ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ದೆಹಲಿಯ ಏಮ್ಸ್ನ ಡಾ.ಪೂನಂ ಮಲ್ಹೋತ್ರಾ, ಪಿಜಿಐ ಚಂಡೀಗಢದ ಡಾ.ಆರ್.ಆರ್.ಶರ್ಮಾ, ವೆರ್ಫೆನ್ ಇಂಡಿಯಾದ ಡಾ.ಅಜಯ್ ಗಾಂಧಿ, ಜ್ಯುಬಿಲಿ ಮಿಷನ್ ಕೇರಳದ ಡಾ.ಎಂ.ಎ.ರಫಿ, ಸಿಎಂಸಿ ವೆಲ್ಲೂರಿನ ಡಾ.ಡಾಲಿ ಡೇನಿಯಲ್, ಟಿಟಿಕೆ ರಕ್ತ ಕೇಂದ್ರದ ಡಾ.ಅಂಕಿತ್ ಮಾಥುರ್, ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ.ರಾಜೇಶ್ ಸಾವಂತ್ ಅವರನ್ನು ಸನ್ಮಾನಿಸಲಾಯಿತು. ವಿಚಾರ ಸಂಕಿರಣದ ಮುಖ್ಯ ವಿಷಯಗಳ ಕುರಿತು ವೈದ್ಯರು ಅನುಭವ ಹಂಚಿಕೊಂಡರು.