<p>ವಿಜಯಪುರ: ನಾರದ ಮುನಿ ಎಂದರೆ ಅಲ್ಲಿನ ವಿಷಯ ಇಲ್ಲಿಗೆ, ಇಲ್ಲಿನ ವಿಷಯ ಅಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ ಬುದ್ಧಿವಾದದ ಮೂಲಕ ಲೋಕೋದ್ಧಾರ ಮಾಡಿದ ಶ್ರೇಯಸ್ಸು ನಾರದರಿಗೆ ಸಲ್ಲುತ್ತದೆ ಎಂದು ಸಂಜೀವ ಜೋಶಿ ಹೇಳಿದರು.</p>.<p>ಮಂಥನ ವಿಜಯಪುರ ಘಟಕದ ಆಶ್ರಯದಲ್ಲಿ ವಿಜಯಪುರದ ಶುಭಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾರದ ಜಯಂತಿ ಅವರು ಮಾತನಾಡಿದರು.</p>.<p>ಧರ್ಮದ ಪರವಾಗಿ ನಾರದರು ಸದಾ ಇದ್ದರು, ನದಿ, ಗಿಡಮರಗಳಂತೆ ಅವರ ಜೀವನ ಇತ್ತು. ನಾರದರು ಎಂದೂ ತಮಗಾಗಿ ಬದುಕಲಿಲ್ಲ, ಸಮಾಜಕ್ಕಾಗಿ ಬದುಕಿದರು ಎಂದರು.</p>.<p>ನಾರದ ಮುನಿಗಳ ಜೀವನ ಅಧ್ಯಯನ ಮಾಡಿ ಅವರ ಶ್ರೇಷ್ಠ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.</p>.<p>ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ನಾರದ ಮುನಿಗಳು ಮೂರು ಲೋಕದ ವರದಿಗಾರರಾಗಿದ್ದರು. ಒಂದು ರೀತಿ ಸರ್ವವ್ಯಾಪಿಯಾಗಿದ್ದರು, ತ್ರಿಲೋಕದ ಸುವಾರ್ತೆ ನೀಡುತ್ತಿದ್ದ ನಾರದ ಮುನಿಗಳು ಒಬ್ಬ ಶ್ರೇಷ್ಠ ಹಾಗೂ ಆದ್ಯ ಪತ್ರಕರ್ತ ಎಂದರು.</p>.<p>ನಾರದ ಮುನಿಗಳು 64 ವಿದ್ಯೆಗಳಲ್ಲಿ ಪಾರಂಗತವಾಗಿದ್ದರು. ನಾರದ ಮುನಿ ಮನುಕುಲಕ್ಕೆ ಜ್ಞಾನ ಕೊಡುವ ಶ್ರೇಷ್ಠ ವ್ಯಕ್ತಿ ಎಂದರು. </p>.<p>ನಾರದ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಪತ್ರಕರ್ತ ವಾಸುದೇವ ಹೇರಕಲ್, ಸಂಕೇತ ಬಗಲಿ, ಸಂಗನಗೌಡ ಪಾಟೀಲ, ರಘುತ್ತಮ ಅರ್ಜುಣಗಿ, ರಂಜೀತ ರಜಪೂತ, ಅಕ್ಷಯ ಪಶ್ಚಾಪೂರ, ಶ್ರೀನಿವಾಸ ಗುಜ್ರಾಲ್, ಸಂತೋಷ ಕಳ್ಳಿಗುಡ್ಡ, ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ನಾರದ ಮುನಿ ಎಂದರೆ ಅಲ್ಲಿನ ವಿಷಯ ಇಲ್ಲಿಗೆ, ಇಲ್ಲಿನ ವಿಷಯ ಅಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ ಬುದ್ಧಿವಾದದ ಮೂಲಕ ಲೋಕೋದ್ಧಾರ ಮಾಡಿದ ಶ್ರೇಯಸ್ಸು ನಾರದರಿಗೆ ಸಲ್ಲುತ್ತದೆ ಎಂದು ಸಂಜೀವ ಜೋಶಿ ಹೇಳಿದರು.</p>.<p>ಮಂಥನ ವಿಜಯಪುರ ಘಟಕದ ಆಶ್ರಯದಲ್ಲಿ ವಿಜಯಪುರದ ಶುಭಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾರದ ಜಯಂತಿ ಅವರು ಮಾತನಾಡಿದರು.</p>.<p>ಧರ್ಮದ ಪರವಾಗಿ ನಾರದರು ಸದಾ ಇದ್ದರು, ನದಿ, ಗಿಡಮರಗಳಂತೆ ಅವರ ಜೀವನ ಇತ್ತು. ನಾರದರು ಎಂದೂ ತಮಗಾಗಿ ಬದುಕಲಿಲ್ಲ, ಸಮಾಜಕ್ಕಾಗಿ ಬದುಕಿದರು ಎಂದರು.</p>.<p>ನಾರದ ಮುನಿಗಳ ಜೀವನ ಅಧ್ಯಯನ ಮಾಡಿ ಅವರ ಶ್ರೇಷ್ಠ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.</p>.<p>ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ನಾರದ ಮುನಿಗಳು ಮೂರು ಲೋಕದ ವರದಿಗಾರರಾಗಿದ್ದರು. ಒಂದು ರೀತಿ ಸರ್ವವ್ಯಾಪಿಯಾಗಿದ್ದರು, ತ್ರಿಲೋಕದ ಸುವಾರ್ತೆ ನೀಡುತ್ತಿದ್ದ ನಾರದ ಮುನಿಗಳು ಒಬ್ಬ ಶ್ರೇಷ್ಠ ಹಾಗೂ ಆದ್ಯ ಪತ್ರಕರ್ತ ಎಂದರು.</p>.<p>ನಾರದ ಮುನಿಗಳು 64 ವಿದ್ಯೆಗಳಲ್ಲಿ ಪಾರಂಗತವಾಗಿದ್ದರು. ನಾರದ ಮುನಿ ಮನುಕುಲಕ್ಕೆ ಜ್ಞಾನ ಕೊಡುವ ಶ್ರೇಷ್ಠ ವ್ಯಕ್ತಿ ಎಂದರು. </p>.<p>ನಾರದ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಪತ್ರಕರ್ತ ವಾಸುದೇವ ಹೇರಕಲ್, ಸಂಕೇತ ಬಗಲಿ, ಸಂಗನಗೌಡ ಪಾಟೀಲ, ರಘುತ್ತಮ ಅರ್ಜುಣಗಿ, ರಂಜೀತ ರಜಪೂತ, ಅಕ್ಷಯ ಪಶ್ಚಾಪೂರ, ಶ್ರೀನಿವಾಸ ಗುಜ್ರಾಲ್, ಸಂತೋಷ ಕಳ್ಳಿಗುಡ್ಡ, ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>