ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕರಾವಳಿ ಉತ್ಸವ’ಕ್ಕೆ ‘ಶಿರೂರು ದುರಂತ’ ಅಡ್ಡಿ?

2018ರಲ್ಲಿ ಆಚರಣೆಯಾಗಿದ್ದೇ ಕೊನೆ: ಪ್ರತಿಷ್ಠಿತ ಉತ್ಸವಕ್ಕೆ ಒಂದಲ್ಲ ಒಂದು ವಿಘ್ನ
Published : 24 ಅಕ್ಟೋಬರ್ 2024, 5:35 IST
Last Updated : 24 ಅಕ್ಟೋಬರ್ 2024, 5:35 IST
ಫಾಲೋ ಮಾಡಿ
Comments
ಹಿಂದಿನ ಸರ್ಕಾರದ ಅವಧಿಯಲ್ಲಿ ಒಮ್ಮೆಯೂ ಕರಾವಳಿ ಉತ್ಸವ ನಡೆದಿರಲಿಲ್ಲ. ಈ ಬಾರಿ ಡಿಸೆಂಬರ್ ಅಥವಾ ಜನವರಿಯಲ್ಲಿ ಉತ್ಸವ ಆಯೋಜಿಸಲು ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸಲಿದ್ದೇವೆ
ಸತೀಶ ಸೈಲ್ ಶಾಸಕ
ಅನುದಾನ ಹೊಂದಿಸುವ ಸವಾಲು
ಈವರೆಗೆ ನಡೆದ ಕರಾವಳಿ ಉತ್ಸವ ಬಹುತೇಕ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿಯೇ ನಡೆದಿದೆ. ಉತ್ಸವದ ಆಚರಣೆಗೆ ಮೂರು ತಿಂಗಳು ಹಿಂದಿನಿಂದಲೇ ಸಿದ್ಧತೆ ನಡೆಯುತ್ತಿತ್ತು. ಹಳಿಯಾಳ ಶಾಸಕರಾಗಿರುವ ಆರ್.ವಿ.ದೇಶಪಾಂಡೆ ಸಚಿವರಾಗಿದ್ದ ಅವಧಿಯಲ್ಲೆಲ್ಲ ಉತ್ಸವ ನಡೆದಿದೆ ಎಂಬುದನ್ನು ಹಲವರು ಸ್ಮರಿಸುತ್ತಾರೆ. ‘ಶಿರೂರು ದುರಂತದ ಛಾಯೆ ಇನ್ನೂ ಮಾಸಿಲ್ಲ. ಕರಾವಳಿ ಉತ್ಸವ ಸರ್ಕಾರದಿಂದ ಆಚರಣೆಯಾಗುವ ಅಧಿಕೃತ ಉತ್ಸವ ಅಂತೂ ಅಲ್ಲ. ಗ್ಯಾರಂಟಿ ಯೋಜನೆ ಕಾರಣದಿಂದ ಅಧಿಕೃತ ಅಲ್ಲದ ಉತ್ಸವಗಳಿಗೆ ಅನುದಾನ ಹೊಂದಾಣಿಕೆ ಸವಾಲಾಗಬಹುದು. ಇವೆಲ್ಲ ಕಾರಣದಿಂದ ಉತ್ಸವ ಆಚರಣೆಗೆ ಅಡ್ಡಿ ಆಗಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT