<p><strong>ಇಂಡಿ:</strong> ಪುರಸಭೆ ಮತ್ತು ಶಿಕ್ಷಣ ಇಲಾಖೆಗಳ ನಡುವಿನ ಕಲಹದಿಂದಾಗಿ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಮತ್ತು ಪುರಸಭೆಯ ಸಮೀಪವೇ ಇರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ– 1 ನಿರ್ವಹಣೆ ಮತ್ತು ಅಭಿವೃದ್ದಿ ಇಲ್ಲದೇ ಪಾಳು ಬಿದ್ದಿದೆ.</p>.<p>ಇಂಡಿ ಪುರಸಭೆಯು ಶಾಲೆಯ ಕಟ್ಟಡವನ್ನು 1975 ರಲ್ಲಿ ಕಟ್ಟಿಸಿತ್ತು. ಆಗಿನ ಪುರಸಭೆಯ ಅಧ್ಯಕ್ಷ ಅಣ್ಣಪ್ಪ ದೇವರ ಅವರು ಶಿಕ್ಷಣ ಇಲಾಖೆಗೆ ಬಾಡಿಗೆಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಶಿಕ್ಷಣ ಇಲಾಖೆ ಪ್ರತಿ ವರ್ಷ ₹ 32 ಸಾವಿರ ಬಾಡಿಗೆ ಪಾವತಿ ಮಾಡುತ್ತಿದೆ. ಆದರೆ ಅಂದಿನಿಂದ ಇಂದಿನವರೆಗೆ ಪುರಸಭೆಯವರು ಈ ಕಟ್ಟಡದ ರಿಪೇರಿ ಮಾಡಿಲ್ಲ. ಈ ಬಗ್ಗೆ ಸಾರ್ವಜನಿಕರು ಕೇಳಿದರೆ ನಾವು ಕಟ್ಟಡ ಕಟ್ಟಿ ಶಿಕ್ಷಣ ಇಲಾಖೆಗೆ ನೀಡಿದ್ದೇವೆ. ಅದರ ನಿರ್ವಹಣೆಯ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು ಎಂದು ಪುರಸಭೆಯ ಅಧಿಕಾರಿಗಳು ಉತ್ತರಿಸುತ್ತಾರೆ. ಶಿಕ್ಷಣ ಇಲಾಖೆಗೆ ಕೇಳಿದರೆ ಈ ಶಾಲೆಯ ಕಟ್ಟಡ ನಮ್ಮದಲ್ಲ. ಇದು ಪುರಸಭೆಯವರದ್ದು, ನಾವು ಇದನ್ನು ಬಾಡಿಗೆಗೆ ಪಡೆದುಕೊಂಡಿದ್ದೇವೆ. ಪ್ರತಿ ವರ್ಷ ಬಾಡಿಗೆ ಕಟ್ಟುತ್ತೇವೆ. ಇದರ ನಿರ್ವಹಣೆಯನ್ನು ಪುರಸಭೆಯೇ ಮಾಡಬೇಕು ಎಂದು ಹೇಳುತ್ತಿದೆ. ಇವರಿಬ್ಬರ ನಡುವಿನ ಕಲಹದಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 270 ವಿದ್ಯಾರ್ಥಿಗಳಿಗೆ ಸೂಕ್ತ ಸೌಕರ್ಯ ದೊರೆಯದಂತಾಗಿದೆ.</p>.<p>ಈ ಶಾಲಾ ಕಟ್ಟಡದಲ್ಲಿ 16 ಕೊಠಡಿಗಳಿವೆ. ಇವುಗಳಲ್ಲಿ 12 ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಇವುಗಳಲ್ಲಿ ಕೆಲವು ಕೊಠಡಿಗಳ ಚಾವಣಿಯೇ ಬಿದ್ದಿದ್ದು, ಕೊಠಡಿಗಳ ಗೋಡೆಗಳು ಕೂಡ ಶಿಥಿಲಾವಸ್ಥೆಯಲ್ಲಿವೆ. ಶಾಲೆಯ ಒಳಗೆ ಹೋಗಲು ಮುಖ್ಯ ದ್ವಾರವಿದ್ದು, ಚಾವಣಿ ತುಂಡಾಗಿ ಬಿಳುವ ಭಯದಲ್ಲಿ ಆ ದ್ವಾರ ಬಂದ್ ಮಾಡಿ ಬೇರೆ ಬಾಗಿಲಿನಿಂದ ಮಕ್ಕಳು ಶಾಲೆಯ ಒಳಗೆ ಹೋಗುತ್ತಿದ್ದಾರೆ. <br> ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಇದ್ದು, 11 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಮೊದಲು ಇಲ್ಲಿ 500 ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2021-22 ರಲ್ಲಿ 312, 2022-23 ರಲ್ಲಿ 279 ವಿದ್ಯಾರ್ಥಿಗಳಿದ್ದರೆ, 2024ನೇ ಸಾಲಿನಲ್ಲಿ 230 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆಟದ ಮೈದಾನವಿಲ್ಲ, ಕಾಂಪೌಂಡ್ ಗೋಡೆಯಿಲ್ಲ, ಗ್ರಂಥಾಲಯವಿಲ್ಲ, ಶೌಚಾಲಯವಿಲ್ಲ. ಮಕ್ಕಳಿಗೆ ಯಾವುದೇ ರೀತಿಯ ಅನುಕೂಲವಿಲ್ಲ.