<p><strong>ರಾಮನಗರ</strong>: ಪ್ರಸಿದ್ಧ ಚಾಮುಂಡೇಶ್ವರಿ ದೇವಿಯ ಐತಿಹಾಸಿಕ ಕರಗ ಮಹೋತ್ಸವಕ್ಕೆ ನಗರ ಮಂಗಳವಾರ ಸಾಕ್ಷಿಯಾಗಲಿದೆ. ಜೊತೆಗೆ ನಗರದ ಇತರ 11 ಶಕ್ತಿ ದೇವತೆಗಳ ಕರಗವು ಇದೇ ನಡೆಯಲಿದೆ. ಕರಗ ಮಹೋತ್ಸವದ ಜೊತೆಗೆ ಚಾಮುಂಡಿ ಉತ್ಸವದ ಹೆಸರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಂದಾಗಿ ನಗರಕ್ಕೆ ಜಾತ್ರೆ ಮೆರಗು ಬಂದಿದೆ. ನಗರವು ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.</p>.<p>ಕರಗ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಯ ದೇವಾಲಯ ಸೇರಿದಂತೆ ಎಲ್ಲಾ ಶಕ್ತಿದೇವತೆಗಳು ಹಾಗೂ ಬೀದಿಗಳನ್ನು ಸಿಂಗರಿಸಲಾಗಿದೆ. ಚಾಮುಂಡೇಶ್ವರಿ ದೇವಿಯ ಕರಗಧಾರಕ ದೇವಿಪ್ರಸಾದ್ ಅವರು ಸೋಮವಾರ ಅಗ್ನಿಕೊಂಡಕ್ಕೆ ಚಾಲನೆ ನೀಡಿದರು. ಮಂಗಳವಾರ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ ಮಾಡಿ, ಮಡಿನೀರು ಕರಗ ನೆರವೇರಿಸಲಾಗುತ್ತದೆ.</p>.<p>ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿದ್ದು, ಬಳಿಕ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ರಾತ್ರಿ ದೇವಿಯ ಹೂವಿನ ಕರಗ ನಗರದಾದ್ಯಂತ ಸಂಚರಿಸಿ, ಭಕ್ತರಿಂದ ಪೂಜೆ ಸ್ವೀಕರಿಸಲಿದೆ. ಮಾರನೇಯ ದಿನ ಬೆಳಿಗ್ಗೆ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಕೊಂಡ ಹಾಯುವುದರೊಂದಿಗೆ ಕರಗವು ಮುಗಿಯಲಿದೆ. ಕಳೆದ ಮಂಗಳವಾರ ನಡೆದಿದ್ದ ಹಸಿ ಕರಗಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.</p>.<p>ಚಾಮುಂಡೇಶ್ವರಿ ಕರಗದ ಜೊತೆಗೆ ದ್ಯಾವರಸೇಗೌಡನದೊಡ್ಡಿಯ ಚಾಮುಂಡೇಶ್ವರಿ ದೇವತೆ, ಕೊಂಕಾಣಿದೊಡ್ಡಿಯ ಆದಿಶಕ್ತಿ, ಗಾಂಧಿನಗರ ಆದಿಶಕ್ತಿ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ತೋಪಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಭಂಡಾರಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ಕರಗ ಸಹ ಅದ್ಧೂರಿಯಾಗಿ ಜರುಗಲಿದೆ.</p>.<p>ಕರಗವನ್ನು ನಗರದ ಹಬ್ಬವಾಗಿ ಆಚರಿಸುವುದರಿಂದ, ಮಂಗಳವಾರ ಮತ್ತು ಬುಧವಾರ ಬಾಡೂಟದ ಖಾದ್ಯಗಳು ಜೋರಾಗಿರಲಿದೆ. ಜನರು ತಮ್ಮ ಬಂಧು–ಬಳಗದವರನ್ನು ಔತಣಕ್ಕೆ ಆಹ್ವಾನಿಸಿ, ಬಾಡೂಟ ಸವಿಯುತ್ತಾರೆ. ಕರಗ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರದಿಂದ ಬುಧವಾರ ರಾತ್ರಿ 12ರವರೆಗೆ ಮದ್ಯ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.</p>.