ಕಳೆದ ವರ್ಷ ಶಾಸಕ ಕೆ.ಷಡಕ್ಷರಿ ಗಾಂಧೀಜಿ ತಂಗಿದ್ದ ಸ್ಥಳದ ಅಭಿವೃದ್ಧಿ ಪಡಿಸಲು ಯೋಜಿಸಿದ್ದರು. ಸ್ಮಾರಕ ಹಾಗೂ ಪ್ರತಿನಿತ್ಯ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಬೇಕು ಎಂಬ ಉದ್ದೇಶದಿಂದ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ದಾನಿಗಳ ಕೊಡುಗೆಯಿಂದಾಗಿ ಈ ಮನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಬರಮತಿ ಆಶ್ರಮದ ಮಾದರಿಯಲ್ಲಿ ಗಾಂಧೀಜಿ ಜೀವನ ಚರಿತ್ರೆ ಸಾರುವ ಚಿತ್ರಗಳ ಪ್ರದರ್ಶನ, ಗಾಂಧೀಜಿ ಅವರ ಖಾದಿ ಉತ್ಪಾದನೆಯ ಚರಕ, ಗಾಂಧೀಜಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಟ್ಟು ಗ್ರಂಥಾಲಯ ನಿರ್ಮಿಸಲಾಗಿದೆ.