</p>.<p>ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತ ಬರುತ್ತಿವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಬಹುದೆಂದು ಪೋಷಕರು ಚಿಂತಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಬಡ ಪೋಷಕರು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿ ಬಡ ಕುಟುಂಬದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಪಾಲಕರು ಮನವಿ ಮಾಡಿಕೊಂಡಿದ್ದಾರೆ.</p>.<p>ಈದೀಗ ಪುರಸಭೆಗೆ ಇಂಡಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಆಡಳಿತಾಧಿಕಾರಿಯಾಗಿದ್ದು, ಈ ಶಾಲೆಯ ಸಮಸ್ಯೆ ಬಗೆಹರಿಸಿ, ಬಡ ಮಕ್ಕಳು ಓದುತ್ತಿರುವ ಈ ಶಾಲೆಯನ್ನು ರಿಪೇರಿ ಮಾಡಿಸಿ, ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಿ ಜೀವ ತುಂಬುವರೇ ಎಂದು ಕಾದು ನೋಡಬೇಕಿದೆ.</p>.<div><blockquote>ಈ ಶಾಲಾ ಕಟ್ಟಡ ಪುರಸಭೆ ಅಧೀನದಲ್ಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಈ ಕಟ್ಟಡ ದುರಸ್ತಿಗೆ ಹಣ ನೀಡಲು ಅವಕಾಶಗಳಿಲ್ಲ. ರಿಪೇರಿಗಾಗಿ ಪುರಸಭೆಗೆ ಪತ್ರ ಬರೆಯಲಾಗಿದೆ. </blockquote><span class="attribution">–ಎಸ್.ಬಿ. ಪಾಟೀಲ ಇಂಡಿ ಶಿಕ್ಷಣ ಇಲಾಖೆಯ ಇಸಿಒ</span></div>.<div><blockquote>ಶಾಲೆಯ ದುಸ್ಥಿತಿ ಬಗ್ಗೆ ಗಮನಕ್ಕೆ ಬಂದಿದೆ. ಅದರ ರಿಪೇರಿಗಾಗಿ ಪುರಸಭೆಯಿಂದ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. </blockquote><span class="attribution">–ಅಬೀದ್ ಗದ್ಯಾಳ ಪುರಸಭೆಯ ಆಡಳಿತಾಧಿಕಾರಿ ಮತ್ತು ಎಸಿ</span></div>.