<p><strong>ವಿಜಯಪುರ</strong>: ‘ಸಿಂಪಿ ಲಿಂಗಣ್ಣ ಮತ್ತು ಮಧುರ ಚೆನ್ನರವರ ಕಾವ್ಯ ಸಂಸ್ಕೃತಿಯ ಮುಂದುವರಿಕೆಯಾಗಿರುವ ‘ರಾಗಂ’ ನಮ್ಮ ಜಿಲ್ಲೆಯ ಹೆಮ್ಮೆ ಹಾಗೂ ಭೀಮಾ ತೀರದ ಸಾಹಿತ್ಯ ಶಕ್ತಿಯಾಗಿದ್ದಾರೆ’ ಎಂದು ಡಿವೈಎಸ್ಪಿ ಬಸವರಾಜ್ ಎಲಿಗಾರ ಹೇಳಿದರು.</p>.<p>ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ‘ರಾಗಂ: ನೂರೊಂದು ರಾಗ’ ಅಭಿನಂದನಾ ಸಮಾರಂಭ ಮತ್ತು ‘ಗಾಂಧಿ ದ ಲಾಸ್ಟ್ ಡೇಸ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ರಕ್ತ ಸಿಕ್ತ ಭೀಮಾ ತೀರದಲ್ಲಿ ಜನ್ಮ ತಾಳಿದ ರಾಗಂ ಭೀಮಾತೀರವನ್ನು ಮತ್ತೊಮ್ಮೆ ಅಕ್ಷರದ ನಾಡನ್ನಾಗಿ ಮಾಡಲು ಹೊರಟಿದ್ದಾರೆ. ಎಲ್ಲ ಪ್ರಕಾರಗಳ ಸಾಹಿತ್ಯ ರಚಿಸಿದ್ದಾರೆ’ ಎಂದು ಕವಿ ವಾಸುದೇವ ನಾಡಿಗ ಹೇಳಿದರು.</p>.<p>ಡಾ.ಮಹಾಂತೇಶ ಬಿರಾದಾರ, ‘ಈ ತಲೆಮಾರಿನ ಅತ್ಯಂತ ಗಂಭೀರ, ಜವಾಬ್ದಾರಿಯುತ ಲೇಖಕ ರಾಗಂ, ಗಾಂಧಿ ಚಿಂತನೆಯನ್ನು ಮತ್ತೆ ಪ್ರಸ್ತುತಗೊಳಿಸುತ್ತಿದ್ದಾರೆ’ ಎಂದು ಹೇಳಿದರು.</p>.<p>‘ಗಾಂಧಿ ದಿ ಲಾಸ್ಟ್ ಡೇಜ್’ ಪುಸ್ತಕ ಕುರಿತು ಮಾತನಾಡಿದ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ‘ರಾಗಂ ಅವರ ಈ ಕೃತಿ ನಮ್ಮ ತಲೆಮಾರಿನಲ್ಲಿ ರಚನೆಯಾದ ಗಾಂಧೀಜಿಯ ಕೊನೆಯ ಸಂಕಷ್ಟದ ದಿನಗಳ ಕುರಿತ ಅಧಿಕೃತ ಏಕೈಕ ಗ್ರಂಥವಾಗಿದೆ’ ಎಂದು ತಿಳಿಸಿದರು.</p>.<p>ಜೋಗತಿ ನೃತ್ಯ, ಭರತನಾಟ್ಯ, ಜನಪದ ಹಾಡುಗಳು ಗಾಯನ ಪ್ರೇಕ್ಷಕರನ್ನು ರಂಜಿಸಿತು.</p>.<p>ವಿಜಯಪುರ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಶರಣು ಸಬರದ, ಡಾ. ಎಚ್.ಎಸ್. ಸತ್ಯನಾರಾಯಣ, ಸಾಹಿತಿಗಳಾದ ಡಾ. ಆರ್.