ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್ಎಸ್ಎಲ್ಸಿ, ಪಿಯುಸಿ ಸಾಧಕರಾದ ಸುಜಯ್ ಪೇರಡ್ಕ, ಪೂಜಾ ರೆಂಜಾಳ, ಸುಚಿತ್ರಾ ಹೆರ್ಮುಂಡೆ, ಪ್ರಸಾದ್ ಮುದ್ರಾಡಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಪೇರಡ್ಕ ಕುಣಿತ ಭಜನೆ ನಡೆಸಿಕೊಟ್ಟರು. ಸಭೆಯಲ್ಲಿ ದರ್ಖಾಸು ಭೂಮಿ, ಮಹಿಳಾ ನಾಯಕತ್ವ ಕಾರ್ಯಾಗಾರ, ಕ್ರೀಡಾಕೂಟ, ಅಜೀವ ಸದಸ್ಯತ್ವ ಅಭಿಯಾನ, ಕಲಾ ತಂಡ ರಚನೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು.