<p>ಹಾರೋಹಳ್ಳಿ: ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ 11 ಜೆಡಿಎಸ್ ಬೆಂಬಲಿತ ನಿರ್ದೇಶಕರು ಜಯಗಳಿಸುವ ಮೂಲಕ ಮೇಲುಗೈ ಸಾಧಿಸಿದರು.</p>.<p>ಸಂಘದ ಆವರಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಸ್ಥಾನಗಳಲ್ಲಿ ಜೆಡಿಎಸ್ 11 ಸ್ಥಾನ ಗೆಲ್ಲುವ ಮೂಲಕ ಪಾರಮ್ಯ ಮೆರೆದಿದೆ. ತೀವ್ರ ಹಣಾಹಣಿಯಿಂದ ಕೂಡಿದ ಚುನಾವಣೆಯಲ್ಲಿ ಒಟ್ಟು 143 ಮತದಾರರು ಮತ ಚಲಾವಣೆ ಮಾಡಿದರು.</p>.<p>ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಮಂಜುನಾಥ್ ಕೆಲಸ ನಿರ್ವಹಿಸಿದರು. ಸಹಾಯಕರಾಗಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಕರ್ತವ್ಯ ನಿರ್ವಹಿಸಿದರು.</p>.<p>ಜೆಡಿಎಸ್ ಬೆಂಬಲಿತರಾದ ಬಸವರಾಜು ಎಂ, ಚೈತ್ರಾ, ಎಚ್.ಕೆ ರಾಮಯ್ಯ, ಮಹಾಲಿಂಗಯ್ಯ, ಮೋಟಯ್ಯ, ಹನುಮಮ್ಮ, ಎಚ್.ಆರ್.ಅಶೋಕ್ ರಾಜೇ ಅರಸ್, ಪುಟ್ಟಸ್ವಾಮಿ ಸುಜಾತ, ಕೆಂಚಮ್ಮ ಕಾಂಗ್ರೆಸ್ ಬೆಂಬಲಿತರಾದ ಹರೀಶ್ ಕುಮಾರ್.ಎಚ್.ಎಸ್ ಗೆಲುವಿನ ನಗೆ ಬೀರಿದರು.</p>.<p>ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್ ರಾಮು ಮಾತನಾಡಿ, ಮುಂದಿನ ದಿನಗಳಲ್ಲಿ ನಂಬಿಕೆಗೆ ತಕ್ಕ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ನೂತನ ನಿರ್ದೇಶಕ ಎಂ.ಬಸವರಾಜು ಮಾತನಾಡಿ, ಹಾಲು ಉತ್ಪಾದಕರು ಒಳ್ಳೆಯ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಹಾಲು ಉತ್ಪಾದಕರಿಗೆ ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.</p>.<p>ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎನ್ ಲಕ್ಷ್ಮಣ್, ಹಾರೋಹಳ್ಳಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್, ಬಿಜೆಪಿ ಯುವ ಮುಖಂಡ ಲಕ್ಷ್ಮಿಕಾಂತ, ಮುಖಂಡರಾದ ವಿನೋದ, ಶಿವಣ್ಣ ಎಸ್.ಸಿ, ಮಹದೇವ್ ಕುಮಾರ್ ಎಚ್.ಎಸ್ ಮಹಾದೇವ, ಅರುಣರಾಜೇ ಅರಸ್, ಶ್ರೀನಿವಾಸ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾರೋಹಳ್ಳಿ: ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ 11 ಜೆಡಿಎಸ್ ಬೆಂಬಲಿತ ನಿರ್ದೇಶಕರು ಜಯಗಳಿಸುವ ಮೂಲಕ ಮೇಲುಗೈ ಸಾಧಿಸಿದರು.</p>.<p>ಸಂಘದ ಆವರಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಸ್ಥಾನಗಳಲ್ಲಿ ಜೆಡಿಎಸ್ 11 ಸ್ಥಾನ ಗೆಲ್ಲುವ ಮೂಲಕ ಪಾರಮ್ಯ ಮೆರೆದಿದೆ. ತೀವ್ರ ಹಣಾಹಣಿಯಿಂದ ಕೂಡಿದ ಚುನಾವಣೆಯಲ್ಲಿ ಒಟ್ಟು 143 ಮತದಾರರು ಮತ ಚಲಾವಣೆ ಮಾಡಿದರು.</p>.<p>ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಮಂಜುನಾಥ್ ಕೆಲಸ ನಿರ್ವಹಿಸಿದರು. ಸಹಾಯಕರಾಗಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಕರ್ತವ್ಯ ನಿರ್ವಹಿಸಿದರು.</p>.<p>ಜೆಡಿಎಸ್ ಬೆಂಬಲಿತರಾದ ಬಸವರಾಜು ಎಂ, ಚೈತ್ರಾ, ಎಚ್.ಕೆ ರಾಮಯ್ಯ, ಮಹಾಲಿಂಗಯ್ಯ, ಮೋಟಯ್ಯ, ಹನುಮಮ್ಮ, ಎಚ್.ಆರ್.ಅಶೋಕ್ ರಾಜೇ ಅರಸ್, ಪುಟ್ಟಸ್ವಾಮಿ ಸುಜಾತ, ಕೆಂಚಮ್ಮ ಕಾಂಗ್ರೆಸ್ ಬೆಂಬಲಿತರಾದ ಹರೀಶ್ ಕುಮಾರ್.ಎಚ್.ಎಸ್ ಗೆಲುವಿನ ನಗೆ ಬೀರಿದರು.</p>.<p>ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್ ರಾಮು ಮಾತನಾಡಿ, ಮುಂದಿನ ದಿನಗಳಲ್ಲಿ ನಂಬಿಕೆಗೆ ತಕ್ಕ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ನೂತನ ನಿರ್ದೇಶಕ ಎಂ.ಬಸವರಾಜು ಮಾತನಾಡಿ, ಹಾಲು ಉತ್ಪಾದಕರು ಒಳ್ಳೆಯ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಹಾಲು ಉತ್ಪಾದಕರಿಗೆ ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.</p>.<p>ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎನ್ ಲಕ್ಷ್ಮಣ್, ಹಾರೋಹಳ್ಳಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್, ಬಿಜೆಪಿ ಯುವ ಮುಖಂಡ ಲಕ್ಷ್ಮಿಕಾಂತ, ಮುಖಂಡರಾದ ವಿನೋದ, ಶಿವಣ್ಣ ಎಸ್.ಸಿ, ಮಹದೇವ್ ಕುಮಾರ್ ಎಚ್.ಎಸ್ ಮಹಾದೇವ, ಅರುಣರಾಜೇ ಅರಸ್, ಶ್ರೀನಿವಾಸ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>