ಕೆ. ಕುಲಕರ್ಣಿ, ಡಾ. ಮದಭಾವಿ, ಅಶೋಕ ಹಂಚಲಿ, ಚಿಂತಕ ಜಂಬುನಾಥ ಮಳಿಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ಸಿಂಪಿ ಲಿಂಗಣ್ಣ ಮತ್ತು ಮಧುರ ಚೆನ್ನರವರ ಕಾವ್ಯ ಸಂಸ್ಕೃತಿಯ ಮುಂದುವರಿಕೆಯಾಗಿರುವ ‘ರಾಗಂ’ ನಮ್ಮ ಜಿಲ್ಲೆಯ ಹೆಮ್ಮೆ ಹಾಗೂ ಭೀಮಾ ತೀರದ ಸಾಹಿತ್ಯ ಶಕ್ತಿಯಾಗಿದ್ದಾರೆ’ ಎಂದು ಡಿವೈಎಸ್ಪಿ ಬಸವರಾಜ್ ಎಲಿಗಾರ ಹೇಳಿದರು.</p>.<p>ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ‘ರಾಗಂ: ನೂರೊಂದು ರಾಗ’ ಅಭಿನಂದನಾ ಸಮಾರಂಭ ಮತ್ತು ‘ಗಾಂಧಿ ದ ಲಾಸ್ಟ್ ಡೇಸ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ರಕ್ತ ಸಿಕ್ತ ಭೀಮಾ ತೀರದಲ್ಲಿ ಜನ್ಮ ತಾಳಿದ ರಾಗಂ ಭೀಮಾತೀರವನ್ನು ಮತ್ತೊಮ್ಮೆ ಅಕ್ಷರದ ನಾಡನ್ನಾಗಿ ಮಾಡಲು ಹೊರಟಿದ್ದಾರೆ. ಎಲ್ಲ ಪ್ರಕಾರಗಳ ಸಾಹಿತ್ಯ ರಚಿಸಿದ್ದಾರೆ’ ಎಂದು ಕವಿ ವಾಸುದೇವ ನಾಡಿಗ ಹೇಳಿದರು.</p>.<p>ಡಾ.ಮಹಾಂತೇಶ ಬಿರಾದಾರ, ‘ಈ ತಲೆಮಾರಿನ ಅತ್ಯಂತ ಗಂಭೀರ, ಜವಾಬ್ದಾರಿಯುತ ಲೇಖಕ ರಾಗಂ, ಗಾಂಧಿ ಚಿಂತನೆಯನ್ನು ಮತ್ತೆ ಪ್ರಸ್ತುತಗೊಳಿಸುತ್ತಿದ್ದಾರೆ’ ಎಂದು ಹೇಳಿದರು.</p>.<p>‘ಗಾಂಧಿ ದಿ ಲಾಸ್ಟ್ ಡೇಜ್’ ಪುಸ್ತಕ ಕುರಿತು ಮಾತನಾಡಿದ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ‘ರಾಗಂ ಅವರ ಈ ಕೃತಿ ನಮ್ಮ ತಲೆಮಾರಿನಲ್ಲಿ ರಚನೆಯಾದ ಗಾಂಧೀಜಿಯ ಕೊನೆಯ ಸಂಕಷ್ಟದ ದಿನಗಳ ಕುರಿತ ಅಧಿಕೃತ ಏಕೈಕ ಗ್ರಂಥವಾಗಿದೆ’ ಎಂದು ತಿಳಿಸಿದರು.</p>.<p>ಜೋಗತಿ ನೃತ್ಯ, ಭರತನಾಟ್ಯ, ಜನಪದ ಹಾಡುಗಳು ಗಾಯನ ಪ್ರೇಕ್ಷಕರನ್ನು ರಂಜಿಸಿತು.</p>.<p>ವಿಜಯಪುರ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಶರಣು ಸಬರದ, ಡಾ. ಎಚ್.ಎಸ್. ಸತ್ಯನಾರಾಯಣ, ಸಾಹಿತಿಗಳಾದ ಡಾ. ಆರ್.ಕೆ. ಕುಲಕರ್ಣಿ, ಡಾ. ಮದಭಾವಿ, ಅಶೋಕ ಹಂಚಲಿ, ಚಿಂತಕ ಜಂಬುನಾಥ ಮಳಿಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>