<p>ಚಾಮುಂಡಿ ಉತ್ಸವದ ಅಂಗವಾಗಿ ಜೂನಿಯರ್ ಕಾಲೇಜು ಮೈದಾನಕ್ಕೆ ವಿವಿಧ ರೀತಿಯ ಮನರಂಜನಾ ಚಟುವಟಿಕೆಗಳು ಬಂದಿವೆ. ಎಸ್ಪಿ ಕಚೇರಿ ವೃತ್ತದಿಂದ ಆರಂಭಗೊಂಡು ರೈಲು ನಿಲ್ದಾಣದವರೆಗೆ ಬಗೆಬಗೆಯ ಅಂಗಡಿಗಳನ್ನು ಹಾಕಲಾಗಿದೆ. ಕರಗಕ್ಕೆ ಬರಲಿರುವ ತಮ್ಮ ನಾಯಕರಿಗೆ ಬೆಂಬಲಿಗರು ಸ್ವಾಗತ ಕೋರಿ ರಸ್ತೆಯುದ್ದಕ್ಕೂ ಹಾಕಿರುವ ಕಟೌಟ್ಗಳು ಗಮನ ಸೆಳೆಯುತ್ತಿವೆ.</p>.<p>ರಸಮಂಜರಿಯ ರಸದೌತಣ</p><p>ಚಾಮುಂಡಿ ಉತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದ್ದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಸಿನಿಮಾ ನಟರಾದ ಡಾಲಿ ಧಂಜಯ್ ದುನಿಯಾ ವಿಜಯ್ ನೆನಪಿರಲಿ ಪ್ರೇಮ್ ಧ್ರುವ ಸರ್ಜಾ ಪಾಲ್ಗೊಳ್ಳಲಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ ರಸಮಂಜರಿ ಕಾರ್ಯಕ್ರಮ ನೆರವೇರಿಸಿ ಕೊಡಲಿದೆ. ಸಿಎಂ ಡಿಸಿಎಂ ಭಾಗಿ ಚಾಮುಂಡಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ ಜಮೀರ್ ಅಹ್ಮದ್ ಖಾನ್ ಕೃಷ್ಣ ಬೈರೇಗೌಡ ಚಲುವರಾಯ ಸ್ವಾಮಿ ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಸ್ಥಳೀಯ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ವಿಧಾನ ಪರಿಷತ್ ಸದಸ್ಯರು ಭಾಗವಹಿಲಿಸದ್ದಾರೆ. ಉತ್ಸವದ ಉದ್ಘಾಟನೆಗೆ ಬರುವಂತೆ ಮುಖ್ಯಮಂತ್ರಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಸೋಮವಾರ ಬೆಂಗಳೂರಿನಲ್ಲಿ ಆಹ್ವಾನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಪ್ರಸಿದ್ಧ ಚಾಮುಂಡೇಶ್ವರಿ ದೇವಿಯ ಐತಿಹಾಸಿಕ ಕರಗ ಮಹೋತ್ಸವಕ್ಕೆ ನಗರ ಮಂಗಳವಾರ ಸಾಕ್ಷಿಯಾಗಲಿದೆ. ಜೊತೆಗೆ ನಗರದ ಇತರ 11 ಶಕ್ತಿ ದೇವತೆಗಳ ಕರಗವು ಇದೇ ನಡೆಯಲಿದೆ. ಕರಗ ಮಹೋತ್ಸವದ ಜೊತೆಗೆ ಚಾಮುಂಡಿ ಉತ್ಸವದ ಹೆಸರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಂದಾಗಿ ನಗರಕ್ಕೆ ಜಾತ್ರೆ ಮೆರಗು ಬಂದಿದೆ. ನಗರವು ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.</p>.<p>ಕರಗ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಯ ದೇವಾಲಯ ಸೇರಿದಂತೆ ಎಲ್ಲಾ ಶಕ್ತಿದೇವತೆಗಳು ಹಾಗೂ ಬೀದಿಗಳನ್ನು ಸಿಂಗರಿಸಲಾಗಿದೆ. ಚಾಮುಂಡೇಶ್ವರಿ ದೇವಿಯ ಕರಗಧಾರಕ ದೇವಿಪ್ರಸಾದ್ ಅವರು ಸೋಮವಾರ ಅಗ್ನಿಕೊಂಡಕ್ಕೆ ಚಾಲನೆ ನೀಡಿದರು. ಮಂಗಳವಾರ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ ಮಾಡಿ, ಮಡಿನೀರು ಕರಗ ನೆರವೇರಿಸಲಾಗುತ್ತದೆ.</p>.<p>ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿದ್ದು, ಬಳಿಕ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ರಾತ್ರಿ ದೇವಿಯ ಹೂವಿನ ಕರಗ ನಗರದಾದ್ಯಂತ ಸಂಚರಿಸಿ, ಭಕ್ತರಿಂದ ಪೂಜೆ ಸ್ವೀಕರಿಸಲಿದೆ. ಮಾರನೇಯ ದಿನ ಬೆಳಿಗ್ಗೆ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಕೊಂಡ ಹಾಯುವುದರೊಂದಿಗೆ ಕರಗವು ಮುಗಿಯಲಿದೆ. ಕಳೆದ ಮಂಗಳವಾರ ನಡೆದಿದ್ದ ಹಸಿ ಕರಗಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.