆ ನಿರ್ಮಾಣ ಮಾಡಿದೆ. ಆದರೆ ಈ ವಿಚಾರವನ್ನು ರಾಜಕೀಯಕ್ಕೆ ತಿರುಚಿ ವ್ಯಾಪಾರಸ್ಥರು ಇಲ್ಲಿಗೆ ಬರದಂತೆ ತಡೆದಿದ್ದಾರೆ.
–ಎ.ಮಂಜುನಾಥ್, ಮಾಜಿ ಶಾಸಕ