<p><strong>ಕನಕಪುರ:</strong> ಇ–ಪೇ ಯುಪಿಐ ಆ್ಯಪ್ ಗ್ರಾಹಕರ ಸಹಾಯವಾಣಿ ಹೆಸರಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿಗೆ ಆನ್ಲೈನ್ನಲ್ಲಿ ₹50 ಸಾವಿರ ವಂಚಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.</p>.<p>ತಾಲ್ಲೂಕಿನ ಕಸಬಾ ಹೋಬಳಿ ಆಡನಕುಪ್ಪೆ ಗ್ರಾಮದ ಆಕಾಶ್ ವಂಚನೆಗೊಳಗಾದವರು. ಇವರು ಆಡನಕುಪ್ಪೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆನ್ಲೈನ್ ವಾಹಿವಾಟಿಗಾಗಿ ಅಂಗಡಿಯಲ್ಲಿ ಇ–ಪೇ ಯುಪಿಐ ಆ್ಯಪ್ ಬಳಸುತ್ತಿದ್ದರು.</p> <p>ಆದರೆ ಇ–ಪೇ ಯುಪಿಐ ಆ್ಯಪ್ ಮೂಲಕ ಬರುತ್ತಿದ್ದ ಹಣ ತನ್ನ ಖಾತೆಗೆ ಜಮೆ ಆಗುತ್ತಿದೆಯೋ ಇಲ್ಲವೋ ಎಂಬ ಶಂಕೆ ಕಾಡುತ್ತಿತ್ತು. ವ್ಯಾಪಾರಕ್ಕೆ ಸಮಸ್ಯೆ ಆಗುತ್ತಿದ್ದು ಸರಿಪಡಿಸಿಕೊಳ್ಳಲು ಗೂಗಲ್ನಲ್ಲಿ ಹುಡುಕಾಡಿ ಇ– ಪೇ ಯುಪಿಐ ಗ್ರಾಹಕರ ಸಹಾಯವಾಣಿ ನಂಬರ್ ಪಡೆದುಕೊಂಡಿದ್ದರು.</p> <p>ಗೂಗಲ್ನಲ್ಲಿ ಸಿಕ್ಕ ನಕಲಿ ಇ-ಪೇ ಯುಪಿಐ ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಯುಪಿಐ ಆ್ಯಪ್ನಿಂದ ತನ್ನ ಖಾತೆಗೆ ಹಣ ಪಾವತಿಯಾಗುವ ಬಗ್ಗೆ ಮಾಹಿತಿ ತಿಳಿಯುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು.</p> <p>ಸಮಸ್ಯೆ ಬಗೆಹರಿಸುವುದಾಗಿ ಆಕಾಶ್ ಅವರನ್ನು ನಂಬಿಸಿದ ವಂಚಕರು ಎಟಿಎಂ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಸಂಖ್ಯೆ ಒಟಿಪಿ ಪಡೆದು ವಂಚಿಸಿದ್ದಾರೆ.</p> <p>ಬ್ಯಾಂಕ್ ಮಾಹಿತಿ, ಒಟಿಪಿ ಪಡೆಯುತ್ತಿದ್ದಂತೆ ಆಕಾಶ್ ಬ್ಯಾಂಕ್ ಖಾತೆಯಿಂದ ₹50 ಸಾವಿರ ಕಡಿತವಾದ ಮಾಹಿತಿ ಬಂದಿದೆ. ತಕ್ಷಣ ಗೂಗಲ್ ಮೂಲಕ ಪಡೆದ ಸಹಾಯವಾಣಿ ನಂಬರ್ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ.</p> <p>ತಕ್ಷಣ ಆಕಾಶ್ ಮೋಸಹೊಗಿರುವ ಬಗ್ಗೆ ಖಚಿತವಾಗಿ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಇ–ಪೇ ಯುಪಿಐ ಆ್ಯಪ್ ಗ್ರಾಹಕರ ಸಹಾಯವಾಣಿ ಹೆಸರಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿಗೆ ಆನ್ಲೈನ್ನಲ್ಲಿ ₹50 ಸಾವಿರ ವಂಚಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.</p>.<p>ತಾಲ್ಲೂಕಿನ ಕಸಬಾ ಹೋಬಳಿ ಆಡನಕುಪ್ಪೆ ಗ್ರಾಮದ ಆಕಾಶ್ ವಂಚನೆಗೊಳಗಾದವರು. ಇವರು ಆಡನಕುಪ್ಪೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆನ್ಲೈನ್ ವಾಹಿವಾಟಿಗಾಗಿ ಅಂಗಡಿಯಲ್ಲಿ ಇ–ಪೇ ಯುಪಿಐ ಆ್ಯಪ್ ಬಳಸುತ್ತಿದ್ದರು.</p> <p>ಆದರೆ ಇ–ಪೇ ಯುಪಿಐ ಆ್ಯಪ್ ಮೂಲಕ ಬರುತ್ತಿದ್ದ ಹಣ ತನ್ನ ಖಾತೆಗೆ ಜಮೆ ಆಗುತ್ತಿದೆಯೋ ಇಲ್ಲವೋ ಎಂಬ ಶಂಕೆ ಕಾಡುತ್ತಿತ್ತು. ವ್ಯಾಪಾರಕ್ಕೆ ಸಮಸ್ಯೆ ಆಗುತ್ತಿದ್ದು ಸರಿಪಡಿಸಿಕೊಳ್ಳಲು ಗೂಗಲ್ನಲ್ಲಿ ಹುಡುಕಾಡಿ ಇ– ಪೇ ಯುಪಿಐ ಗ್ರಾಹಕರ ಸಹಾಯವಾಣಿ ನಂಬರ್ ಪಡೆದುಕೊಂಡಿದ್ದರು.</p> <p>ಗೂಗಲ್ನಲ್ಲಿ ಸಿಕ್ಕ ನಕಲಿ ಇ-ಪೇ ಯುಪಿಐ ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಯುಪಿಐ ಆ್ಯಪ್ನಿಂದ ತನ್ನ ಖಾತೆಗೆ ಹಣ ಪಾವತಿಯಾಗುವ ಬಗ್ಗೆ ಮಾಹಿತಿ ತಿಳಿಯುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು.</p> <p>ಸಮಸ್ಯೆ ಬಗೆಹರಿಸುವುದಾಗಿ ಆಕಾಶ್ ಅವರನ್ನು ನಂಬಿಸಿದ ವಂಚಕರು ಎಟಿಎಂ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಸಂಖ್ಯೆ ಒಟಿಪಿ ಪಡೆದು ವಂಚಿಸಿದ್ದಾರೆ.</p> <p>ಬ್ಯಾಂಕ್ ಮಾಹಿತಿ, ಒಟಿಪಿ ಪಡೆಯುತ್ತಿದ್ದಂತೆ ಆಕಾಶ್ ಬ್ಯಾಂಕ್ ಖಾತೆಯಿಂದ ₹50 ಸಾವಿರ ಕಡಿತವಾದ ಮಾಹಿತಿ ಬಂದಿದೆ. ತಕ್ಷಣ ಗೂಗಲ್ ಮೂಲಕ ಪಡೆದ ಸಹಾಯವಾಣಿ ನಂಬರ್ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ.</p> <p>ತಕ್ಷಣ ಆಕಾಶ್ ಮೋಸಹೊಗಿರುವ ಬಗ್ಗೆ ಖಚಿತವಾಗಿ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>