</p>.<p>ಚಾಮುಂಡೇಶ್ವರಿ ಕರಗದ ಜೊತೆಗೆ ದ್ಯಾವರಸೇಗೌಡನದೊಡ್ಡಿಯ ಚಾಮುಂಡೇಶ್ವರಿ ದೇವತೆ, ಕೊಂಕಾಣಿದೊಡ್ಡಿಯ ಆದಿಶಕ್ತಿ, ಗಾಂಧಿನಗರ ಆದಿಶಕ್ತಿ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ತೋಪಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಭಂಡಾರಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ಕರಗ ಸಹ ಅದ್ಧೂರಿಯಾಗಿ ಜರುಗಲಿದೆ.</p>.<p>ಕರಗವನ್ನು ನಗರದ ಹಬ್ಬವಾಗಿ ಆಚರಿಸುವುದರಿಂದ, ಮಂಗಳವಾರ ಮತ್ತು ಬುಧವಾರ ಬಾಡೂಟದ ಖಾದ್ಯಗಳು ಜೋರಾಗಿರಲಿದೆ. ಜನರು ತಮ್ಮ ಬಂಧು–ಬಳಗದವರನ್ನು ಔತಣಕ್ಕೆ ಆಹ್ವಾನಿಸಿ, ಬಾಡೂಟ ಸವಿಯುತ್ತಾರೆ. ಕರಗ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರದಿಂದ ಬುಧವಾರ ರಾತ್ರಿ 12ರವರೆಗೆ ಮದ್ಯ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.</p>.<p>ಚಾಮುಂಡಿ ಉತ್ಸವದ ಅಂಗವಾಗಿ ಜೂನಿಯರ್ ಕಾಲೇಜು ಮೈದಾನಕ್ಕೆ ವಿವಿಧ ರೀತಿಯ ಮನರಂಜನಾ ಚಟುವಟಿಕೆಗಳು ಬಂದಿವೆ. ಎಸ್ಪಿ ಕಚೇರಿ ವೃತ್ತದಿಂದ ಆರಂಭಗೊಂಡು ರೈಲು ನಿಲ್ದಾಣದವರೆಗೆ ಬಗೆಬಗೆಯ ಅಂಗಡಿಗಳನ್ನು ಹಾಕಲಾಗಿದೆ. ಕರಗಕ್ಕೆ ಬರಲಿರುವ ತಮ್ಮ ನಾಯಕರಿಗೆ ಬೆಂಬಲಿಗರು ಸ್ವಾಗತ ಕೋರಿ ರಸ್ತೆಯುದ್ದಕ್ಕೂ ಹಾಕಿರುವ ಕಟೌಟ್ಗಳು ಗಮನ ಸೆಳೆಯುತ್ತಿವೆ.</p>.<p>ರಸಮಂಜರಿಯ ರಸದೌತಣ</p><p>ಚಾಮುಂಡಿ ಉತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದ್ದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಸಿನಿಮಾ ನಟರಾದ ಡಾಲಿ ಧಂಜಯ್ ದುನಿಯಾ ವಿಜಯ್ ನೆನಪಿರಲಿ ಪ್ರೇಮ್ ಧ್ರುವ ಸರ್ಜಾ ಪಾಲ್ಗೊಳ್ಳಲಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ ರಸಮಂಜರಿ ಕಾರ್ಯಕ್ರಮ ನೆರವೇರಿಸಿ ಕೊಡಲಿದೆ. ಸಿಎಂ ಡಿಸಿಎಂ ಭಾಗಿ ಚಾಮುಂಡಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ ಜಮೀರ್ ಅಹ್ಮದ್ ಖಾನ್ ಕೃಷ್ಣ ಬೈರೇಗೌಡ ಚಲುವರಾಯ ಸ್ವಾಮಿ ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಸ್ಥಳೀಯ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ವಿಧಾನ ಪರಿಷತ್ ಸದಸ್ಯರು ಭಾಗವಹಿಲಿಸದ್ದಾರೆ. ಉತ್ಸವದ ಉದ್ಘಾಟನೆಗೆ ಬರುವಂತೆ ಮುಖ್ಯಮಂತ್ರಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಸೋಮವಾರ ಬೆಂಗಳೂರಿನಲ್ಲಿ ಆಹ್ವಾನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>