<div><blockquote>ಇಂಡಿ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ದುರಸ್ತಿಗೆ ಕ್ರಮ ಜರುಗಿಸಲಾಗುವುದು. </blockquote><span class="attribution">–ಮಹಾಂತೇಶ ಹಂಗರಗಿ ಪುರಸಭೆಯ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ಪುರಸಭೆ ಮತ್ತು ಶಿಕ್ಷಣ ಇಲಾಖೆಗಳ ನಡುವಿನ ಕಲಹದಿಂದಾಗಿ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಮತ್ತು ಪುರಸಭೆಯ ಸಮೀಪವೇ ಇರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ– 1 ನಿರ್ವಹಣೆ ಮತ್ತು ಅಭಿವೃದ್ದಿ ಇಲ್ಲದೇ ಪಾಳು ಬಿದ್ದಿದೆ.</p>.<p>ಇಂಡಿ ಪುರಸಭೆಯು ಶಾಲೆಯ ಕಟ್ಟಡವನ್ನು 1975 ರಲ್ಲಿ ಕಟ್ಟಿಸಿತ್ತು. ಆಗಿನ ಪುರಸಭೆಯ ಅಧ್ಯಕ್ಷ ಅಣ್ಣಪ್ಪ ದೇವರ ಅವರು ಶಿಕ್ಷಣ ಇಲಾಖೆಗೆ ಬಾಡಿಗೆಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಶಿಕ್ಷಣ ಇಲಾಖೆ ಪ್ರತಿ ವರ್ಷ ₹ 32 ಸಾವಿರ ಬಾಡಿಗೆ ಪಾವತಿ ಮಾಡುತ್ತಿದೆ. ಆದರೆ ಅಂದಿನಿಂದ ಇಂದಿನವರೆಗೆ ಪುರಸಭೆಯವರು ಈ ಕಟ್ಟಡದ ರಿಪೇರಿ ಮಾಡಿಲ್ಲ. ಈ ಬಗ್ಗೆ ಸಾರ್ವಜನಿಕರು ಕೇಳಿದರೆ ನಾವು ಕಟ್ಟಡ ಕಟ್ಟಿ ಶಿಕ್ಷಣ ಇಲಾಖೆಗೆ ನೀಡಿದ್ದೇವೆ. ಅದರ ನಿರ್ವಹಣೆಯ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು ಎಂದು ಪುರಸಭೆಯ ಅಧಿಕಾರಿಗಳು ಉತ್ತರಿಸುತ್ತಾರೆ. ಶಿಕ್ಷಣ ಇಲಾಖೆಗೆ ಕೇಳಿದರೆ ಈ ಶಾಲೆಯ ಕಟ್ಟಡ ನಮ್ಮದಲ್ಲ. ಇದು ಪುರಸಭೆಯವರದ್ದು, ನಾವು ಇದನ್ನು ಬಾಡಿಗೆಗೆ ಪಡೆದುಕೊಂಡಿದ್ದೇವೆ. ಪ್ರತಿ ವರ್ಷ ಬಾಡಿಗೆ ಕಟ್ಟುತ್ತೇವೆ. ಇದರ ನಿರ್ವಹಣೆಯನ್ನು ಪುರಸಭೆಯೇ ಮಾಡಬೇಕು ಎಂದು ಹೇಳುತ್ತಿದೆ. ಇವರಿಬ್ಬರ ನಡುವಿನ ಕಲಹದಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 270 ವಿದ್ಯಾರ್ಥಿಗಳಿಗೆ ಸೂಕ್ತ ಸೌಕರ್ಯ ದೊರೆಯದಂತಾಗಿದೆ.</p>.<p>ಈ ಶಾಲಾ ಕಟ್ಟಡದಲ್ಲಿ 16 ಕೊಠಡಿಗಳಿವೆ. ಇವುಗಳಲ್ಲಿ 12 ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಇವುಗಳಲ್ಲಿ ಕೆಲವು ಕೊಠಡಿಗಳ ಚಾವಣಿಯೇ ಬಿದ್ದಿದ್ದು, ಕೊಠಡಿಗಳ ಗೋಡೆಗಳು ಕೂಡ ಶಿಥಿಲಾವಸ್ಥೆಯಲ್ಲಿವೆ. ಶಾಲೆಯ ಒಳಗೆ ಹೋಗಲು ಮುಖ್ಯ ದ್ವಾರವಿದ್ದು, ಚಾವಣಿ ತುಂಡಾಗಿ ಬಿಳುವ ಭಯದಲ್ಲಿ ಆ ದ್ವಾರ ಬಂದ್ ಮಾಡಿ ಬೇರೆ ಬಾಗಿಲಿನಿಂದ ಮಕ್ಕಳು ಶಾಲೆಯ ಒಳಗೆ ಹೋಗುತ್ತಿದ್ದಾರೆ. <br> ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಇದ್ದು, 11 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಮೊದಲು ಇಲ್ಲಿ 500 ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2021-22 ರಲ್ಲಿ 312, 2022-23 ರಲ್ಲಿ 279 ವಿದ್ಯಾರ್ಥಿಗಳಿದ್ದರೆ, 2024ನೇ ಸಾಲಿನಲ್ಲಿ 230 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆಟದ ಮೈದಾನವಿಲ್ಲ, ಕಾಂಪೌಂಡ್ ಗೋಡೆಯಿಲ್ಲ, ಗ್ರಂಥಾಲಯವಿಲ್ಲ, ಶೌಚಾಲಯವಿಲ್ಲ. ಮಕ್ಕಳಿಗೆ ಯಾವುದೇ ರೀತಿಯ ಅನುಕೂಲವಿಲ್ಲ.