<p><strong>ಹಾರೋಹಳ್ಳಿ</strong>: ಹಾರೋಹಳ್ಳಿಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲಾಗುವುದು. 25 ವರ್ಷದಿಂದ ಇಲ್ಲಿ ಜನಪ್ರತಿನಿಧಿಯಾಗಿದ್ದವರು ಕೆಲಸ ಮಾಡಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದರು.</p>.<p>ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವೇ ದಿನಗಳಲ್ಲಿ ಹಾರೋಹಳ್ಳಿ ಪುರಸಭೆಯಾಗಿ ಘೋಷಣೆ ಮಾಡಲಾಗುವುದು ಎಂದರು.</p>.<p><strong>ಮೆಟ್ರೊ:</strong> ಹಾರೋಹಳ್ಳಿವರೆಗೂ ಮೆಟ್ರೊ ಡಿಪಿಆರ್ ತಯಾರಾಗಿದೆ. ಹಾರೋಹಳ್ಳಿ ಪಟ್ಟಣಕ್ಕೇ ಕಾವೇರಿ ನೀರು ನೀಡುವ ಆದೇಶ ಹೊರಡಿಸಲಾಗಿದೆ. ಜತೆಗೆ ತಾಲ್ಲೂಕಿನ 270 ಹಳ್ಳಿಗಳಿಗೆ ₹300 ಕೋಟಿ ಅನುದಾನ ನೀಡಿ ಕಾವೇರಿ ನೀರು ತರುವ ಕೆಲಸ ಮಾಡಲಾಗುವುದು ಎಂದರು.</p>.<p>ಹಾರೋಹಳ್ಳಿ– ಅನೇಕಲ್ ಮುಖ್ಯ ರಸ್ತೆ ಮಂಜೂರು ಮಾಡಿಸಲಾಗಿದೆ. ಹಾರೋಹಳ್ಳಿ 1ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ 207 ಆಸ್ತಿ ವಶಪಡಿಸಿಕೊಳ್ಳಲು ₹10ಕೋಟಿ ಹಣ ಮೀಸಲು ಇಡಲಾಗಿದೆ ಎಂದರು.</p>.<p>ಬಡವರಿಗೆ ನಿವೇಶನ: ಬಡವರಿಗೆ ನಿವೇಶನ ಕೊಡಲು 30 ಎಕರೆ ಗುರುತಿಸಲಾಗಿದೆ. 2 ತಿಂಗಳಲ್ಲಿ 1 ಸಾವಿರ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.</p>.<p>ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜನರ ಕಷ್ಟ–ಸುಖ ಸುಲಭವಾಗಿ ನೀಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಡವರಿಗೆ ಸೂರು, ವಿದ್ಯುತ್, ಉದ್ಯಾನ ಒದಗಿಸಲಾಗುವುದು ಎಂದರು.</p>.<p>ತಹಶೀಲ್ದಾರ್ ವಿಜಿಯಣ್ಣ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಟರಾಜ್, ಮಾಜಿ ಶಾಸಕ ರಾಜು, ವಿಶ್ವನಾಥ್, ಮೋಹನ್ ಹೊಳ್ಳ, ಸಬ್ದರು, ಹರೀಶ್ ಕುಮಾರ್, ಈಶ್ವರ್, ಕಿರಣಗೆರೆ ಜಗದೀಶ್, ಅಶೋಕ್ ರಮೇಶ್, ಶೇಖರ್, ಸುರೇಶ್, ಕೋಟೆ ಕುಮಾರ್, ರುದ್ರೇಶ್, ಶಿವರಾಜು ನವೀನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೋಹಳ್ಳಿ</strong>: ಹಾರೋಹಳ್ಳಿಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲಾಗುವುದು. 25 ವರ್ಷದಿಂದ ಇಲ್ಲಿ ಜನಪ್ರತಿನಿಧಿಯಾಗಿದ್ದವರು ಕೆಲಸ ಮಾಡಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದರು.</p>.<p>ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವೇ ದಿನಗಳಲ್ಲಿ ಹಾರೋಹಳ್ಳಿ ಪುರಸಭೆಯಾಗಿ ಘೋಷಣೆ ಮಾಡಲಾಗುವುದು ಎಂದರು.</p>.<p><strong>ಮೆಟ್ರೊ:</strong> ಹಾರೋಹಳ್ಳಿವರೆಗೂ ಮೆಟ್ರೊ ಡಿಪಿಆರ್ ತಯಾರಾಗಿದೆ. ಹಾರೋಹಳ್ಳಿ ಪಟ್ಟಣಕ್ಕೇ ಕಾವೇರಿ ನೀರು ನೀಡುವ ಆದೇಶ ಹೊರಡಿಸಲಾಗಿದೆ. ಜತೆಗೆ ತಾಲ್ಲೂಕಿನ 270 ಹಳ್ಳಿಗಳಿಗೆ ₹300 ಕೋಟಿ ಅನುದಾನ ನೀಡಿ ಕಾವೇರಿ ನೀರು ತರುವ ಕೆಲಸ ಮಾಡಲಾಗುವುದು ಎಂದರು.</p>.<p>ಹಾರೋಹಳ್ಳಿ– ಅನೇಕಲ್ ಮುಖ್ಯ ರಸ್ತೆ ಮಂಜೂರು ಮಾಡಿಸಲಾಗಿದೆ. ಹಾರೋಹಳ್ಳಿ 1ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ 207 ಆಸ್ತಿ ವಶಪಡಿಸಿಕೊಳ್ಳಲು ₹10ಕೋಟಿ ಹಣ ಮೀಸಲು ಇಡಲಾಗಿದೆ ಎಂದರು.</p>.<p>ಬಡವರಿಗೆ ನಿವೇಶನ: ಬಡವರಿಗೆ ನಿವೇಶನ ಕೊಡಲು 30 ಎಕರೆ ಗುರುತಿಸಲಾಗಿದೆ. 2 ತಿಂಗಳಲ್ಲಿ 1 ಸಾವಿರ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.</p>.<p>ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜನರ ಕಷ್ಟ–ಸುಖ ಸುಲಭವಾಗಿ ನೀಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಡವರಿಗೆ ಸೂರು, ವಿದ್ಯುತ್, ಉದ್ಯಾನ ಒದಗಿಸಲಾಗುವುದು ಎಂದರು.</p>.<p>ತಹಶೀಲ್ದಾರ್ ವಿಜಿಯಣ್ಣ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಟರಾಜ್, ಮಾಜಿ ಶಾಸಕ ರಾಜು, ವಿಶ್ವನಾಥ್, ಮೋಹನ್ ಹೊಳ್ಳ, ಸಬ್ದರು, ಹರೀಶ್ ಕುಮಾರ್, ಈಶ್ವರ್, ಕಿರಣಗೆರೆ ಜಗದೀಶ್, ಅಶೋಕ್ ರಮೇಶ್, ಶೇಖರ್, ಸುರೇಶ್, ಕೋಟೆ ಕುಮಾರ್, ರುದ್ರೇಶ್, ಶಿವರಾಜು ನವೀನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>