<p><strong>ಹೊನ್ನಾವರ:</strong> ‘ಜಾತಿಯ ಕಾರಣ ಮುಂದಿಟ್ಟು ಒಡೆದು ಆಳುವ ನೀತಿ ಅನುಸರಿಸುವ ಜೊತೆಗೆ ವೈಯಕ್ತಿಕ ತೇಜೋವಧೆಗೆ ಪ್ರಯತ್ನಿಸುತ್ತಿರುವ ರಾಜಕೀಯ ವಿರೋಧಿಗಳ ಕುತಂತ್ರಕ್ಕೆ ನೊಂದಿದ್ದೇನೆ‘ ಎಂದು ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಹೇಳಿದರು.</p>.<p>ಪಟ್ಟಣದ ದುರ್ಗಾಕೇರಿಯಿಂದ ಕಾಲೇಜು ಸರ್ಕಲ್ ವರೆಗೆ ನಡೆದ ಪಾದಯಾತ್ರೆಯಲ್ಲಿ ಪಕ್ಷದ ಹಲವಾರು ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ನಾನು ಪ್ರಾಚಾರ್ಯನಾಗಿದ್ದಾಗ ಹಾಗೂ ರಾಜಕೀಯ ಸಂಕಷ್ಟದಲ್ಲಿದ್ದಾಗ ನನಗೆ ಬೇರೆ ಜಾತಿಯ ಮುಖಂಡರು ಹಾಗೂ ಜನರೇ ಮನ್ನಣೆ ನೀಡಿದ್ದು, ನಾನು ಎಲ್ಲ ಜಾತಿ ಜನಾಂಗದೊಡನೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ವಿದ್ಯಾವಂತನಾಗಿದ್ದು, ಅತ್ಯಂತ ವಿನಯದೊಂದಿಗೆ ನಿಮ್ಮ ಮನೆ ಮಗನಂತೆ ಇರಲಿದ್ದೇನೆ‘ ಎಂದು ಹೇಳಿದರು.</p>.<p>‘ಜನರು ನೀರು ಕೇಳಿದರೆ ದರ್ಪ ತೋರುವ ಜಾಯಮಾನ ನನ್ನದಲ್ಲ. ಜನರ ಕಷ್ಟಗಳಿಗೆ ಧನಿಯಾಗುತ್ತೇನೆ. ಜನರಿಗೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದೇನೆ‘ ಎಂದರು.</p>.<p>ಜೆಡಿಎಸ್ ಹೊನ್ನಾವರ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಟಿ. ನಾಯ್ಕ ಮೂಡ್ಕಣಿ, ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜಿ. ಹೆಗಡೆ, ಮುಖಂಡರಾದ ಎಸ್.ಜಿ. ಹೆಗಡೆ, ನೀಲಕಂಠ ನಾಯ್ಕ, ವಕೀಲ ಉದಯ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ:</strong> ‘ಜಾತಿಯ ಕಾರಣ ಮುಂದಿಟ್ಟು ಒಡೆದು ಆಳುವ ನೀತಿ ಅನುಸರಿಸುವ ಜೊತೆಗೆ ವೈಯಕ್ತಿಕ ತೇಜೋವಧೆಗೆ ಪ್ರಯತ್ನಿಸುತ್ತಿರುವ ರಾಜಕೀಯ ವಿರೋಧಿಗಳ ಕುತಂತ್ರಕ್ಕೆ ನೊಂದಿದ್ದೇನೆ‘ ಎಂದು ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಹೇಳಿದರು.</p>.<p>ಪಟ್ಟಣದ ದುರ್ಗಾಕೇರಿಯಿಂದ ಕಾಲೇಜು ಸರ್ಕಲ್ ವರೆಗೆ ನಡೆದ ಪಾದಯಾತ್ರೆಯಲ್ಲಿ ಪಕ್ಷದ ಹಲವಾರು ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ನಾನು ಪ್ರಾಚಾರ್ಯನಾಗಿದ್ದಾಗ ಹಾಗೂ ರಾಜಕೀಯ ಸಂಕಷ್ಟದಲ್ಲಿದ್ದಾಗ ನನಗೆ ಬೇರೆ ಜಾತಿಯ ಮುಖಂಡರು ಹಾಗೂ ಜನರೇ ಮನ್ನಣೆ ನೀಡಿದ್ದು, ನಾನು ಎಲ್ಲ ಜಾತಿ ಜನಾಂಗದೊಡನೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ವಿದ್ಯಾವಂತನಾಗಿದ್ದು, ಅತ್ಯಂತ ವಿನಯದೊಂದಿಗೆ ನಿಮ್ಮ ಮನೆ ಮಗನಂತೆ ಇರಲಿದ್ದೇನೆ‘ ಎಂದು ಹೇಳಿದರು.</p>.<p>‘ಜನರು ನೀರು ಕೇಳಿದರೆ ದರ್ಪ ತೋರುವ ಜಾಯಮಾನ ನನ್ನದಲ್ಲ. ಜನರ ಕಷ್ಟಗಳಿಗೆ ಧನಿಯಾಗುತ್ತೇನೆ. ಜನರಿಗೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದೇನೆ‘ ಎಂದರು.</p>.<p>ಜೆಡಿಎಸ್ ಹೊನ್ನಾವರ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಟಿ. ನಾಯ್ಕ ಮೂಡ್ಕಣಿ, ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜಿ. ಹೆಗಡೆ, ಮುಖಂಡರಾದ ಎಸ್.ಜಿ. ಹೆಗಡೆ, ನೀಲಕಂಠ ನಾಯ್ಕ, ವಕೀಲ ಉದಯ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>