</p>.<p>ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತ ಬರುತ್ತಿವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಬಹುದೆಂದು ಪೋಷಕರು ಚಿಂತಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಬಡ ಪೋಷಕರು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿ ಬಡ ಕುಟುಂಬದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಪಾಲಕರು ಮನವಿ ಮಾಡಿಕೊಂಡಿದ್ದಾರೆ.</p>.<p>ಈದೀಗ ಪುರಸಭೆಗೆ ಇಂಡಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಆಡಳಿತಾಧಿಕಾರಿಯಾಗಿದ್ದು, ಈ ಶಾಲೆಯ ಸಮಸ್ಯೆ ಬಗೆಹರಿಸಿ, ಬಡ ಮಕ್ಕಳು ಓದುತ್ತಿರುವ ಈ ಶಾಲೆಯನ್ನು ರಿಪೇರಿ ಮಾಡಿಸಿ, ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಿ ಜೀವ ತುಂಬುವರೇ ಎಂದು ಕಾದು ನೋಡಬೇಕಿದೆ.</p>.<div><blockquote>ಈ ಶಾಲಾ ಕಟ್ಟಡ ಪುರಸಭೆ ಅಧೀನದಲ್ಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಈ ಕಟ್ಟಡ ದುರಸ್ತಿಗೆ ಹಣ ನೀಡಲು ಅವಕಾಶಗಳಿಲ್ಲ. ರಿಪೇರಿಗಾಗಿ ಪುರಸಭೆಗೆ ಪತ್ರ ಬರೆಯಲಾಗಿದೆ. </blockquote><span class="attribution">–ಎಸ್.ಬಿ. ಪಾಟೀಲ ಇಂಡಿ ಶಿಕ್ಷಣ ಇಲಾಖೆಯ ಇಸಿಒ</span></div>.<div><blockquote>ಶಾಲೆಯ ದುಸ್ಥಿತಿ ಬಗ್ಗೆ ಗಮನಕ್ಕೆ ಬಂದಿದೆ. ಅದರ ರಿಪೇರಿಗಾಗಿ ಪುರಸಭೆಯಿಂದ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. </blockquote><span class="attribution">–ಅಬೀದ್ ಗದ್ಯಾಳ ಪುರಸಭೆಯ ಆಡಳಿತಾಧಿಕಾರಿ ಮತ್ತು ಎಸಿ</span></div>.<div><blockquote>ಇಂಡಿ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ದುರಸ್ತಿಗೆ ಕ್ರಮ ಜರುಗಿಸಲಾಗುವುದು. </blockquote><span class="attribution">–ಮಹಾಂತೇಶ ಹಂಗರಗಿ ಪುರಸಭೆಯ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>