‘1960ರ ದಶಕದಲ್ಲಿ ಜಲ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಈಗ ಅದರ ಸಾಮರ್ಥ್ಯ ಕುಗ್ಗಿದ್ದು, ನೀರು ಸಮರ್ಪಕವಾಗಿ ಶುದ್ಧವಾಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಹೆಚ್ಚಿನ ಸಾಮರ್ಥ್ಯದ ಹೊಸ ಪಂಪ್ಗಳನ್ನು ಕೆಂಗ್ರೆ ಜಾಕ್ವೆಲ್ನಲ್ಲಿ ಅಳವಡಿಸಿದ್ದು, ನೀರು ಬರುವ ಒತ್ತಡ ಕೂಡ ಹೆಚ್ಚಿದೆ. ಇದರಿಂದ ಘಟಕದ ಧಾರಣ ಸಾಮರ್ಥ್ಯ ಕೂಡ ಹೆಚ್ಚುವ ಅಗತ್ಯವಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಶ್ರೀಕಾಂತ ತಾರಿಬಾಗಿಲು.