ಜುಲೈ16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿ, ಅಪಾರ ಪ್ರಮಾಣದ ಮಣ್ಣು, ಕಲ್ಲಿನ ರಾಶಿ ನದಿಗೆ ಬಿದ್ದು ಕೃತಕ ದಿಬ್ಬ ಸೃಷ್ಟಿಯಾಗಿದೆ. ಅದರಡಿ ಕೇರಳದ ಲಾರಿ ಸಿಲುಕಿದೆ. ಮಣ್ಣಿನ ದಿಬ್ಬ ತೆರವುಗೊಳಿಸುವ ಹೊಣೆ ಕಾರವಾರದ ಅಭಿಷೇನಿಯಾ ಓಶನ್ ಸರ್ವಿಸಸ್ ಎಂಬ ಕಂಪನಿಗೆ ವಹಿಸಿಕೊಂಡಿದ್ದು, ಅದೇ ಸಂಸ್ಥೆಯು ಗೋವಾದಿಂದ ಹೂಳೆತ್ತುವ ಬಾರ್ಜ್ ತರಿಸಿದೆ. ಸಂಪೂರ್ಣ ದಿಬ್ಬ ತೆರವುಗೊಳಿಸಲು ಕನಿಷ್ಠ 10 ದಿನ ಕಾರ್ಯಾಚರಣೆ ನಡೆಸಬೇಕಾಗಬಹುದು ಎಂದು ಕಂಪನಿಯು ಅಂದಾಜಿಸಿದೆ.